2015ರಲ್ಲಿ ಭ್ರಷ್ಟಾಚಾರಕ್ಕಾಗಿ 900 ಸರಕಾರಿ ನೌಕರರ ವಜಾ
ಹೊಸದಿಲ್ಲಿ,ಆ.3: 2015ರಲ್ಲಿ ಭ್ರಷ್ಟಾಚಾರ ಮತ್ತು ದುರ್ವರ್ತನೆಯ ಆರೋಪದಲ್ಲಿ 900 ಸರಕಾರಿ ಮತ್ತು ಸಾರ್ವಜನಿಕ ಕ್ಷೇತ್ರದ ಉದ್ಯಮಗಳ 900 ನೌಕರರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. 19,000 ನೌಕರರು ವೇತನ ಕಡಿತ, ಎಚ್ಚರಿಕೆಯಂತಹ ದಂಡನಾ ಕ್ರಮಗಳಿಗೆ ಗುರಿಯಾಗಿದ್ದಾರೆ. ವಜಾಗೊಂಡವರಲ್ಲಿ ಓರ್ವ ಐಪಿಎಸ್ ಅಧಿಕಾರಿಯೂ ಸೇರಿದ್ದಾರೆ ಎಂದು ಸಂಸತ್ತಿನಲ್ಲಿ ಇತ್ತೀಚಿಗೆ ಮಂಡಿಸಲಾದ ಕೇಂದ್ರ ಜಾಗೃತ ಆಯೋಗ(ಸಿವಿಸಿ)ದ ವಾರ್ಷಿಕ ವರದಿಯು ಹೇಳಿದೆ.
ಆದಾಯ ತೆರಿಗೆ ಆಯುಕ್ತರೋರ್ವರು ತಾತ್ಕಾಲಿಕ ವೇತನ ಕಡಿತ ಶಿಕ್ಷೆಗೆ ಗುರಿಯಾಗಿದ್ದರೆ, ದಿಲ್ಲಿ ಮಹಾನಗರ ಪಾಲಿಕೆಯ ಮಾಜಿ ನಗರ ಯೋಜನಾಧಿಕಾರಿಯ ಪಿಂಚಣಿಯಲ್ಲಿ ಕಡಿತವಾಗಿದೆ. ನಿಗದಿತ ಸಮಯದೊಳಗೆ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಆಯೋಗದ ಪ್ರಯತ್ನಗಳ ಫಲವಾಗಿ ದಂಡನೆಗಳಲ್ಲಿ ಏರಿಕೆಯಾಗಿದೆ ಎಂದು ಸರಕಾರಿ ಅಧಿಕಾರಿಯೋರ್ವರು ತಿಳಿಸಿದರು.
ಈ 20,000 ಪ್ರಕರಣಗಳಲ್ಲಿ ಅಪ್ರಾಮಾಣಿಕತೆಗಾಗಿ ಆಯೋಗದ ಶಿಫಾರಸಿನಂತೆ ದಂಡನೆಗೊಳಗಾಗಿರುವ 3,600 ಹಿರಿಯ ಅಧಿಕಾರಿಗಳೂ ಸೇರಿದ್ದಾರೆ.
Next Story





