ಆ.10: ಜಂತುಹುಳ ನಿರ್ಮೂಲನಾ ಕಾರ್ಯಕ್ರಮ
ಮಂಗಳೂರು, ಆ.6: ರಾಷ್ಟ್ರೀಯ ಜಂತುಹುಳ ನಿರ್ಮೂಲನಾ ದಿನಾಚರಣೆಯ ಅಂಗವಾಗಿ ದ.ಕ. ಜಿಲ್ಲೆಯಲ್ಲಿ ಆ.10ರಂದು ಜಂತುಹುಳ ನಿವಾರಣಾ ಮಾತ್ರೆ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, 3,29,234 ಮಕ್ಕಳಿಗೆ ವಿತರಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಒಂದು ವರ್ಷದಿಂದ 19 ವರ್ಷದೊಳಗಿನವರಿಗೆ ಈ ಮಾತ್ರೆಯನ್ನು ವಿತರಿಸಲಾ ಗುತ್ತಿದೆ. ಆ.10ರಂದು ಮಕ್ಕಳಿಗೆ ಮಾತ್ರೆ ನೀಡಲು ಅನನುಕೂಲವಾದವರಿಗೆ ಆ.17ರಂದು ವಿತರಿಸಲು ನಿರ್ಧರಿಸಲಾಗಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಈ ಮಾತ್ರೆಯನ್ನು ತಪ್ಪದೇ ನೀಡಲು ಹೆತ್ತವರು ಸಹಕರಿಸಬೇಕು ಎಂದರು.
ಅಂಗನವಾಡಿ ಅಥವಾ ಶಾಲೆಗಳಲ್ಲಿ ಈ ಮಾತ್ರೆಯನ್ನು ಉಚಿತವಾಗಿ ನೀಡಲಾ ಗುತ್ತಿದೆ. 1ರಿಂದ 2 ವರ್ಷದವರೆಗಿನ ಮಕ್ಕಳಿಗೆ ಅರ್ಧ ಮಾತ್ರೆಯನ್ನು ಪುಡಿ ಮಾಡಿ ಕುಡಿಸಬೇಕು. 2 ವರ್ಷ ಮೇಲ್ಪಟ್ಟವರು ಒಂದು ಮಾತ್ರೆ ತೆಗೆದು ಕೊಳ್ಳಬೇಕು. ಸರಕಾರಿ ಮತ್ತು ಅನುದಾನಿತ ಎಲ್ಲ ಶಾಲಾ ಮಕ್ಕಳಿಗೆ ಈ ಮಾತ್ರೆ ಯನ್ನು ಪೂರೈಸಲಾಗುತ್ತಿದೆ. ಖಾಸಗಿ ಶಾಲೆಯವರು ಬೇಡಿಕೆ ತಕ್ಕಂತೆ ಅವರಿಗೆ ಮಾತ್ರೆ ಯನ್ನು ಒದಗಿಸಲಾಗುವುದು. ಹುಳ ಬಾಧೆ ಇಲ್ಲದಿದ್ದರೂ ಈ ಮಾತ್ರೆಯನ್ನು ತೆಗೆದು ಕೊಳ್ಳಬಹುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಆರೋಗ್ಯ ಇಲಾಖಾಧಿಕಾರಿಗಳಾದ ಡಾ.ಸಿಕಂದರ್ ಪಾಷಾ, ಅರುಣ್, ರಾಜೇಶ್ ಉಪಸ್ಥಿತರಿದ್ದರು.