Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಗುಜರಾತ್ ದಲಿತ ಆಂದೋಲನದಲ್ಲಿ ಗಮನ...

ಗುಜರಾತ್ ದಲಿತ ಆಂದೋಲನದಲ್ಲಿ ಗಮನ ಸೆಳೆಯುತ್ತಿರುವ ಘೋಷಣೆಗಳು, ಜೋಕುಗಳು

ವಾರ್ತಾಭಾರತಿವಾರ್ತಾಭಾರತಿ9 Aug 2016 1:51 PM IST
share
ಗುಜರಾತ್ ದಲಿತ ಆಂದೋಲನದಲ್ಲಿ ಗಮನ ಸೆಳೆಯುತ್ತಿರುವ ಘೋಷಣೆಗಳು, ಜೋಕುಗಳು

ಅಹ್ಮದಾಬಾದ್, ಆ.9: ಗುಜರಾತ್‌ನ ಉನಾ ಗ್ರಾಮದಲ್ಲಿ ಇತ್ತೀಚೆಗೆ ದಲಿತ ಯುವಕರ ಮೇಲೆ ಸ್ವಘೋಷಿತ ಗೋರಕ್ಷಕರು ನಡೆಸಿದ ಅಮಾನುಷ ದೌರ್ಜನ್ಯ ರಾಜ್ಯಾದ್ಯಂತ ದಲಿತರ ಪ್ರತಿಭಟನೆಗಳಿಗೆ ಕಾರಣವಾಗಿದೆ. ದಲಿತ ಹೋರಾಟಗಾರ ಜಿಗ್ನೇಶ್ ಮೇವನಿ ಅಹ್ಮದಾಬಾದ್‌ನಿಂದ ಉನಾಗೆ 10 ದಿನಗಳ ಯಾತ್ರೆ ಕೈಗೊಂಡಿದ್ದಾರಲ್ಲದೆ ದಲಿತರು ತಮ್ಮ ವಿರುದ್ಧದ ದೌರ್ಜನ್ಯದ ವಿರುದ್ಧ ಸಿಡಿದೇಳುವಂತೆ ಪ್ರೇರೇಪಿಸುತ್ತಿದ್ದಾರೆ.

ತರುವಾಯ ಗುಜರಾತ್ ರಾಜ್ಯದ ಈ ದಲಿತ ಆಂದೋಲನದಲ್ಲಿ ದಲಿತ ನಾಯಕರ ಹಾಗೂ ಕಾರ್ಯಕರ್ತರ ಹಲವಾರು ಘೋಷಣೆಗಳು ಹಾಗೂ ಜೋಕುಗಳು ಸಾಕಷ್ಟು ಗಮನ ಸೆಳೆಯುತ್ತಿವೆ.

ಇಲ್ಲಿವೆ ಕೆಲವು ಸ್ಯಾಂಪಲ್‌ಗಳು

1. ‘‘ಗಾಯೆ ನು ಪುಚ್ಡು ತಾಮೆ ರಖೋ, ಆಮ್ನೆ ಅಮಾರಿ ಜಮೀನ್ ಆಪೊ’’ (ದನದ ಕಥೆಯನ್ನು ನೀವಿಟ್ಟುಕೊಳ್ಳಿ, ನಮಗೆ ನಮ್ಮ ಭೂಮಿ ನೀಡಿ)

ಇಲ್ಲಿ ದನದ ಕಥೆ ದಲಿತರ ಪಾರಂಪರಿಕ ವೃತ್ತಿಯಾದ ಸತ್ತ ದನಗಳ ಚರ್ಮ ಸುಲಿಯುವುದು ಹಾಗೂ ಅವುಗಳ ಕಳೇಬರಗಳನ್ನು ವಿಲೇವಾರಿಗೊಳಿಸುವುದನ್ನು ಪ್ರತಿನಿಧಿಸುತ್ತದೆ. ಉನಾ ಘಟನೆಯ ನಂತರ ದಲಿತರು ತಮ್ಮ ವೃತ್ತಿಯನ್ನು ಬಹಿಷ್ಕರಿಸಿ ಜೀವನೋಪಾಯಕ್ಕಾಗಿ ಭೂಮಿಗೆ ಬೇಡಿಕೆಯಿಟ್ಟಿದ್ದಾರೆ.


