Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ರಿಯೋ : ಇತಿಹಾಸ ಸೃಷ್ಟಿಸಿದ ದೀಪಾ...

ರಿಯೋ : ಇತಿಹಾಸ ಸೃಷ್ಟಿಸಿದ ದೀಪಾ ಕರ್ಮಾಕರ್‌ಗೆ ‘ಗೃಹ ಬಂಧನ’ !

ವಾರ್ತಾಭಾರತಿವಾರ್ತಾಭಾರತಿ9 Aug 2016 10:51 AM IST
share
ರಿಯೋ : ಇತಿಹಾಸ ಸೃಷ್ಟಿಸಿದ ದೀಪಾ ಕರ್ಮಾಕರ್‌ಗೆ ‘ಗೃಹ ಬಂಧನ’ !

ರಿಯೋ, ಆ.9: : ರಿಯೋ ಒಲಿಂಪಿಕ್ಸ್‌ನಲ್ಲಿ ಜಿಮ್ನಾಸ್ಟಿಕ್ಸ್ ನಲ್ಲಿ ಅಂತಿಮ ಸುತ್ತು ಪ್ರವೇಶಿಸಿ ಇತಿಹಾಸ ಸೃಷ್ಟಿಸಿರುವ ಭಾರತದ ಜಿಮ್ನಾಸ್ಟಿಕ್ಸ್ ತಾರೆ ತ್ರಿಪುರಾದ ದೀಪಾ ಕರ್ಮಕರ್ ಆಗಸ್ಟ್ 14 ರಂದು ನಡೆಯುವ ಅಂತಿಮ ಸ್ಪರ್ಧೆಯಲ್ಲಿ ಭಾಗವಹಿಸಲು ಸರ್ವ ತಯಾರಿ ನಡೆಸುತ್ತಿರುವಂತೆಯೇ ಆಕೆಯ ಕೋಚ್ ಬಿಶ್ವೇಶ್ವರ್ ನಂದಿ ಆಕೆಗೆ ವಸ್ತುಶಃ ಗೃಹಬಂಧನ ವಿಧಿಸಿದ್ದಾರೆ.

 ದೀಪಾ ಇಂದು ತಮ್ಮ 23ನೆ ಜನ್ಮ ದಿನವನ್ನು ಆಚರಿಸಲಿದ್ದರೂ ಆಕೆ ತನ್ನ ಹೆತ್ತವರ ಹೊರತಾಗಿ ಬೇರೆ ಯಾರಿಂದಲೂ ಶುಭಾಶಯ ಸ್ವೀಕರಿಸುವುದಿಲ್ಲ. ‘‘ಆಕೆಯ ಮೊಬೈಲ್ ಫೋನ್‌ನ ಸಿಮ್ ಕಾರ್ಡನ್ನು ನಾನು ತೆಗೆದಿರಿಸಿದ್ದೇನೆ. ಆಕೆಯ ಹೆತ್ತವರು ಮಾತ್ರ ಆಕೆಯೊಂದಿಗೆ ಮಾತನಾಡುತ್ತಾರೆ. ಆಕೆಯ ಗಮನ ಬೇರೆಡೆ ಹರಿಯುವುದು ನನಗೆ ಬೇಕಿಲ್ಲ’’ ಎಂದು ಕಳೆದ 16 ವರ್ಷದಿಂದ ಆಕೆಯ ಕೋಚ್ ಆಗಿರುವ ನಂದಿ ಹೇಳುತ್ತಾರೆ. ಸದ್ಯಕ್ಕೆ ಆಕೆಯ ಜೊತೆ ಆಕೆಯ ರೂಮ್ ಮೇಟ್ ಒಲಿಂಪಿಕ್ಸ್ ನಲ್ಲಿ ಭಾಗವಹಿಸುತ್ತಿರುವ ಭಾರತದ ಏಕೈಕ ಮಹಿಳಾ ವೇಟ್‌ಲಿಫ್ಟರ್ ಸೈಖೋಮ್ ಮೀರಾಬಾಯ್ ಚಾನು ಹಾಗೂ ಆಕೆಯ ಕೋಚ್ ನಂದಿ ಮಾತ್ರ ಇರುತ್ತಾರೆ.

