ಇಂದಿನಿಂದ ವಿವಿಧ ಕಾಮಗಾರಿಗೆ ಚಾಲನೆ
ಮಂಗಳೂರು, ಆ.9: ದ.ಕ. ಜಿಲ್ಲೆಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾಕಾರದ ವಿವಿಧ ಯೋಜನಾ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ ಸಮಾರಂಭ, ಕಾಲುಸಂಕ ಕಾಮಗಾರಿಗಳ ಉದ್ಘಾಟನೆ ಆ.10, 11ರಂದು ನಡೆಯಲಿವೆ.
ಆ.10ರಂದು ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಪಂ ವ್ಯಾಪ್ತಿಯ ಒಡಿಲ್ಳಾಲ ಗ್ರಾಮದ ಕೆಂಚೊಟ್ಟು ಎಂಬಲ್ಲಿ ಕಾಲುಸಂಕ ಕಾಮಗಾರಿಯ ಉದ್ಘಾಟನೆ, ಬಳಂಜ ಗ್ರಾಪಂ ವ್ಯಾಪ್ತಿಯ ಕೊಂಗುಲು ಎಂಬಲ್ಲಿ ಕಾಲುಸಂಕ ಕಾಮಗಾರಿಯ ಉದ್ಘಾಟನೆ, ಮಲವಂತಿಗೆ ಗ್ರಾಪಂ ವ್ಯಾಪ್ತಿಯ ಕುಮೇರು ಹಳ್ಳಕ್ಕೆ ಕಾಲುಸಂಕ ನಿರ್ಮಾಣ ಕಾಮಗಾರಿಯ ಶಿಲಾನ್ಯಾಸ, ಇಳಂತಿಲ ಗ್ರಾಪಂ ವ್ಯಾಪ್ತಿಯ ಇಳಂತಿಲ ಗ್ರಾಮದ ಅಜಿರ ಪಾರಡ್ಕ ಎಂಬಲ್ಲಿ ಕಾಲುಸಂಕ ನಿರ್ಮಾಣ ಕಾಮಗಾರಿಯ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ.ಆ.11ರಂದು ಮಂಗಳೂರು ತಾಲೂಕು ಮುತ್ತೂರಿನಲ್ಲಿ ಲ್ಗುಣಿ ತೂಗು ಸೇತುವೆಯ ಉದ್ಘಾಟನೆ, ಬಂಟ್ವಾಳ ತಾಲೂಕಿನ ರಾಯಿ ಗ್ರಾಪಂ ವ್ಯಾಪ್ತಿಯ ಕೊಯಿಲ ಪರಾರಿ ಗ್ರಾಮದಲ್ಲಿ ಕಾಲುಸಂಕ ನಿರ್ಮಾಣ ಕಾಮಗಾರಿಯ ಶಿಲಾನ್ಯಾಸ, ಉಳಿ ಗ್ರಾಪಂ ವ್ಯಾಪ್ತಿಯ ಉಳಿ ಗ್ರಾಮದ ಓಟೆದಳ ಎಂಬಲ್ಲಿ ಕಾಲುಸಂಕ ನಿರ್ಮಾಣ ಕಾಮಗಾರಿಯ ಶಿಲಾನ್ಯಾಸ, ವಿಟ್ಲ ಪಡ್ನೂರು ಗ್ರಾಪಂ ವ್ಯಾಪ್ತಿಯ ವಿಟ್ಲ ಪಡ್ನೂರು ಗ್ರಾಮದ ತಾಳಿಅಡ್ಕ ಎಂಬಲ್ಲಿ ಕಾಲಸಂಕ ನಿರ್ಮಾಣ ಕಾಮಗಾರಿಯ ಶಿಲಾನ್ಯಾಸ, ಕರೋಪಾಡಿ ಗ್ರಾಪಂ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ಕಾಲುಸಂಕ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಕಾರದ ಪ್ರಕಟನೆ ತಿಳಿಸಿದೆ.