ಕಾರ್ಕಳ: ಉಡುಪಿ ಜಿಲ್ಲಾಧಿಕಾರಿಗೆ ‘ಈಡಿಯಟ್’ ಎಂದ ಪುರಸಭಾ ಸದಸ್ಯ!
![ಕಾರ್ಕಳ: ಉಡುಪಿ ಜಿಲ್ಲಾಧಿಕಾರಿಗೆ ‘ಈಡಿಯಟ್’ ಎಂದ ಪುರಸಭಾ ಸದಸ್ಯ! ಕಾರ್ಕಳ: ಉಡುಪಿ ಜಿಲ್ಲಾಧಿಕಾರಿಗೆ ‘ಈಡಿಯಟ್’ ಎಂದ ಪುರಸಭಾ ಸದಸ್ಯ!](https://www.varthabharati.in/sites/default/files/images/articles/2016/08/8/8kp4.jpg)
ಕಾರ್ಕಳ, ಆ.8: ಬಂಡೀಮಠ ಬಸ್ಸು ನಿಲ್ದಾಣ ಸಮಾನ ಬಳಕೆಯ ಬಗ್ಗೆ ಉಡುಪಿಗಾಗಮಿಸುವ ಯಾವುದೇ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳುವುದಿಲ್ಲ. ಕಾರ್ಕಳದ ಅಭಿವೃದ್ದಿಗೆ ಹಿನ್ನಡೆ ಉಂಟಾಗುವಂತೆ ಮಾಡಿದ್ದಾರೆ. ಜಿಲ್ಲಾಧಿಕಾರಿಗಳು ಈಡಿಯೇಟ್ ಎಂದು ಮುಹಮ್ಮದ್ ಶರೀಫ್, ಬೇಕಾದರೆ ನನ್ನ ಮೇಲೆ ಕೇಸು ದಾಖಲಿಸಿ ಎಂದು ಸರಕಾರಿ ಸೊತ್ತಿಗೆ ಹಾನಿ ಮಾಡಲು ತೆರಳಿ ಬಳಿಕ ಮುಖ್ಯಾಧಿಕಾರಿಗಳ ಮುಂದೆ ಧರಣಿ ನಡೆಸಿದ್ದಾರೆ.
ಸೋಮವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ನಗರದ ರಸ್ತೆ ಅಗಲಿಕರಣ, ಚರಂಡಿಯ ಪುಟ್ಪಾತ್ ಸೇರಿದಂತೆ ಬಂಡೀಮಠ ಹಾಗೂ ಪ್ರಸ್ತುತ ಬಸ್ ನಿಲ್ದಾಣದ ಸಮಾನ ಬಳಕೆ ಕುರಿತು ವಿಚಾರವನ್ನು ಪ್ರಸ್ತಾಪಿಸಿದರು.
ಭೂ ಸ್ವಾಧೀನಕ್ಕೆ ಅನುಮತಿ ನೀಡದೆ ಕಾರ್ಕಳವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯಲು ಜಿಲ್ಲಾಧಿಕಾರಿಗಳು ನಿರ್ಲಕ್ಷ ತೋರಿಸುತ್ತಿದ್ದಾರೆ. ಕಾರ್ಕಳ ಇನ್ನೇನು ಅಭಿವೃದ್ದಿಯಾಗುತ್ತದೆ ಎನ್ನುವಷ್ಟರಲ್ಲಿ ಜಿಲ್ಲಾಧಿಕಾರಿಗಳು ವರ್ಗವಾಗುತ್ತಿದ್ದಾರೆ ಎಂದು ಈ ಸಂದಭರ್ದಲ್ಲಿ ಸದಸ್ಯ ಅಶ್ಫಾಕ್ ಅಹ್ಮದ್ ಮುಹಮ್ಮದ್ ಶರೀಫ್ರ ಪರವಾಗಿ ಮಾತನಾಡಿದರು.
