ಕಡಬ: ಬೈಕ್ ಢಿಕ್ಕಿ - ಪಾದಚಾರಿಗೆ ಗಾಯ
ಕಡಬ,ಆ.7: ಬೈಕೊಂದು ಢಿಕ್ಕಿ ಹೊಡೆದು ಪಾದಚಾರಿಯೋರ್ವರು ಗಾಯಗೊಂಡ ಘಟನೆ ಭಾನುವಾರ ಮರ್ಧಾಳ ಸಮೀಪದ ನೆಕ್ಕಿತ್ತಡ್ಕ ಎಂಬಲ್ಲಿ ನಡೆದಿದೆ. ಬೈಕ್ ಸವಾರ ಸುಂಕದಕಟ್ಟೆ ನಿವಾಸಿ ಹಸೈನಾರ್ ಹಾಗೂ ಪಾದಚಾರಿ ಕಲ್ಲೇರಿ ನಿವಾಸಿ ಯಾಕೂಬ್ ಎಂಬವರ ಕಾಲು ಮುರಿತಕ್ಕೊಳಗಾಗಿದ್ದು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿದ್ದಾರೆ.
Next Story