ಬ್ರಹ್ಮಾವರ: ಪ್ಲೆಸೆಂಟ್ ಕಂಫರ್ಟ್ ರೆನ್ ಶುಭಾರಂಭ
![ಬ್ರಹ್ಮಾವರ: ಪ್ಲೆಸೆಂಟ್ ಕಂಫರ್ಟ್ ರೆನ್ ಶುಭಾರಂಭ ಬ್ರಹ್ಮಾವರ: ಪ್ಲೆಸೆಂಟ್ ಕಂಫರ್ಟ್ ರೆನ್ ಶುಭಾರಂಭ](https://www.varthabharati.in/sites/default/files/images/articles/2016/08/5/UD-A4 Pleasant.jpg)
ಬ್ರಹ್ಮಾವರ, ಆ.4: ಬ್ರಹ್ಮಾವರದ ಮಧುವನ ಟವರ್ಸ್ನಲ್ಲಿ ಆರಂಭಗೊಂಡಿರುವ ಪ್ಲೆಸೆಂಟ್ ಫರ್ನಿಚರ್ ಶೋರೂಂನ ನೂತನ ಶಾಖೆ ಪ್ಲೆಸೆಂಟ್ ಕಂಫರ್ಟ್ ರೆನ್ನ್ನು ಬಿ.ಪಿ.ಶಿಪ್ಪಿಂಗ್ ಕಂಪೆನಿಯ ಚೀಫ್ ಇಂಜಿನಿಯರ್ ಪ್ರಕಾಶ್ ಉಡುಪ ಗುರುವಾರ ಉದ್ಘಾಟಿಸಿದರು.
ಉತ್ತಮ ಗುಣಮಟ್ಟದ ಉತ್ಪನ್ನ, ಸಕಾರಾತ್ಮಕ ಸೇವೆಯೇ ಪ್ಲೆಸೆಂಟ್ನೊಂದಿಗೆ ಅತ್ಯುತ್ತಮವಾದ ಗ್ರಾಹಕ ಸ್ನೇಹವನ್ನು ಬೆಳೆಸಲು ಸಹಕಾರಿಯಾಗಿದೆ. ಫರ್ನಿಚರ್ ಮಾರಾಟದಲ್ಲಿ ಸುದೀರ್ಘ ಅನುಭವ ಹೊಂದಿರುವ ಸಂಸ್ಥೆಯ ನೂತನ ಮಳಿಗೆ ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಪ್ರಕಾಶ್ ಉಡುಪ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಮಹಾಬಲೇಶ್ವರ ಉಡುಪ, ಕುಂದಾಪುರದ ಶ್ರೀಮಾತಾ ಆಸ್ಪತ್ರೆಯ ಮನೋರೋಗ ತಜ್ಞ ಡಾ.ಪ್ರಕಾಶ್ ಸಿ.ತೋಳಾರ್, ಬ್ರಹ್ಮಾವರ ರೋಟರಿ ಕ್ಲಬ್ ಅಧ್ಯಕ್ಷ ಆಲ್ವಿನ್ ಅಂದ್ರಾದೆ, ಚಾಂತಾರು ಗ್ರಾಪಂ ಅಧ್ಯಕ್ಷೆ ಸರಸ್ವತಿ, ಬ್ರಹ್ಮಾವರ ಬಾರ್ಕೂರು ಲಯನ್ಸ್ ಕ್ಲಬ್ ಅಧ್ಯಕ್ಷ ವಿ.ನರೋನ್ಹ, ಲೂಯಿಸ್ ಇಲೆಕ್ಟ್ರಾನಿಕ್ಸ್ನ ರಾಕಿ ಲೂಯಿಸ್, ಕೋಟ ಮಸೀದಿ ಅಧ್ಯಕ್ಷ ಜಿ.ಮುಹಮ್ಮದ್ ಶರೀಫ್ ಉಪಸ್ಥಿತರಿದ್ದರು. ವೌಲಾನಾ ಇಮ್ದಾದುಲ್ಲಾ ಸಾಹೇಬ್ ಕಿರಾಅತ್ ಪಠಿಸಿದರು. ಪ್ಲೆಸೆಂಟ್ ಪಾಲುದಾರ ಕೆ. ಮುಹಮ್ಮದ್ ಝಹರಾನ್ ಸ್ವಾಗತಿಸಿದರು. ಪಾಲುದಾರ ಅಬ್ದುಲ್ ಬಶೀರ್ ಕೋಟ ಸ್ಮರಣಿಕೆ ನೀಡಿ, ಗೌರವಿಸಿದರು. ಪಾಲುದಾರ ಇಬ್ರಾಹೀಂ ಸಾಹೇಬ್ ಕೋಟ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು. ಪತ್ರಕರ್ತ ಸಂತೋಷ ಕೋಣಿ ಕಾರ್ಯಕ್ರಮ ನಿರೂಪಿಸಿದರು.