ಯಶಸ್ವಿನಿಗೆ ಹೆಸರು ನೋಂದಾಯಿಸಲು ಸೂಚನೆ
ಉಡುಪಿ, ಆ.8: ಯಶಸ್ವಿನಿ ಗ್ರಾಮೀಣ ಹಾಗೂ ನಗರ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆಯಡಿ ನೋಂದಣಿಗೆ ಅವಕಾಶವನ್ನು ಆ.31ರವರೆಗೆ ಮುಂದುವರಿಸಲಾಗಿದೆ. ಆದ್ದರಿಂದ ಇದುವರೆಗೆ ಯಶಸ್ವಿನಿ ಯೋಜನೆಯಡಿ ನೋಂದಣಿ ಮಾಡದ ಸದಸ್ಯರು ಈ ಅವಕಾಶವನ್ನು ಸದುಪಯೋಗಿಸಿಕೊಂಡು ಯೋಜನೆಯ ಸೌಲಭ್ಯವನ್ನು ಪಡೆಯುವಂತೆ ಉಡುಪಿ ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕ ಪ್ರವೀಣ್ ಬಿ ನಾಯಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





