Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಬೆಳ್ಳಿ ತೆರೆಯೇರಿದ ‘ದಬಕ್ ದಬಾ ಐಸಾ’

ಬೆಳ್ಳಿ ತೆರೆಯೇರಿದ ‘ದಬಕ್ ದಬಾ ಐಸಾ’

ನಾನೂ ತುಳು ಸಿನಿಮಾ ನಿರ್ಮಿಸುತ್ತೇನೆ: ಕೆ.ಮಂಜು ಇಂಗಿತ

ವಾರ್ತಾಭಾರತಿವಾರ್ತಾಭಾರತಿ5 Aug 2016 11:00 AM IST
share
ಬೆಳ್ಳಿ ತೆರೆಯೇರಿದ ‘ದಬಕ್ ದಬಾ ಐಸಾ’

ಮಂಗಳೂರು, ಆ.5: ಸೀಮಿತ ಮಾರುಕಟ್ಟೆಯನ್ನು ಹೊಂದಿರುವ ತುಳು ಚಿತ್ರರಂಗದಲ್ಲಿ 511 ದಿನದ ಪ್ರದರ್ಶನದ ದಾಖಲೆಯನ್ನು ನಿರ್ಮಿಸಿದ ಪ್ರಕಾಶ್ ಪಾಂಡೇಶ್ವರ ಅವರ ಚಾಲಿಪೊಲೀಲು ಸಿನಿಮಾ ಮತ್ತು ದಬಕ್‌ದಬಾ ಐಸಾ ಸಿನಿಮಾವನ್ನು ನೋಡಿದಾಗ ನನಗೂ ತುಳು ಸಿನಿಮಾ ನಿರ್ಮಿಸುವ ಆಸಕ್ತಿ ಮೂಡುತ್ತಿದೆ. ಮುಂದಿನ ನನ್ನ ಚಿತ್ರ ತುಳು ಭಾಷೆಯಲ್ಲಿ ಮೂಡಿ ಬರಲಿದ್ದು ಪ್ರಕಾಶ್ ಪಾಂಡೇಶ್ವರ ಜೊತೆ ಗೂಡಿ ಈ ಸಿನಿಮಾ ನಿರ್ಮಿಸುತ್ತೇನೆ ಎಂದು ಬಹುಭಾಷ ಖ್ಯಾತ ನಿರ್ಮಾಪಕರಾದ ಕೆ. ಮಂಜು ತಿಳಿಸಿದರು.
ಜಯಕಿರಣ ಫಿಲಮ್ಸ್ ಲಾಂಛನದಲ್ಲಿ ಪ್ರಕಾಶ್ ಪಾಂಡೇಶ್ವರ ಅವರು ಕತೆ ಚಿತ್ರಕಥೆ ಬರೆದು ನಿರ್ಮಿಸಿ ನಿರ್ದೇಶಿಸಿರುವ ದಬಕ್‌ದಬಾ ಐಸಾ ತುಳು ಸಿನಿಮಾ ಪ್ರದರ್ಶನವನ್ನು ಸುಚಿತ್ರ ಚಿತ್ರ ಮಂದಿರದಲ್ಲಿ ಉದ್ಘಾಟಿಸಿ ಅವರು ಈ ಇಂಗಿತ ವ್ಯಕ್ತ ಪಡಿಸಿದರು.
ತುಳು ಚಿತ್ರ ರಂಗಕ್ಕೆ ಸುದೀರ್ಘ 45 ವರುಷಗಳ ಇತಿಹಾಸವಿದೆ, ಈವರೆಗೆ 70 ರಷ್ಟು ಸಿನಿಮಾ ಬಂದಿದೆ ಚಾಲಿಪೊಲೀಲು ಸಿನಿಮಾ 511 ದಿನವನ್ನು ಪೂರೈಸಿದೆ ಚಿತ್ರರಂಗಕ್ಕೆ ಇದೆಲ್ಲ ಹೊಸ ದಾಖಲೆಯೇ ಸರಿ. ನಾನು ತೆಲುಗು ಸಿನಿಮಾ ಹೊರತು ಪಡಿಸಿ ಉಳಿದೆಲ್ಲ ಭಾಷೆಯಲ್ಲಿ ಸಿನಿಮಾ ನಿರ್ಮಿಸಿದ್ದೇನೆ. ಇಂದಿನ ತುಳು ಸಿನಿಮಾ ಪರ್ವವನ್ನು ಗಮನಿಸಿದಾಗ, ಸಿನಿಮಾದಲ್ಲಿ ಪಾಂಡೇಶ್ವರ್ ತೋರಿದ ಶ್ರದ್ದೆ, ಸಿನಿಮಾದ ಅಚ್ಚುಕಟ್ಟುತನ, ಕಲಾವಿದರ ಅಭಿನಯ ಇದೆಲ್ಲ ನನಗೆ ಹೊಸ ಉತ್ಸಾಹ ನೀಡಿದೆ, ಕೇವಲ ತುಳು ಭಾಷೆಯ ಸಿನಿಮಾ ಉಳಿಯ ಬೇಕು ಬೆಳೆಯಬೇಕು ತುಳು ಸಿನಿಮಾ ಕೂಡಾ ಇತರ ಭಾಷೆಯ ಸಿನಿಮಾಕ್ಕೆ ಸರಿಸಾಟಿಯಾಗ ಬೇಕು ಎನ್ನುವ ಪ್ರಕಾಶ್ ಅವರ ಚಿಂತನೆ ನನಗೆ ಇಷ್ಟವಾಯಿತು ಎಂದು ಕೆ. ಮಂಜು ತಿಳಿಸಿದರು.
