ಯೆನೆಪೊಯ ಆಸ್ಪತ್ರೆಯ ಅರಿವಳಿಕೆ ತಜ್ಞ ಡಾ. ಸತೀಶ್ಚಂದ್ರ ಜೈನ್ರಿಗೆ ಬೀಳ್ಕೊಡುಗೆ
![ಯೆನೆಪೊಯ ಆಸ್ಪತ್ರೆಯ ಅರಿವಳಿಕೆ ತಜ್ಞ ಡಾ. ಸತೀಶ್ಚಂದ್ರ ಜೈನ್ರಿಗೆ ಬೀಳ್ಕೊಡುಗೆ ಯೆನೆಪೊಯ ಆಸ್ಪತ್ರೆಯ ಅರಿವಳಿಕೆ ತಜ್ಞ ಡಾ. ಸತೀಶ್ಚಂದ್ರ ಜೈನ್ರಿಗೆ ಬೀಳ್ಕೊಡುಗೆ](https://www.varthabharati.in/sites/default/files/images/articles/2016/08/8/yenepoya.jpg)
ಮಂಗಳೂರು,ಆ.8:ನಗರದ ಹಿರಿಯ ಅರವಳಿಕೆ ತಜ್ಞ ಡಾ. ಸತೀಶ್ ಚಂದ್ರ ಜೈನ್ ಮಂಗಳೂರಿನ ದೇರಳಕಟ್ಟೆಯಲ್ಲಿರುವ ಯೆನೆಪೊಯ ಮೆಡಿಕಲ್ ಕಾಲೇಜಿನ ಆಸ್ಪತ್ರೆಯ ಅರವಳಿಕೆ ವಿಭಾಗದಲ್ಲಿ 16 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿ ಇತ್ತೀಚೆಗೆ ವೃತ್ತಿ ಜೀವನಕ್ಕೆ ವಿದಾಯ ಕೋರಿದ್ದಾರೆ. ಅವರು ಮಂಗಳೂರು ನಗರದ ಪ್ರಖ್ಯಾತ ಹಾಗು ಅತಿ ಹಿರಿಯ ಅರವಳಿಕೆ ತಜ್ಞರಲ್ಲಿ ಒಬ್ಬರಾಗಿದ್ದಾರೆ.
ಇತ್ತೀಚೆಗೆ ಆಸ್ಪತ್ರೆಯಲ್ಲಿ ನಡೆದ ಸಮಾರಂಭದಲ್ಲಿ ಯೆನೆಪೊಯ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಗುಲಾಂ ಜಿಲಾನಿ ಖಾದ್ರಿ, ಅರವಳಿಕೆ ವಿಭಾಗದ ಮುಖ್ಯಸ್ಥ ಡಾ. ಪದ್ಮನಾಭ ಎಸ್, ಹಿರಿಯ ಪ್ರಾಧ್ಯಾಪಕರಾದ ಡಾ.ಹರೀಶ್ ಹೆಗ್ಡೆ, ಡಾ. ಮಲ್ಲಿಕಾರ್ಜುನ, ಡಾ. ಅಬ್ರಹಾಂ, ಡಾ. ವಸಂತ,ಡಾ. ಹಬೀಬ್ ರೆಹಮಾನ್,ಡಾ.ಮೇಘನಾ ಮುಕುಂದ್, ಕಿರಿಯ ಪ್ರಾಧ್ಯಾಪಕ ವೃಂದ, ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳು, ಶಸ್ತ್ರ ಚಿಕಿತ್ಸಾ ಕೊಠಡಿಯ ದಾದಿಯರು ಮತ್ತು ಟೆಕ್ನಿಶಿಯನ್ ಉಪಸ್ಥಿತರಿದ್ದು ಅವರಿಗೆ ವಿದಾಯವನ್ನು ಕೋರಿದರು.
ಡಾ. ಶಿಲ್ಪಾಭಟ್ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಅನಂತ ಪ್ರಸಾದ್ ವಂದಿಸಿದರು.