ಗಣಪತಿಯವರ ಮಂಗಳೂರಿನ ಮನೆಗೆ ಸಿಐಡಿ ಡಿಜಿಪಿ ಸೋನಿಯಾ ನಾರಂಗ್ ಭೇಟಿ
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ
![ಗಣಪತಿಯವರ ಮಂಗಳೂರಿನ ಮನೆಗೆ ಸಿಐಡಿ ಡಿಜಿಪಿ ಸೋನಿಯಾ ನಾರಂಗ್ ಭೇಟಿ ಗಣಪತಿಯವರ ಮಂಗಳೂರಿನ ಮನೆಗೆ ಸಿಐಡಿ ಡಿಜಿಪಿ ಸೋನಿಯಾ ನಾರಂಗ್ ಭೇಟಿ](https://www.varthabharati.in/sites/default/files/images/articles/2016/08/8/Still0808_00004.jpg)
ಮಂಗಳೂರು, ಆ.8: ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಸಿಐಡಿ ತಂಡ ಮಂಗಳೂರಿನ ಬಿಜೈ ನ್ಯೂರೋಡ್ನಲ್ಲಿರುವ ಎಂ.ಕೆ.ಗಣಪತಿ ಮನೆಯಲ್ಲಿ ವಿಚಾರಣೆ ನಡೆಸಿತು.
ಸಿಐಡಿ ಡಿಐಜಿ ಸೋನಿಯಾ ನಾರಂಗ್ ಮತ್ತು ಎಸ್ ಪಿ ಕುಮಾರಸ್ವಾಮಿ ನೇತೃತ್ವದ ಮೂವರ ತಂಡ ಸೋಮವಾರ ಪೂರ್ವಾಹ್ನ 11:30 ರಿಂದ ಸಂಜೆ 6 ಗಂಟೆಯವರೆಗೆ ಮನೆಯಲ್ಲಿ ತನಿಖೆ ನಡೆಸಿದೆ.ಆತ್ಮಹತ್ಯೆಗೈದ ಎಂ.ಕೆ.ಗಣಪತಿ ಅವರ ಪತ್ನಿ ಮತ್ತು ಮಕ್ಕಳನ್ನು ಸೋಮವಾರ ಏಳು ಗಂಟೆಗಳ ಕಾಲ ತೀವ್ರ ವಿಚಾರಣೆ ನಡೆಸಿದ ಸಿಐಡಿ ತಂಡ ಮಂಗಳವಾರ ಕೂಡಾ ವಿಚಾರಣೆಯನ್ನು ಮುಂದುವರೆಸುವ ಸಾಧ್ಯತೆಯಿದೆ.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನಿಡಲು ನಿರಾಕರಿಸಿದ ಸಿಐಡಿ ಡಿಐಜಿ ಸೋನಿಯಾ ನಾರಂಗ್ ತನಿಖೆ ಪೂರ್ಣಗೊಂಡ ನಂತರ ಎಲ್ಲವನ್ನು ತಿಳಿಸಲಾಗುವುದು ಎಂದು ಹೇಳಿದರು.
Next Story