ನಕಲಿ ಗೋರಕ್ಷಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ: ರಾಜ್ಯಗಳಿಗೆ ಮೋದಿ ಸೂಚನೆ
ನಿಮಗೆ ಸಮಸ್ಯೆ ಇದ್ದರೆ, ಯಾರ ಮೇಲಾದರೂ ದಾಳಿ ಮಾಡುವ ಮನಸ್ಸಾದರೆ ನನ್ನ ಮೇಲೆ ದಾಳಿ ನಡೆಸಿ. ದಲಿತ ಸೋದರರ ಮೇಲೆ ನಡೆಸಬೇಡಿ.
ನರೇಂದ್ರ ಮೋದಿ, ಪ್ರಧಾನಿ
ಗಜ್ವೆಲ್, ಆ.7: ಸ್ವಯಂಘಷಿತ ‘ಗೋ ರಕ್ಷಕರ’ ವಿರುದ್ಧ ತನ್ನ ಆಕ್ರೋಶವನ್ನು ನರೇಂದ್ರ ಮೋದಿ ರವಿವಾರವೂ ಮುಂದುವರಿಸಿದ್ದಾರೆ.
ದೇಶ ಹಾಗೂ ಸಮಾಜವನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ನಕಲಿ ಗೋರಕ್ಷಕರ ಬಗ್ಗೆ ಎಚ್ಚರಿಕೆಯಿಂದಿರುವಂತೆ ಜನರಿಗೆ ಕರೆ ನೀಡಿದ್ದಾರೆ. ಅಂತಹವರನ್ನು ಕಠಿಣವಾಗಿ ಶಿಕ್ಷಿಸುವಂತೆ ಅವರು ರಾಜ್ಯಗಳಿಗೆ ಸೂಚಿಸಿದ್ದಾರೆ.
ಗೋವನ್ನು ದೇಶದ ಸಂಪತ್ತು ಎಂದು ವ್ಯಾಖ್ಯಾನಿಸಿದ ಮೋದಿ, ಬೆರಳೆಣಿಕೆಯಷ್ಟು ಜನರು ಗೋ ರಕ್ಷಣೆಯ ಹೆಸರಲ್ಲಿ ಸಮಾಜದಲ್ಲಿ ಉದ್ವಿಗ್ನತೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಇಂತಹ ನಕಲಿ ಗೋರಕ್ಷಕರ ಕುರಿತು ಎಚ್ಚರದಿಮದಿರುವಂತೆ ದೇಶವಾಸಿಗಳಿಗೆಲ್ಲ ತಾನು ಹೇಳ ಬಯಸುತ್ತೇನೆಂದು ತಿಳಿಸಿದ್ದಾರೆ.
ಸಾಮಾಜಿಕ ಹಂದರವನ್ನು ನಾಶಗೊಳಿಸಬಯಸುಬಬರನ್ನು ಗುರುತಿಸಿ, ಅವರ ವಿರುದ್ಧ ತೀವ್ರ ಕ್ರಮ ಕೈಗೊಳ್ಳುವಂತೆ ಅವರು ರಾಜ್ಯಗಳಿಗೆ ಸೂಚಿಸಿದ್ದಾರೆ.
‘‘ಬೆರಳೆಣಿಕೆಯ ಜನರು ಸ್ಥಾಪಿತ ಹಿತಾಸಕ್ತಿಯಿಂದ ನಿಮ್ಮ ಉತ್ತಮ ಕೆಲಸ ಹಾಳಾಗುವುದಕ್ಕೆ ಅವಕಾಶ ನೀಡಬಾರದು’’ ಎಂದು ಮೋದಿ, ಪ್ರಧಾನಿಯಾದ ಬಳಿಕ ತೆಲಂಗಾಣದ ಪ್ರಥಮ ಭೇಟಿಯ ವೇಳೆ ಸಾರ್ವಜನಿಕ ಸಮಾರಂಭವೊಂದರಲ್ಲಿ ಕರೆ ನೀಡಿದ್ದಾರೆ.
ಂತಹ ಜನರ ಕುತ್ಸಿತ ಯೋಜನೆ ಯಶಸ್ವಿಯಾಗದಂತೆ ಅವರನ್ನು ಬಯಲಿಗೆಳೆಯುವ ಅಗತ್ಯವಿದೆ. ಭಾರತವು ವಿವಿಧತೆಯ ದೇಶವಾಗಿದೆ. ದೇಶದ ಏಕತೆ ಮತ್ತು ಅಖಂಡತೆಯ ರಕ್ಷಣೆ ನಮ್ಮ ಪ್ರಾಥಮಿಕ ಹೊಣೆಯಾಗಬೇಕು. ಅದರ ಈಡೇರಿಕೆಗಾಗಿ ಎಲ್ಲ ದೇಶವಾಸಿಗಳು ಗೋವುಗಳನ್ನು ರಕ್ಷಿಸಿ ಸೇವೆ ಮಾಡಬೇಕು. ಅಂತಹ ಸೇವೆ ರಾಷ್ಟ್ರೀಯ ಸಂಪತ್ತನ್ನು ವೃದ್ಧಿಸುತ್ತದೆ. ಅದು ದೇಶಕ್ಕೆ ಸಮಸ್ಯೆ ಸೃಷ್ಟಿಸುವುದಿಲ್ಲವೆಂದು ಮೋದಿ ಹೇಳಿದ್ದಾರೆ.