ಬಾವಿಯಿಂದ ಆಡನ್ನು ರಕ್ಷಿಸಲು ಇಳಿದ ಮೂವರ ಸಾವು
![ಬಾವಿಯಿಂದ ಆಡನ್ನು ರಕ್ಷಿಸಲು ಇಳಿದ ಮೂವರ ಸಾವು ಬಾವಿಯಿಂದ ಆಡನ್ನು ರಕ್ಷಿಸಲು ಇಳಿದ ಮೂವರ ಸಾವು](https://www.varthabharati.in/sites/default/files/images/articles/2016/08/3/53500406.jpg)
ಕಾನ್ಪುರ, ಆ.3: ಇಲ್ಲಿಗೆ ಸಮೀಪದ ಘಟಂಪುರ ಎಂಬಲ್ಲಿ ಬಾವಿಗೆ ಬಿದ್ದ ಕುರಿಯೊಂದನ್ನು ರಕ್ಷಿಸಲು ಬಾವಿಗೆ ಇಳಿದ ಮೂವರು ಉಸಿರುಗಟ್ಟಿ ಮೃತಪಟ್ಟಿರುವ ಸತ್ತಿರುವ ಘಟನೆ ನಡೆದಿದೆ.
ಖೆರ್ವಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತಪಟ್ಟವರನ್ನು ಶಿವಂ (25), ರಾಜೇಶ್ ಯಾದವ್ (37) ಹಾಗೂ ಸುರೇಶ್ ಯಾದವ್ ಎಂದು ಗುರುತಿಸಲಾಗಿದೆ. ಆಡು ಕೂಡಾ ಮೃತಪಟ್ಟಿದೆ. ಶಿವಂ ಅವರಿಗೆ ಸೇರಿದ ಆಡು ಆಳವಾದ ಬಾವಿಗೆ ಬಿದ್ದಿದ್ದು, ಇದನ್ನು ಎತ್ತಲು ಎಲ್ಲರೂ ಬಾವಿಗೆ ಇಳಿದಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.
ಮೊದಲು ಬಾವಿಗೆ ಇಳಿದ ಶಿವಂ, ಒಳಗಿನಿಂದ ಸಹಾಯಕ್ಕಾಗಿ ಕೂಗಿಕೊಂಡ. ಆಗ ಅವರ ಸಹೋದರ ರಾಜೇಶ್ ಯಾದವ್ ಕೆಳಕ್ಕೆ ಹೋದರು. ಅವರು ಕೂಡಾ ಪ್ರಜ್ಞೆ ತಪ್ಪಿಬಿದ್ದಾಗ ಸುರೇಶ್ ಎಂಬಾತ ಬಾವಿಗೆ ಇಳಿದರು. ಗ್ರಾಮಸ್ಥರು ಅವರನ್ನು ರಕ್ಷಿಸಲು ನಡೆಸಿದ ಪ್ರಯತ್ನ ವಿಫಲವಾದಾಗ, ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದರು. ಬಾವಿಯಿಂದ ಮೇಲಕ್ಕೆತ್ತಿ ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದರು.
Next Story