Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಪ್ರಧಾನಿ ಮೋದಿ ಅವರ ಸ್ವಾತಂತ್ರ್ಯ ದಿನದ...

ಪ್ರಧಾನಿ ಮೋದಿ ಅವರ ಸ್ವಾತಂತ್ರ್ಯ ದಿನದ ಭಾಷಣಕ್ಕೆ 125 ಕೋಟಿ ಜನರ ಐಡಿಯಾಗಳು !

ರುದ್ರಪ್ಪ ಎಂ.ರುದ್ರಪ್ಪ ಎಂ.3 Aug 2016 10:14 PM IST
share
ಪ್ರಧಾನಿ ಮೋದಿ ಅವರ ಸ್ವಾತಂತ್ರ್ಯ ದಿನದ ಭಾಷಣಕ್ಕೆ 125 ಕೋಟಿ ಜನರ ಐಡಿಯಾಗಳು !

ಪ್ರಧಾನಿ ನರೇಂದ್ರ ಮೋದಿ ಅವರು ಅದ್ಭುತ ವಾಗ್ಮಿ. ಅವರು ಮಾತಿಗೆ ನಿಂತರೆ ಕೇಳುಗರು ಮಂತ್ರ ಮುಗ್ಧರಾಗಿಬಿಡುತ್ತಾರೆ. ಅವರು ಕಟ್ಟಿ ಕೊಡುವ ಭ್ರಮೆಯ ಲೋಕದಲ್ಲಿ ತೇಲುತ್ತಾರೆ. ಅಂತಹ ಸಮ್ಮೋಹನಗೊಳಿಸುವ ವಾಕ್ಚಾತುರ್ಯ ನಮ್ಮ ಪ್ರಧಾನಿಗಳದ್ದು. ಇದೇ ಮೋಡಿಗೆ ಒಳಗಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಮತದಾರರು ಅವರಿಗೆ ಭರ್ಜರಿ ಬಹುಮತ ನೀಡಿ ಪ್ರಧಾನಿಯಾಗಿ ಮಾಡಿದರು. ಅಚ್ಛೇದಿನ್ ಗಾಗಿ ಕಾದರು, ಕಾದರು ಇನ್ನೂ ಕಾಯುತ್ತಲೇ ಇದ್ದಾರೆ. " ನನಗೆ ೬೦ ತಿಂಗಳು ಸಮಯ ಕೊಡಿ " ಎಂದು ಅವರು ಚುನಾವಣಾ ಪ್ರಚಾರ ಸಂದರ್ಭದಲ್ಲೇ ಹೇಳಿದ್ದಾರೆ. ಆದ್ದರಿಂದ ಈ ಬಗ್ಗೆ ಈಗ ಚರ್ಚೆ ಬೇಡ. 
ಆದರೆ ಇಂತಹ ಮಾತಿನ ಮಲ್ಲ ಕಳೆದೆರಡು ವರ್ಷಗಳಲ್ಲಿ ಹಲವು ಬಾರಿ ' ಐನ್ ಟೈಮಿಗೆ ' ಮಾತು ಮರೆತು ' ತಮ್ಮ ದೇಶ್ ವಾಸಿಯೊನ್ಕೋ' ಕೈ ಕೊಟ್ಟಿದ್ದಾರೆ. ದೇಶದ ಜನರನ್ನು ಕಾಡಿದ ವಿಷಯಗಳ ಬಗ್ಗೆ ಅವರು ತುಟಿ ಬಿಚ್ಚಿಲ್ಲ. 
ಅಂತಹ ಮೌನಿ ಬಾಬಾ ಈಗ ಸ್ವಾತಂತ್ರ್ಯ ದಿನಾಚರಣೆಯಂದು ಮತ್ತೆ ದೇಶದ ಜನರ ಕಿವಿಗೆ ಹೂವಿಡಲು ಹೊರಟಿದ್ದಾರೆ. ಅವರಿಗೆ ಅವತ್ತು ಮಾಡುವ ಭಾಷಣಕ್ಕೆ ಜನರು ಐಡಿಯಾ ಕೊಡಬೇಕಂತೆ. ಅವರ ಭಾಷಣ ದೇಶದ ೧೨೫ ಕೋಟಿ ಜನರ ಧ್ವನಿಯಾಗಿರಬೇಕು ಎಂದು ಅವರು ಬಯಸಿದ್ದಾರೆ. ಸಂತೋಷ. ಇದು ಅವರು ಪ್ರಾಮಾಣಿಕ ಕಾಳಜಿ ಹೌದು ಎಂದಾದರೆ. 
