ಪುದುಚೇರಿ ಸರಕಾರದ ಕೆಲಸದಲ್ಲಿ ಕಿರಣ್ಬೇಡಿ ಹಸ್ತಕ್ಷೇಪ: ಆಪ್
ಹೊಸದಿಲ್ಲಿ, ಆ.6: ಪುದುಚೇರಿಯ ರಾಜ್ಯಪಾಲೆ ಸರಕಾರದ ಕಾರ್ಯಾಚರಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ಆರೋಪಿಸಿರುವ ಆಮ್ ಆದ್ಮಿ ಪಕ್ಷವು(ಎಎಪಿ) ಕೇಂದ್ರ ಸರಕಾರವು ದಿಲ್ಲಿಯಲ್ಲಿ ಮಾಡುತ್ತಿರುವ ತಂತ್ರವನ್ನೇ ಕೇಂದ್ರಾಡಳಿತ ಪ್ರದೇಶದಲ್ಲೂ ಉಪಯೋಗಿಸುತ್ತಿದೆಯೆಂದು ವಾಗ್ದಾಳಿ ನಡೆಸಿದೆ
ಇತ್ತೀಚೆಗೆ ಪುದುಚೇರಿಯ ರಾಜ್ಯಪಾಲೆಯಾಗಿ ನೇಮಿಸಲ್ಪಟ್ಟಿರುವ ಬೇಡಿ, ಅಲ್ಲಿನ ಸರಕಾರದ ಕೆಲಸಗಳಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ. ಅವರು ಯೋಜನೆಗಳ ಕುರಿತಾಗಿ ಆದೇಶ ಹೊರಡಿಸುವಲ್ಲಿವರೆಗೆ ಮುಂದುವರಿದಿದ್ದಾರೆಂದು ಎಎಪಿ ನಾಯಕ ಸಂಜಯ್ ಸಿಂಗ್ ಆರೋಪಿಸಿದ್ದಾರೆ.
ಬೇಡಿಯವರ ವಿರುದ್ಧ ವಾಗ್ದಾಳಿ ನಡೆಸಿದ ಎಎಪಿ ಶಾಸಕ ಹಾಗೂ ದಕ್ಷಿಣ ರಾಜ್ಯಗಳಲ್ಲಿ ಪಕ್ಷದ ಪ್ರಭಾರಿ ಸೋಮನಾಥ ಭಾರ್ತಿ, ಮುಖ್ಯಮಂತ್ರಿಗಳಾಗುವ ಮಹತ್ತ್ವಾಕಾಂಕ್ಷೆಯಿದ್ದ, ಆದರೆ ಅದು ಸಾಧ್ಯವಾಗದಿರುವ ಜನರನ್ನೇ ಪ್ರಧಾನಿ ನರೇಂದ್ರ ಮೋದಿ ಲೆಫ್ಟಿನೆಂಟ್ ಗವರ್ನರ್ಗಳನ್ನಾಗಿ ನೇಮಿಸಿದ್ದಾರೆಂದು ಟೀಕಿಸಿದ್ದಾರೆ.
Next Story