ಧರ್ಮಸ್ಥಳ ಗ್ರಾ.ಪಂ.ಅಧ್ಯಕ್ಷರಾಗಿ ಚಂದನ್ ಪ್ರಸಾದ್ ಕಾಮತ್ ಆಯ್ಕೆ
![ಧರ್ಮಸ್ಥಳ ಗ್ರಾ.ಪಂ.ಅಧ್ಯಕ್ಷರಾಗಿ ಚಂದನ್ ಪ್ರಸಾದ್ ಕಾಮತ್ ಆಯ್ಕೆ ಧರ್ಮಸ್ಥಳ ಗ್ರಾ.ಪಂ.ಅಧ್ಯಕ್ಷರಾಗಿ ಚಂದನ್ ಪ್ರಸಾದ್ ಕಾಮತ್ ಆಯ್ಕೆ](https://www.varthabharati.in/sites/default/files/images/articles/2016/08/6/WhatsApp-Image-2016-08-06-at-14.16.jpg)
ಬೆಳ್ತಂಗಡಿ, ಆ.6: ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ ಚಂದನ್ ಪ್ರಸಾದ್ ಕಾಮತ್ ಆಯ್ಕೆಯಾಗಿದ್ದಾರೆ.
ಗ್ರಾ.ಪಂ ಅಧ್ಯಕ್ಷರಾಗಿದ್ದ ಅಚ್ಚುತ ಪೂಜಾರಿ ಅವರ ನಿಧನದಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಬಿಜೆಪಿಗೆ ಬಹುಮತವಿರುವ ಗ್ರಾಮಪಂಚಾಯತ್ನಲ್ಲಿ ಕಾಂಗ್ರೆಸ್ ಗೆಲುವನ್ನು ಪಡೆದಿದ್ದು ಬಿಜೆಪಿಗೆ ತೀವ್ರ ಹಿನ್ನಡೆಯಾಗಿದೆ. ಗ್ರಾಮಪಂಚಾಯತು ಕಚೇರಿಯಲ್ಲಿ ಶನಿವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರಾದ ಚಂದನ್ ಪ್ರಸಾದ್ ಕಾಮತ್ ಹಾಗೂ ಬಿಜೆಪಿ ಬೆಂಬಲಿತರಾದ ಶ್ರೀನಿವಾಸ ರಾವ್ ನಾಮಪತ್ರ ಸಲ್ಲಿಸಿದ್ದರು. ಚುನಾವಣೆ ನಡೆದಾಗ ಚಂದನ್ ಅವರಿಗೆ 13 ಮತಗಳು ಹಾಗೂ ಶ್ರೀನಿವಾಸ ರಾವ್ರಿಗೆ 11 ಮತಗಳು ದೊರೆತವು.
ಗ್ರಾಮಪಂಚಾಯತ್ನಲ್ಲಿ 11 ಮಂದಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಹಾಗು 13 ಮಂದಿ ಬಿಜೆಪಿ ಬೆಂಬಲಿತ ಸದಸ್ಯರು ಇದ್ದರು. ಆದರೆ ಚುನಾವಣೆಯಲ್ಲಿ ಇಬ್ಬರು ಬಿಜೆಪಿ ಸದಸ್ಯರು ಅಡ್ಡ ಮತದಾನ ಮಾಡಿದ್ದು ಕಾಂಗ್ರೆಸ್ ಬೆಂಬಲಿತರು ಗೆಲುವನ್ನು ಪಡೆಯಲು ಸಾಧ್ಯವಾಗಿದೆ.
Next Story