ಸಮಸ್ಯೆಗೆ ಪರಿಹಾರ ಕೂಡಲೇ ಸೂಚಿಸುವಂತೆ ಪಟ್ಟು ಹಿಡಿದು ಧರಣಿ ನಡೆಸಿದರು. ಈ ಸಂದರ್ಭ ಮುಖ್ಯಾಧಿಕಾರಿ ಮಾತನಾಡಿ ಕಾರ್ಕಳದ ಪ್ರಸ್ತುತ ಸಮಸ್ಯೆಗಳ ಕುರಿತು ಮನವಿ ಮಾಡೋಣ, ದಿನಾಂಕ ನಿಗದಿಪಡಿಸಿ ಜಿಲ್ಲಾಧಿಕಾರಿ ಬಳಿ ತೆರಳಿ ಸಮಸ್ಯೆಗಳನ್ನು ಹೇಳಿಕೊಳ್ಳೋಣ ಎಂದು ಸಮಾಧಾನಿಸಿದರು.
ನಕಲಿ ಟ್ರಸ್ಟ್ ಗಳು ಅಲ್ಲಲ್ಲಿ ಹುಟ್ಟಿಕೊಳ್ಳುತ್ತಿವೆ. ಟ್ರಸ್ಟ್ ಪುರಸಭೆಯ ಶೇ.3ರ ನಿಧಿಯಲ್ಲಿ ಸಹಕರಿಸುವಂತೆ ಹೊಸ ಸಂಸ್ಥೆಯ ಹೆಸರು ಬಂದಿದೆ. ಆ ಸಂಸ್ಥೆಯನ್ನು ವಿಚಾರಿಸಿಕೊಂಡು ಅನುದಾನ ನೀಡಿ ಎಂದು ಸರ್ವ ಸದಸ್ಯರು ವಿನಂತಿಸಿಕೊಂಡರು. ಶುಭದ ರಾವ್ ಮಾತನಾಡಿ, ನಕಲಿ ಸಂಸ್ಥೆಗಳಿಂದ ದೇಶ ಹಾಳಾಗುತ್ತಿದೆ ಎಂದು ದೇಶದ ಪ್ರಧಾನ ಮಂತ್ರಿಯವರು ಹೇಳುತ್ತಿದ್ದಾರೆ. ಆದ್ದರಿಂದ ಈ ಸಂಸ್ಥೆಗಳ ಬಗ್ಗೆ ವಿಚಾರಿಸಿ ಅನುದಾನ ನೀಡಿ ಎಂದರು. ಸ್ಥಾಯಿ ಸಮಿತಿಯಲ್ಲಿ ಸಣ್ಣಪುಟ್ಟ ಕೆಲಸ ನಿರ್ವಹಣೆಗೆ ಮಾತ್ರ ಸೀಮಿತ ಅನುದಾನವಿದೆ. ಆದರೆ ಅದನ್ನು ಕೂಡಾ ನಿರ್ವಹಿಸಲು ಯಾವುದೇ ಗುತ್ತಿಗೆದಾರರು ಮುಂದೆ ಬರುತ್ತಿಲ್ಲ. ಕೇಳಿದರೆ ಈ ಹಿಂದಿನ ಬಿಲ್ಲು ಪಾವತಿಗೆ ಬಾಕಿಯಿದೆ ಎನ್ನುವ ಉತ್ತರ ಬರುತ್ತಿದೆ. ಹೀಗಾದರೆ ಸ್ಥಾಯಿ ಸಮಿತಿಯಿಂದ ಯಾವ ನ್ಯಾಯ ಒದಗಿಸಲು ಸಾಧ್ಯ ? ಎಂದು ಪ್ರಶ್ನಿಸಿದರು. ಮುಖ್ಯಾಧಿಕಾರಿ ರಾಯಪ್ಪ ಮಾತನಾಡಿ, ಮುಂದಿನ ಬಜೆಟ್ ಸಿದ್ದಪಡಿಸುವ ಸಂದರ್ ಸ್ಥಾಯಿ ಸಮಿತಿಗೆ ಪ್ರತ್ಯೇಕ ಅನುದಾನವನ್ನು ಕಾದಿರಿಸುವ ಬಗ್ಗೆ ನಿರ್ಣಯ ಕೈಗೊಳ್ಳುವ ಎಂದರು.
ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರಿಯಾ ರಾಜೇಂದ್ರ ಮಾತನಾಡಿ, ನನ್ನ ಸ್ಥಾಯಿ ಸಮಿತಿಯ ಅಧ್ಯಕ್ಷತೆಯ ಸಂದರ್ಭ ಕಾಮಗಾರಿ ಬಿಲ್ಲುಗಳಿಗೆ ಸಹಿ ಹಾಕಿರಲಿಲ್ಲ. ಅದು ಮಂಜೂರಾಗಿದೆ ಎಂದು ಇದೇ ಸಂದಭರ್ ಅಸಮಾಧಾನ ವ್ಯಕ್ತಪಡಿಸಿದರು. ಶಶಿಕಲಾ ರಾಣೆ ಮತ್ತು ವಿವೇಕಾನಂದ ಶೆಣೈ ಮಾತನಾಡಿ, ಸದ್ದರ ಓಣಿ ಅಭಿವೃದ್ದಿಯ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು. ಕಾರ್ಕಳ ಮಾರ್ಕೆಟ್ ರಸ್ತೆಯಲ್ಲಿರುವ ಶೌಚಾಲಯದ ನೀರು ಹರಿದು ಸುತ್ತಲಿನ ಪರಿಸರವೆಲ್ಲಾ ಕೊಳಕು ನಾರುತ್ತಿದ್ದರೂ ಅದರ ಕುರಿತು ಕ್ರಮ ಕೈಗೊಂಡಂತೆ ಕಾಣಿಸುತ್ತಿಲ್ಲ. ಕೋಟಿಗಟ್ಟಲೆ ಖರ್ಚು ಮಾಡಿ ಕಟ್ಟಿಸಿದ ಮಾರುಕಟ್ಟೆ ಸಂಕೀರ್ಣದಲ್ಲಿ ಪುರುಷರು ಮತ್ತು ಮಹಿಳೆಯರು ಒಂದೇ ಶೌಚಾಲಯವನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇದೆ ಎಂದು ಪ್ರಕಾಶ್ ರಾವ್ ಅಸಮಾಧಾನ ವ್ಯಕ್ತ ಪಡಿಸಿದರು.
ಮುಖ್ಯಾಧಿಕಾರಿ ರಾಯಪ್ಪಮಾತನಾಡಿ, ವ್ಯವಸ್ಥೆ ಕಲ್ಪಿಸಿದ ಸಂದರ್ಭ ಅದನ್ನು ಹಾಳುಗೆಡಹುವ ಕೆಲಸವನ್ನು ಅಲ್ಲಿನ ವ್ಯಾಪಾರಿಗಳೇ ಮಾಡುತ್ತಿದ್ದಾರೆ ಎಂದು ದೂರಿದರು. ಮಾರುಕಟ್ಟೆಗೆ ಸಿಸಿ ಕ್ಯಾಮರಾ ಅಳವಡಿಸುವ ಭರವಸೆ ಮಾತ್ರ ದೊರೆತಿದ್ದು, ಅದು ಅನುಷ್ಠಾನವಾಗಿಲ್ಲ ಎಂದು ಪ್ರತಿಮಾ ಮೋಹನ್ ದೂರಿದರು.
ಪುರಸಭಾಧ್ಯಕ್ಷೆ ಅನಿತಾ ಅಂಚನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಗಿರಿಧರ್ ನಾಯಕ್, ಸ್ಥಾಯಿ ಸಮಿತಿ ಅಧ್ಯಕ್ಷ ನವೀನ್ ದೇವಾಡಿಗ, ಮುಖ್ಯಾಧಿಕಾರಿ ರಾಯಪ್ಪ ಉಪಸ್ಥಿತರಿದ್ದರು.