ಹಿಂದಿ ಅಥವಾ ಸಂಸ್ಕೃತ ಹೇರಿಕೆಗೆ ಅವಕಾಶವಿಲ್ಲ: ತಮಿಳುನಾಡು ಸಚಿವ
ಚೆನ್ನೈ,ಆ.9: ಕೇಂದ್ರದ ಕರಡು ನೂತನ ಶಿಕ್ಷಣ ನೀತಿಗೆ ವಿವಿಧ ಮೂಲೆಗಳಿಂದ ವ್ಯಕ್ತವಾಗಿರುವ ಪ್ರತಿಭಟನೆಗಳ ನಡುವೆಯೇ ಹಿಂದಿ ಅಥವಾ ಸಂಸ್ಕೃತದ ಹೇರಿಕೆಗೆ ತಮಿಳುನಾಡು ಸರಕಾರವು ಅವಕಾಶ ನೀಡುವುದಿಲ್ಲ ಎಂದು ಮಂಗಳವಾರ ರಾಜ್ಯ ವಿಧಾನಸಭೆಯಲ್ಲಿ ತಿಳಿಸಿದ ಉನ್ನತ ಶಿಕ್ಷಣ ಸಚಿವ ಕೆ.ಪಿ.ಅನ್ಬಳಗನ್ ಅವರು, ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ರಕ್ಷಿಸಲಾಗುವುದು ಎಂದು ಭರವಸೆ ನೀಡಿದರು. ಕೇಂದ್ರವು ರಾಜ್ಯ ಸರಕಾರಕ್ಕೆ ಕರಡು ನೀತಿಯನ್ನು ಕಳುಹಿಸಿದ್ದು, ಇದಕ್ಕೆ ಶೀಘ್ರವೇ ಉತ್ತರಿಸಲಾಗುವುದು ಎಂದು ಅವರು ತಿಳಿಸಿದರು.
ಮಧ್ಯಪ್ರವೇಶಿಸಿ ಮಾತನಾಡಿದ ಡಿಎಂಕೆ ಸದಸ್ಯ ತಂಗಂ ತೆನ್ನರಸು ಅವರು ನೂತನ ಶಿಕ್ಷಣ ನೀತಿಯು ರಾಜ್ಯಗಳ ವಿರುದ್ಧವಾಗಿದೆ ಎಂದು ಪ್ರತಿಪಾದಿಸಿದರು. ರಾಜ್ಯದ ಭಾಷಾ ಮತ್ತು ಸಾಂಸ್ಕೃತಿಕ ಅನನ್ಯತೆಗೆ ಯಾವುದೇ ಚ್ಯುತಿ ಬಾರದಂತೆ ರಾಜ್ಯ ಸರಕಾರವು ನೋಡಿಕೊಳ್ಳಲಿದೆ ಎಂದು ಅನ್ಬಳಗನ್ ಹೇಳಿದರು.
Next Story