ಮೂಡುಬೆಳ್ಳೆ: ಬೈಕ್- ಟಿಪ್ಪರ್ ಢಿಕ್ಕಿ; ಸವಾರ ಮೃತ್ಯು
ಶಿರ್ವ, ಆ.3: ಟಿಪ್ಪರೊಂದು ಬೈಕ್ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಮೂಡುಬೆಳ್ಳೆ ಸಮೀಪದ ಗಣಪನಕಟ್ಟೆ ಕ್ರಾಸ್ ಎಂಬಲ್ಲಿ ಮಂಗಳವಾರ ನಡೆದಿದೆ.
ಮೃತರನ್ನು ಮೂಡುಬೆಳ್ಳೆಯ ಜೆರಾಲ್ಡ್ ಹಾಗೂ ಮಾರ್ಗರೇಟ್ ದಂಪತಿ ಪುತ್ರ ಜಾನ್ಸನ್ ಡಿಸೋಜ(28) ಎಂದು ಗುರುತಿಸಲಾಗಿದೆ. ಇವರು ಕೆಲಸದ ನಿಮಿತ್ತ ಮೂಡುಬೆಳ್ಳೆಗೆ ಬೈಕ್ನಲ್ಲಿ ಹೋಗುವಾಗ ಎದುರಿನಿಂದ ಬಂದ ಟಿಪ್ಪರ್ ಲಾರಿ ಢಿಕ್ಕಿ ಹೊಡೆದಿದೆ. ಪರಿಣಾಮ ರಸ್ತೆಗೆ ಬಿದ್ದ ಜಾನ್ಸನ್ ಗಂಭೀರವಾಗಿ ಗಾಯಗೊಂಡರು. ಕೂಡಲೇ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟರು ಎಂದು ತಿಳಿದು ಬಂದಿದೆ. ದುಬೈಯಲ್ಲಿ ಉದ್ಯೋಗ ಮಾಡುತ್ತಿದ್ದ ಜಾನ್ಸನ್ ಜು.31ರಂದು ಊರಿಗೆ ಬಂದಿದ್ದರು. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story