ದೇಶದ ಬಹುತೇಕರನ್ನು ಕಾಡುತ್ತಿರುವ ಹತ್ತು ಹಲವು ವಿಷಯಗಳ ಬಗ್ಗೆ ಅವರ ಅಭಿಪ್ರಾಯ, ವಿಚಾರಗಳನ್ನು ಕೇಳಲು ಎಲ್ಲರೂ ಇಲ್ಲಿ ಕಾತರರಾಗಿದ್ದಾರೆ. ದೇಶದಲ್ಲಿ ದಲಿತರ ವಿರುದ್ಧ ನಡೆಯುತ್ತಿರುವ ಸತತ ದೌರ್ಜನ್ಯಗಳು, ಅವರ ಮೇಲಿನ ಹಲ್ಲೆ , ಅವಮಾನದ ಪ್ರಕರಣಗಳು, ಅವರ ಪರಿವಾರದ ಗೋ ರಕ್ಷಕರು ದೇಶಾದ್ಯಂತ ನಡೆಸುತ್ತಿರುವ ಗೂಂಡಾಗಿರಿ, ಆಕಾಶಕ್ಕೆ ಹಾರಿರುವ ಬೇಳೆಯ ಬೆಲೆಗಳು, ಆದರೆ ಪಾತಾಳ ಸೇರಿರುವ ರೈತನ ಬೆಲೆ, ಹೆಚ್ಚುತ್ತಿರುವ ರೈತನ ಆತ್ಮಹತ್ಯೆಗಳು, ಕಳೆದು ಹೋಗುತ್ತಿರುವ ಸಹಿಷ್ಣುತೆಯ ವಾತಾವರಣ, ಕಾಶ್ಮೀರದಲ್ಲಿ ತಮ್ಮದೇ ಪ್ರಜೆಗಳನ್ನು ಕೊಂದು , ಕುರುಡು ಮಾಡುತ್ತಿರುವ ಸಶಸ್ತ್ರ ಪಡೆಗಳು, ಅವರ ಸಂಪುಟದ ಸದಸ್ಯರು, ಸಂಸದರು ನೀಡುತ್ತಿರುವ ಪ್ರಚೋದನಕಾರಿ, ಬೇಜವಾಬ್ದಾರಿ ಹೇಳಿಕೆಗಳು, ಅವುಗಳಿಂದ ಉಂಟಾಗುತ್ತಿರುವ ಅವಾಂತರಗಳು, ಗುಜರಾತ್ ನಲ್ಲಿ ಪಟೇಲರು , ಹರ್ಯಾಣದಲ್ಲಿ ಜಾಟರು ನಡೆಸುತ್ತಿರುವ ಗೂಂಡಾಗಿರಿಗೆ ಅಲ್ಲಿಂದ ಸರಕಾರಗಳ ಮೌನ ಸಮ್ಮತಿ ಇವೆಲ್ಲವುಗಳ ಬಗ್ಗೆ ನಮ್ಮ ಮಾನ್ಯ ಪ್ರಧಾನಿಯವರು ಕೆಂಪು ಕೋಟೆಯ ಮೇಲೆ ನಿಂತು ದೇಶವನ್ನು ಉದ್ದೇಶಿಸಿ ಮಾತನಾಡಬೇಕು ಎಂದು ಭಾರತೀಯರು ಕಾಯುತ್ತಿದ್ದಾರೆ.
ಈ ದೇಶದಲ್ಲಿ ಅಸಹಿಷ್ಣುತೆಗೆ ಅವಕಾಶವಿಲ್ಲ, ಇಲ್ಲಿ ದನದ ಹೆಸರಲ್ಲಿ ಮನುಷ್ಯರನ್ನು ಕೊಲ್ಲಲ್ಲು ಬಿಡುವುದಿಲ್ಲ, ಇಲ್ಲಿ ಅಂಬಾನಿಗೆ ಮಾತ್ರವಲ್ಲ ಸಾಮಾನ್ಯನಿಗೂ ರಕ್ಷಣೆ ನೀಡುತ್ತೇನೆ, ಎಲ್ಲರೂ ಹೊಟ್ಟೆ ತುಂಬಾ ಉಂಡು, ಮಲಗುವಂತೆ ನೋಡಿಕೊಳ್ಳುತ್ತೇನೆ,  ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆ, ದಲಿತರನ್ನು ಮುಟ್ಟಿದರೆ ಸಹಿಸೆನು ಎಂದು ಅವರು ಘರ್ಜಿಸಲಿ. 
ಮಾನ್ಯ ಪ್ರಧಾನಿಗಳೇ, ಹೇಳಿ ಈ ಬಗ್ಗೆ ಮಾತನಾಡುತ್ತೀರಿ ತಾನೇ ? 
 

My 15th Aug speech should represent the voice of 125 crore Indians. Share your ideas for the speech, on Mobile App. https://t.co/TYuxNO0R6P

— Narendra Modi (@narendramodi) July 31, 2016
share
ರುದ್ರಪ್ಪ ಎಂ.
ರುದ್ರಪ್ಪ ಎಂ.
Next Story
X