ದಿಲ್ಲಿಯ ಪಂಚತಾರಾ ಹೊಟೇಲುಗಳಲ್ಲಿ ಗೋಮಾಂಸ ನೀಡುವುದು ಪ್ರಧಾನಿಗೆ ಗೊತ್ತಿಲ್ಲವೇ ?
ನರೇಂದ್ರ ಮೋದಿಗೆ ನರೇಂದ್ರಾನಂದ ಸ್ವಾಮೀ ಪ್ರಶ್ನೆ
ಹೊಸದಿಲ್ಲಿ, ಆ. 8 : ಗೋರಕ್ಷಕರ ಗೂಂಡಾಗಿರಿಯನ್ನು ಕಟುವಾಗಿ ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಕಾಶಿಯ ಶಂಕರಾಚಾರ್ಯ ಸ್ವಾಮೀ ನರೇಂದ್ರಾನಂದ್ ಅವರು ತೀಕ್ಷ್ಣವಾಗಿ ವಿರೋಧಿಸಿದ್ದಾರೆ.
ಮೋದಿಯವರ ಮಾತಿನಿಂದ ಗೋಹತ್ಯೆ ಮಾಡುವವರಿಗೆ ಪ್ರೋತ್ಸಾಹ ಹಾಗು ಆರ್ಥಿಕ ಲಾಭ ಆಗಲಿದೆ. ದಿಲ್ಲಿಯ ಪಂಚತಾರಾ ಹೊಟೇಲುಗಳಲ್ಲಿ ಗೋಮಾಂಸವನ್ನು ಮಾರುತ್ತಿರುವುದು ಪ್ರಧಾನಿಯವರಿಗೆ ಗೊತ್ತಿಲ್ಲವೇ ? ಪ್ರಧಾನಿಯವರ ಹೇಳಿದೆ ಅಪಾಯಕಾರಿಯಾಗಿದೆ ಎಂದವರು ಕೇಳಿದ್ದಾರೆ.
"ಗೋಸಂರಕ್ಷಣೆಯ ವಿಷಯದಲ್ಲಿ ಅತಿಹೆಚ್ಚು ಮಾತನಾಡುವ ವಿ ಹಿಂಪ , ಗೋ ಸಂವರ್ಧನಾ ಪರಿಷತ್ ಹಾಗು ಬಜರಂಗದಳದವರೇ ಪ್ರಧಾನಿಯವರ ಪ್ರಕಾರ ಅಂಗಡಿ ನಡೆಸುತ್ತಿದ್ದಾರೆಯೇ" ಎಂದು ಅವರು ಪ್ರಶ್ನಿಸಿದ್ದಾರೆ. ಪ್ರಧಾನಿ ಹೇಳಿದಂತೆ ಗೋರಕ್ಷಕರು ಇಲ್ಲಿ ಅಂಗಡಿ ನಡೆಸುತ್ತಿಲ್ಲ. ಅವರು ತಮ್ಮ ಪ್ರಾಣ ಒತ್ತೆ ಇಟ್ಟು ಗೋರಕ್ಷಣೆ ಮಾಡುತ್ತಿದ್ದಾರೆ ಎಂದು ಅವರು ತಿರುಗೇಟು ನೀಡಿದ್ದಾರೆ.
" ಪಂಜಾಬ್ ನಲ್ಲಿ ಗೋವುಗಳ ಸ್ತನಗಳಿಗೆ ಗಾಳಿ ಹಾಗು ಹಾಲು ತೂರಿಸಲಾಗುತ್ತಿದೆ. ಇದು ಪ್ರಧಾನಿಯವರಿಗೆ ಕಾಣುವುದಿಲ್ಲವೇ ? ಇದು ಗೋವುಗಳ ದೇಶ. ಇಲ್ಲಿ ಗೋವುಗಳ ರಕ್ಷಣೆ ಆಗಲೇಬೇಕು . ತಪ್ಪು ಮಾಡಿದವರ ವಿರುದ್ಧ ಕ್ರಮವಾಗಲಿ ಎಂದವರು ಹೇಳಿದ್ದಾರೆ.