‘‘ಆಕೆ ಕಠಿಣ ಅಭ್ಯಾಸ ಮಾಡಲು ಹೆಚ್ಚಿನ ಸಮಯ ವ್ಯಯಿಸುವುದರಿಂದ ಆಕೆಯ ಸ್ನೇಹಿತೆಯರ ಬಳಗ ಕೂಡ ಚಿಕ್ಕದು. ನಾನು ಅಭ್ಯಾಸದ ನಡುವೆ ಆಕೆಗೆ ನೀಡುವ ಚಿಕ್ಕ ಬ್ರೇಕ್‌ಗಳ ನಡುವೆ ಆಕೆ ಕೇವಲ ತನ್ನ ಹೆತ್ತವರೊಂದಿಗೆ ಮಾತನಾಡಲು ಅವಕಾಶವಿದೆ’’ ಎಂದು ನಂದಿ ಹೇಳುತ್ತಾರೆ.

ದೀಪಾ ನಿರಾಯಾಸವಾಗಿ ಮಾಡುವ ಅಪಾಯಕಾರಿ ಪ್ರೊದುನೊವಾ ವಾಲ್ಟ್ ಆಕೆಗೆ ಸಾಕಷ್ಟು ಹೆಸರು ತಂದಿದೆಯೆಂಬುದು ನಿರ್ವಿವಾದ. ‘‘ಜಿಮ್ನಾಸ್ಟಿಕ್ಸ್ ನಲ್ಲಿ ಪ್ರತಿಯೊಂದು ಹಂತದಲ್ಲೂ ಅಪಾಯವಿದೆ. ಆದರೆ ದೀಪಾ ಪ್ರೊದುನೊವಾದಲ್ಲಿ ಸಂಪೂರ್ಣ ಪರಿಣತಿ ಹೊಂದಿದ್ದಾರೆ’’ಎಂದು ನಂದಿ ವಿವರಿಸುತ್ತಾರೆ.
ತ್ರಿಪುರಾ ರಾಜಧಾನಿ ಅಗರ್ತಲಾದಲ್ಲಿರುವ ವೇಟ್ ಲಿಫ್ಟಿಂಗ್ ಕೋಚ್ ಒಬ್ಬರ ಪುತ್ರಿಯಾಗಿರುವ ದೀಪಾ ಜಿಮ್ನಾಸ್ಟಿಕ್ಸ್ ಅಭ್ಯಾಸವನ್ನು ಆಕೆ ಮೂರು ವರ್ಷದವಳಿರುವಾಗಲೇ ಎಸ್‌ಎಐ ಕೋಚ್ ಆಗಿರುವ ನಂದಿ ಅವರ ಪತ್ನಿ ಸುಮಾ ಬಳಿ ಆರಂಭಿಸಿದ್ದರು.

ಸುಮಾ ನಂತರ ದೀಪಾರನ್ನು ತಮ್ಮ ಪತಿ ಬಳಿ ಕರೆ ತಂದ ನಂತರ ಅವರೇ ಆಕೆಗೆ ಕಳೆದ 16 ವರ್ಷದಿಂದ ತರಬೇತಿ ನೀಡುತ್ತಿದ್ದಾರೆ.
ಆಗಸ್ಟ್ 14 ರಂದು ಸ್ಥಳೀಯ ಕಾಲಮಾನ ಅಪರಾಹ್ನ 2:47ಕ್ಕೆ ಜಿಮ್ನಾಸ್ಟಿಕ್ಸ್ ಅಂತಿಮ ಸುತ್ತು ನಡೆಯಲಿದೆ. ‘‘ಆಕೆ ಪದಕ ಗೆದ್ದರೆ ಅದು ಭಾರತಕ್ಕೆ ಸ್ವಾತಂತ್ರ್ಯ ದಿನದ ಉಡುಗೊರೆಯಾಗಲಿದೆ.’’ಎಂದು ಆಶಾವಾದದಿಂದ ಹೇಳುತ್ತಾರೆ ನಂದಿ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X