ಇಂದಿನಿಂದ ಸ್ತಬ್ಧಚಿತ್ರಗಳ ರಥಯಾತ್ರೆ
ಮಂಗಳೂರು, ಆ.8: ಕರ್ನಾಟಕ ಸರಕಾರದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಅರಸು ಅವರ ಯೋಜನೆಗಳು ಮತ್ತು ಸರಕಾರದ ಸಾಧನೆಗಳ ಕುರಿತಂತೆ ಜಾಗೃತಿ ಮೂಡಿಸಲು ಸ್ತಬ್ಧಚಿತ್ರಗಳ ರಥಯಾತ್ರೆಗಳನ್ನು ಏಕಕಾಲದಲ್ಲಿ ರಾಜ್ಯದ 4 ವಿಭಾಗಗಳಲ್ಲಿ ಆಯೋಜಿಸಲಾಗಿದೆ. ರಥಯಾತ್ರೆಯು ಆ.9ರಂದು ಅಪರಾಹ್ನ 3 ಗಂಟೆಗೆ ಮಂಗಳೂರು ತಲುಪಲಿದೆ. ಸಂಜೆ 6 ಗಂಟೆಯವರೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಹಯೋಗದೊಂದಿಗೆ ಸುರತ್ಕಲ್ ಮತ್ತು ಕದ್ರಿ ಜಂಕ್ಷನ್ನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ರಂದು ಪೂರ್ವಾಹ್ನ ಮಂಗಳೂರಿನಿಂದ ಪುತ್ತೂರು ಹಾಗೂ ಸುಳ್ಯಕ್ಕೆ ತೆರಳಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಿದೆ. ಆ.11ರಂದು ಪೂರ್ವಾಹ್ನ ಮಡಿಕೇರಿಗೆ ಪ್ರಯಾಣಿಸಲಿದೆ. ಈ ಸಂದರ್ಭ ಸಾರ್ವಜನಿಕರು/ಎಲ್ಲ ಸಂಘ ಸಂಸ್ಥೆಗಳ ಮುಖಂಡರು, ಸದಸ್ಯರುಗಳು ಪಾಲ್ಗೊಂಡು ರಥಯಾತ್ರೆಯನ್ನು ಯಶಸ್ವಿಗೊಳಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮನವಿ ಮಾಡಿದ್ದಾರೆ.
Next Story