ತೊಕ್ಕೊಟ್ಟು: ಎಸ್ಸೆಸ್ಸೆಫ್ ರಿಲೀಫ್ ಸರ್ವೀಸ್ ವತಿಯಿಂದ ರೇಷನ್ ವಿತರಣೆ
![ತೊಕ್ಕೊಟ್ಟು: ಎಸ್ಸೆಸ್ಸೆಫ್ ರಿಲೀಫ್ ಸರ್ವೀಸ್ ವತಿಯಿಂದ ರೇಷನ್ ವಿತರಣೆ ತೊಕ್ಕೊಟ್ಟು: ಎಸ್ಸೆಸ್ಸೆಫ್ ರಿಲೀಫ್ ಸರ್ವೀಸ್ ವತಿಯಿಂದ ರೇಷನ್ ವಿತರಣೆ](https://www.varthabharati.in/sites/default/files/images/articles/2016/08/3/Photo.jpg)
ಕೊಣಾಜೆ, ಆ.3: ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ವತಿಯಿಂದ ಆಝಾದಿ ಸಪ್ತಾಹದ ಅಂಗವಾಗಿ ಆ.13ರಂದು ಮೈಸೂರಿನಲ್ಲಿ ಹಮ್ಮಿಕೊಂಡ ಆಝಾಧಿ ರಾಲಿಯ ಪ್ರಚಾರ ಪ್ರಯುಕ್ತ ಬಡ ಕುಟುಂಬಗಳಿಗೆ ರೇಷನ್ ವಿತರಣೆ ಕಾರ್ಯಕ್ರಮವು ಕುಂಪಲ ವೈಟ್ಹೌಸ್ ನಲ್ಲಿ ಇತ್ತೀಚಿಗೆ ಜರಗಿತು.
ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಉಪಾಧ್ಯಕ್ಷ ಮುನೀರ್ ಅಹ್ಮದ್ ಖಾಮಿಲ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವೀಸ್ನ ಗೌರವಾಧ್ಯಕ್ಷ ಹಾಜಿ ಇಕ್ಬಾಲ್ ಕುಂಪಲ ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ಸಂಚಾಲಕ ಉಮರಬ್ಬ ಕೈರಂಗಳ ರೇಷನ್ ವಿತರಿಸಿದರು. ಸಭೆಯಲ್ಲಿ ಹನೀಪ್ ಖಿಲಿರಿಯಾ ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಕೋಶಾಧಿಕಾರಿ ಅಲ್ತಾಫ್ ಕುಂಪಲ ಸ್ವಾಗತಿಸಿ, ಸೆಕ್ಟರ್ ಕೋಶಾಧಿಕಾರಿ ಶಮೀರ್ ಸೇವಂತಿಗುಡ್ಡೆ ವಂದಿಸಿದರು.
Next Story