ತುಳುನಾಡಲ್ಲಿ ತುಳು ಸಿನಿಮಾ ಅಭಿಮಾನಿಗಳು ಇರುವವರೆಗೆ ಪೈರೆಸಿಯಂತಹ ಕೃತ್ಯದಿಂದ ಯಾರೂ ಏನನ್ನೂ ಸಾಧಿಸಲಾರರು, ಕನ್ನಡ ಸಿನಿಮಾ ರಂಗವೇ ಬೆರಗಾಗುವ ರೀತಿಯಲ್ಲಿ ತುಳು ಸಿನಿಮಾ ಇಂಡಸ್ಟ್ರೀ ಬೆಳೆಯುತ್ತಿದೆ ಇದು ಉತ್ತಮ ಬೆಳವಣಿಗೆ ಎಂದು ತುಳು ಚಲನಾಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಟಿ.ಎ ಶ್ರೀನಿವಾಸ್ ತಿಳಿಸಿದರು.
 ನಿರ್ಮಾಪಕ ದೇವದಾಸ್ ಪಾಂಡೇಶ್ವರ್, ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ಲ.ಕಿಶೋರ್ ಡಿ‘ಶೆಟ್ಟಿ, ಅಖಿಲಭಾರತ ತುಳು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎನ್. ಶಶಿಧರ್‌ಶೆಟ್ಟಿ, ನಿರ್ಮಾಪಕ ಆರ್, ಧನ್‌ರಾಜ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ಮೋಹನ್ ಕೊಪ್ಪಲ, ಇನ್‌ಲ್ಯಾಂಡ್ ಬಿಲ್ಡರ್ಸ್‌ ಮಾಲಕ ಸಿರಾಜ್ ಅಹಮ್ಮದ್, ಚಲನಚಿತ್ರ ನಟರುಗಳಾದ ನವೀನ್ ಡಿ‘ಪಡೀಲ್, ದೇವದಾಸ್ ಕಾಪಿಕಾಡ್, ಲಕ್ಷ್ಮಣ್ ಕುಮಾರ್ ಮಲ್ಲೂರು, ಸರೋಜಿನಿ ಶೆಟ್ಟಿ, ಚಿತ್ರದ ನಾಯಕಿ ಶೀತಲ್ ನಾಯಕ್, ಗಿರೀಶ್ ಶೆಟ್ಟಿ ಕಟೀಲು, ಸುರೇಂದ್ರ ಬಂಟ್ವಾಳ್, ಪ್ರದೀಪ್ ಆಳ್ವ, ಮಧು ಸುರತ್ಕಲ್, ಪಿವಿಆರ್ ಸಮೂಹ ಸಂಸ್ಥೆಯ ಮುಖ್ಯಸ್ಥರಾದ ಹೇಮಂತ್, ಚೇತನ್ ಆನಂದ್, ಪ್ರಮೋದ್ ಬಳ್ಳಾಲ್‌ಭಾಗ್, ಉದಯ ಪೂಜಾರಿ, ಹಿರಿಯ ನಟ ವಿ.ಜಿ ಪಾಲ್, ತಾರನಾಥ್ ಶೆಟ್ಟಿ ಬೋಳಾರ, ಕಲಾ ನಿರ್ದೇಶಕ, ತಮ್ಮ ಲಕ್ಷಣ, ರಾಜೇಶ್ ಮಂಗಳೂರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ಉಮನಾಥ್ ಕೋಟ್ಯಾನ್, ಕರ್ನೂರು ಮೋಹನ್ ರೈ, ಮುಂತಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ನರೇಶ್ ಕುಮಾರ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು.