2. ‘‘ಲಾಥ್ ಲೇ ಕರ್ ಜಾಯೇಂಗೆ, ಜಮೀನ್ ಖುಲ್ಲಿ ಕರೇಂಗೆ’’ (ನಮ್ಮ ಭೂಮಿಯನ್ನು ಪಡೆಯಲು ನಾವು ದೊಣ್ಣೆಗಳೊಂದಿಗೆ ಹೋಗುತ್ತೇವೆ)

ಜುಲೈ 11 ರ ಸಮಾವೇಶಕ್ಕಾಗಿ ಉನಾ ದಲಿತ್ ಅತ್ಯಾಚಾರ್ ಲಡಾಯಿ ಸಮಿತಿ ಸಿದ್ಧಪಡಿಸಿದ್ದ ಒಂದೇ ಒಂದು ಘೋಷಣೆ ಇದಾಗಿತ್ತು. ಸಮಿತಿ ಹಾಗೂ ಜನ ಸಂಘರ್ಷ್ ಸಮಿತಿ ಎಂಬ ನಾಗರಿಕ ಹಕ್ಕುಗಳ ಸಂಘಟನೆದಲಿತರ ಭೂಮಿ ಹಕ್ಕುಗಳಿಗಾಗಿ ಗುಜರಾತ್ ನಲ್ಲಿ ಹೋರಾಡುತ್ತಿವೆ.


3. ‘ಗುಜರಾತ್ ಮಾಡೆಲ್ ಫೇಲ್, ಫೇಲ್’

ಈ ಘೋಷಣೆಯನ್ನು ಕಳೆದೆರಡು ವರ್ಷಗಳಿಂದ ಗುಜರಾತ್ ರಾಜ್ಯದಲ್ಲಿ ಆಯೋಜಿಸಲಾಗುವ ಪ್ರತಿಯೊಂದು ಪ್ರತಿಭಟನೆಯಲ್ಲೂ ಮೊಳಗಿಸಲಾಗುತ್ತಿದೆೆ. ಮುಸ್ಲಿಮರು ಹಾಗೂ ದಲಿತ ಸಮುದಾಯದ ಸುರಕ್ಷತೆಗೆ ಏನೂ ಮಾಡದ ಗುಜರಾತ್ ಅಭಿವೃದ್ಧಿ ಮಾದರಿಯನ್ನು ಪ್ರತಿಭಟನಾಕಾರರು ಬಾರಿ ಬಾರಿ ಪ್ರಶ್ನಿಸಿದ್ದಾರೆ.

4.‘‘ಗಾಯೆ ಜಿಸ್ಕೀ ಮಾತಾ ಹೇ ಸಾಂದ್ ಉಸ್ಕಾ ಬಾಪ್ ಹೇ’’(ಗೋವನ್ನು ತನ್ನ ತಾಯಿಯೆಂದು ತಿಳಿಯುವವನು ಎತ್ತನ್ನು ತನ್ನ ತಂದೆಯೆಂದು ತಿಳಿಯಬೇಕು)

ಜಿಗ್ನೇಶ್ ಮೇವನಿಯವರ ನೇತೃತ್ವದ ಯಾತ್ರೆ ಧೋಲ್ಕಾ ತೆಹ್ಸಿಲ್‌ಗೆ ಸೋಮವಾರ ಆಗಮಿಸಿದಾಗ ಗ್ರಾಮಸ್ಥರು ಕೂಗಿದ ಘೋಷಣೆ ಇದಾಗಿದೆ. ದಾದ್ರಿ ಘಟನೆಯ ನಂತರ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಭುಗಿಲೆದ್ದಿದ್ದಾಗ ಗೋ ರಕ್ಷಕರು ಎತ್ತಿಗೂ ಪೌರಾಣಿಕ ಸಂಬಂಧ ಕಲ್ಪಿಸಬೇಕೆಂದು ಸಂದೇಶವೊಂದರಲ್ಲಿ ಯಾರೋ ಒಬ್ಬರು ಹೇಳಿದ್ದರು.

5. ‘‘ಹಮೇ ಚಾಹಿಯೇ ಆಜಾದಿ’’ (ನಮಗೆ ಬೇಕು ಸ್ವಾತಂತ್ರ್ಯ)

ಹರ್ಯಾಣಾದ ದಲಿತ ಕಾರ್ಯಕರ್ತೆ ಮೀನಾ ಮಶಾಲ್ ಈ ಘೋಷಣೆಯನ್ನು ಮೊದಲು ರವಿವಾರದಂದು ಕೂಗಿದ್ದರು. ಕೆಲವೇ ಕೆಲವು ಕ್ಷಣಗಳಲ್ಲಿ ಹಳ್ಳಿಯ ನೂರಾರು ಮಹಿಳೆಯರು ಹಾಗೂ ಹೆಣ್ಣು ಮಕ್ಕಳು ಅಲ್ಲಿ ಸೇರಿದ್ದರು. ಜೆಎನ್‌ಯು ಹೋರಾಟದ ಸಂದರ್ಭದಲ್ಲೂ ಈ ಘೋಷಣೆ ಜನಪ್ರಿಯವಾಗಿದೆ. ಗುಜರಾತ್‌ನಲ್ಲಿ ದಲಿತರು ಜಾತೀಯತೆಯಿಂದ ಸ್ವಾತಂತ್ರದ ಬೇಡಿಕೆಯಿಟ್ಟಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X