ಮಂಗಳೂರು-ಉಡುಪಿಯಲ್ಲಿ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ
ಅಖಿಲ ಭಾರತ ಮಹಾಮುಷ್ಕರಕ್ಕೆ ಬೆಂಬಲ
ಮಂಗಳೂರು, ಆ.9: ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ನೇತೃತ್ವದಲ್ಲಿ ಸೆ.2ರಂದು ನಡೆಯಲಿರುವ ಅಖಿಲ ಭಾರತ ಮುಷ್ಕರವನ್ನು ಬೆಂಬಲಿಸಿ ವಿವಿಧ ಕಾರ್ಮಿಕ ಸಂಘಟನೆಗಳಿಂದ ಮಂಗಳವಾರ ದ.ಕ. ಜಿಲ್ಲಾಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಅದಕ್ಕೂ ಮುನ್ನ ಮಂಗಳೂರು ಮಿನಿ ವಿಧಾನ ಸೌಧದಿಂದ ಜಿಲ್ಲಾಕಾರಿ ಕಚೇರಿಯವರೆಗೆ ಕಾರ್ಮಿಕರು ರ್ಯಾಲಿ ನಡೆಸಿದರು.
ಸಿಐಟಿಯು ರಾಜ್ಯ ಕಾರ್ಯದರ್ಶಿ ವಸಂತ ಆಚಾರಿ ಮಾತನಾಡಿ, ಕಳೆದ ವರ್ಷ 10 ಬೇಡಿಕೆಗಳನ್ನು ಮುಂದಿಟ್ಟು ಇದೇ ಕಾರ್ಮಿಕ ಸಂಘಟನೆಗಳು ಅಖಿಲ ಭಾರತ ಮುಷ್ಕರವನ್ನು ನಡೆಸಿತ್ತು. ಆದರೆ ಕೇಂದ್ರ ಸರಕಾರ ಕಾರ್ಮಿಕ ಸಂಘಟನೆಗಳ ಬೇಡಿಕೆಗಳನ್ನು ಈಡೇರಿಸಲು ಕ್ರಮಕೈಗೊಂಡಿರಲಿಲ್ಲ. ಇದೀಗ ಮತ್ತೆ ಸೆ.2ರಂದು ಮಹಾ ಮುಷ್ಕರ ನಡೆಯಲಿದೆ ಎಂದರು. ಯುಸಿ ಜಿಲ್ಲಾ ಅಧ್ಯಕ್ಷ ಎಚ್.ವಿ.ರಾವ್, ಎಚ್ಎಂಎಸ್ ಸಂಘಟನೆಯ ರಾಜ್ಯ ಮುಖಂಡ ವೆಂಕಟರಾಮ್, ಐಎನ್ಟಿಯುಸಿ ದ.ಕ. ಜಿಲ್ಲಾ ಮುಖಂಡ ಸದಾಶಿವ ಶೆಟ್ಟಿ, ಬಿಎಸ್ಸೆನ್ನೆಲ್ ನೌಕರರ ಸಂಘಟನೆಯ ಮುಖಂಡ ಕೃಷ್ಣ ಮಾತನಾಡಿದರು. ೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ದ.ಕ. ಜಿಲ್ಲಾ ಸಂಚಾಲಕ, ಸಿಐಟಿಯು ಮುಖಂಡ ಜೆ. ಬಾಲಕೃಷ್ಣ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಐಟಿಯುಸಿ ಮುಖಂಡ ಬಿ. ಸುರೇಶ ವಂದಿಸಿದರು.ುಪಿ: ಸರಕಾರದ ಜನವಿರೋ ನೀತಿಯನ್ನು ವಿರೋಸಿ ಮತ್ತು ಕಾರ್ಮಿಕರ 17ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೆ.2ರ ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಸಿದ್ಧತೆಯಾಗಿ ಮಂಗಳವಾರ ಕಾರ್ಮಿಕ ಸಂಘಟನೆಗಳ ಉಡುಪಿ ಜಿಲ್ಲಾ ಜಂಟಿ ಸಮಿತಿ (ಜೆಸಿಟಿಯು)ಯ ನೇತೃತ್ವದಲ್ಲಿ ಕಾರ್ಮಿಕರ ಮೆರವಣಿಗೆ ಮತ್ತು ಪ್ರತಿಭಟನೆ ನಡೆಯಿತು.ುಪಿ ಅಜ್ಜರಕಾಡಿನ ಎಲ್ಐಸಿ ಕಚೇರಿ ಬಳಿಯಿಂದ ಹೊರಟ ಕಾರ್ಮಿಕರ ಮೆರವಣಿಗೆಯು ಜೋಡುಕಟ್ಟೆ, ಕೆ.ಎಂ. ಮಾರ್ಗವಾಗಿ ಸರ್ವಿಸ್ ಬಸ್ ನಿಲ್ದಾಣಕ್ಕೆ ಆಗಮಿಸಿತು. ಬಳಿಕ ಕ್ಲಾಕ್ ಟವರ್ ಬಳಿಯ ಮಹಾತ್ಮಾ ಗಾಂ ಪ್ರತಿಮೆಯ ಮುಂದೆ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಜೆಸಿಟಿಯು ಜಿಲ್ಲಾ ಸಂಚಾಲಕ ಅದಮಾರು ಶ್ರೀಪತಿ ಆಚಾರ್ಯ ಮಾತನಾಡಿ, ಕಾರ್ಮಿಕರ ಬೇಡಿಕೆಗಳ ಬಗ್ಗೆ ಕೇಂದ್ರ ಸರಕಾರ ಗಮನ ಕೊಡುತ್ತಿಲ್ಲ. ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಲವಾಗಿದೆ. ನಿರುದ್ಯೋಗ ಸಮಸ್ಯೆ ದೇಶದಲ್ಲಿ ಮಿತಿಮೀರುತ್ತಿದೆ ಎಂದು ಆರೋಪಿಸಿದರು.
ಈ ಸಂದರ್ಭ ಜೆಸಿಟಿಯು ಸಂಚಾಲಕ ಕೆ. ಶಂಕರ್, ಸಿಐಟಿಯು ಮುಖಂಡ ಬಾಲಕೃಷ್ಣ ಶೆಟ್ಟಿ, ಎಐಟಿಯುಸಿ ಮುಖಂಡ ಕೆ.ವಿ.ಭಟ್, ವಿಮಾ ನೌಕರರ ಸಂಘದ ಯು.ಗುರುದತ್, ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಹೆರಾಲ್ಡ್ ಡಿಸೋಜ, ಬ್ಯಾಂಕ್ ಎಂಪ್ಲಾಯೀಸ್ ೆಡರೇಶನ್ ಆ್ ಇಂಡಿಯಾದ ರವೀಂದ್ರ, ಬಿಎಸ್ಸೆನ್ನೆಲ್ ನೌಕರರ ಸಂಘದ ಶಶಿಧರ ಗೊಲ್ಲ, ಮುಖಂಡರಾದ ವೆಂಕಟೇಶ ಕೋಣಿ, ವಿಶ್ವನಾಥ ರೈ, ವಿಠಲ ಪೂಜಾರಿ, ಕವಿರಾಜ್, ನಳಿನಿ, ಸುಜಾತ ಮೊದಲಾದವರು ಉಪಸ್ಥಿತರಿದ್ದರು.