ಕಾರವಾರದಲ್ಲಿ ರೈಲು ತಾತ್ಕಾಲಿಕ ನಿಲುಗಡೆ
ಉಡುಪಿ, ಆ.3: ಕೊಂಕಣ ರೈಲು ಮಾರ್ಗದಲ್ಲಿ ಪುಣೆ ಹಾಗೂ ಎರ್ನಾಕುಲಂ ನಡುವೆ ಸಂಚರಿಸುವ ಎಕ್ಸ್ಪ್ರೆಸ್ ರೈಲಿಗೆ ಕಾರವಾರ ರೈಲು ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ತಾತ್ಕಾಲಿಕ ನಿಲುಗಡೆಗೆ ರೈಲ್ವೆ ಸಚಿವಾಲಯ ಹಸಿರು ನಿಶಾನೆ ತೋರಿಸಿದೆ. ಆ.16ರಿಂದ ಮುಂದಿನ ಆರು ತಿಂಗಳ ಕಾಲ ಈ ನಿಲುಗಡೆ ಜಾರಿಯಲ್ಲಿರುತ್ತದೆ. ವೇಳಾಪಟ್ಟಿ ಹೀಗಿದೆ. ಮಳೆಗಾಲದಲ್ಲಿ ಅಂದರೆ ಅ.31ರವರೆಗೆ: ರೈಲು ನಂ.22150: ಬೆಳಗ್ಗೆ 8:10ರಿಂದ 8:12ರವರೆಗೆ, ರೈಲು ನಂ.22149: ಸಂಜೆ 5:04ರಿಂದ 5:06ರವರೆಗೆ.
ನವೆಂಬರ್ 1ರಿಂದ ವೇಳಾಪಟ್ಟಿ: ರೈಲು ನಂ.22150: ಬೆಳಗ್ಗೆ 6:50 ರಿಂದ 6:52, ರೈಲು ನಂ.22149: ಸಂಜೆ 4:10ರಿಂದ 4:12ರವರೆಗೆ.
ಹೆಚ್ಚುವರಿ ಎಸಿ ಬೋಗಿ: ಇದೇ ವೇಳೆ ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ನಿಝಾಮುದ್ದೀನ್-ಎರ್ನಾಕುಲಂ ದುರಾಂಟೋ ಎಕ್ಸ್ ಪ್ರೆಸ್ ರೈಲಿಗೆ ತಾತ್ಕಾಲಿಕ ನೆಲೆಯಲ್ಲಿ ಆ.6ರಿಂದ ಆ.27ರವರೆಗೆ ಹೆಚ್ಚುವರಿ ಒಂದು 2 ಟಯರ್ ಎಸಿ ಕೋಚ್ನ್ನು ಸೇರ್ಪಡೆಗೊಳಿಸಲು ಉತ್ತರ ರೈಲ್ವೆ ನಿರ್ಧರಿಸಿದೆ ಎಂದು ಕೊಂಕಣ ರೈಲ್ವೆ ಪ್ರಕಟನೆ ತಿಳಿಸಿದೆ.
Next Story