ಪಡೀಲ್ ನಟನೆಗೆ ಶಹಬ್ಬಾಸ್ ಎಂದ ಕಾಪಿಕಾಡ್
ನವೀನ್ ಪಡೀಲ್ ರಂಗಭೂಮಿಯಲ್ಲಿ ನಗುವಿನ ಜೊತೆ ಅಳಿಸಿದ್ದನ್ನು ನೋಡಿದ್ದೇನೆ. ಆದರೆ ಸಿನಿಮಾದಲ್ಲಿ ನವೀನ್ ಅಳಿಸಿದ್ದನ್ನು ಇದೇ ಮೊದಲ ಬಾರಿಗೆ ನೋಡಿದ್ದು. ನವೀನ್ ಪಡೀಲ್ ಬದುಕಿಗೆ ದಬಕ್‌ದಬಾ ಐಸಾದ ಪಾತ್ರ ತಿರುವು ನೀಡುವುದು ನಿಶ್ಚಿತ ಎಂದು ಖ್ಯಾತ ನಿರ್ದೇಶಕ ದೇವದಾಸ್ ಕಾಪಿಕಾಡ್ ಅವರು ನವೀನ್ ಡಿ‘ಪಡೀಲ್ ಅಭಿನಯದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

12 ಥಿಯೇಟರ್‌ಗಳಲ್ಲಿ ಬಿಡುಗಡೆ
ದಬಕ್ ದಬಾ ಐಸಾ ಚಲನಚಿತ್ರವು ಮಂಗಳೂರಿನಲ್ಲಿ ಸುಚಿತ್ರ, ಬಿಗ್‌ ಸಿನೆಮಾಸ್, ಪಿವಿಆರ್, ಸಿನಿಪೊಲಿಸ್, ಕಾರ್ಕಳದಲ್ಲಿ ರಾಧಿಕಾ, ಬೆಳ್ತಂಗಡಿಯಲ್ಲಿ ಭಾರತ್, ಉಡುಪಿಯಲ್ಲಿ ಕಲ್ಪನಾ, ಪುತ್ತೂರಿನಲ್ಲಿ ಅರುಣಾ, ಬಿ.ಸಿ.ರೋಡ್‌ನಲ್ಲಿ ನಕ್ಷತ್ರ, ಮೂಡಬಿದ್ರೆಯಲ್ಲಿ ಅಮರಶ್ರೀ, ಮಣಿಪಾಲದಲ್ಲಿ ಐನಾಕ್ಸ್ ಹಾಗೂ ಬೆಂಗಳೂರಿನ ಕೋರಮಂಗಲದಲ್ಲಿ ಪಿ.ವಿ.ಆರ್‌ನಲ್ಲಿ ತೆರೆಕಂಡಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X