ದಲಿತ ಬಾಲಕಿಗೆ ಕುಡಿಯುವ ನೀರು ನಿರಾಕರಿಸಿದ ಅರ್ಚಕ
ಪ್ರಶ್ನಿಸಿದ ಬಾಲಕಿಯ ತಂದೆಗೆ ತ್ರಿಶೂಲದಿಂದ ಹಲ್ಲೆ
ಹೊಸದಿಲ್ಲಿ, ಆ.10: ಹದಿಮೂರು ವರ್ಷದ ದಲಿತ ಬಾಲಕಿಯೊಬ್ಬಳಿಗೆ ಉತ್ತರ ಪ್ರದೇಶದ ಸಂಭಾಲ್ ಎಂಬ ಗ್ರಾಮದ ದೇವಳದ ಅರ್ಚಕರೊಬ್ಬರು ಕುಡಿಯಲು ನೀರು ನೀಡಲು ನಿರಾಕರಿಸಿದ ಘಟನೆ ನಡೆದಿದೆ. ಈ ಬಗ್ಗೆ ಬಾಲಕಿಯ ತಂದೆ ಅರ್ಚಕನನ್ನು ಪ್ರಶ್ನಿಸಿದ್ದೇ ತಡ, ಅರ್ಚಕ ಆತನ ಮೇಲೆ ತ್ರಿಶೂಲದಿಂದ ದಾಳಿ ನಡೆಸಿದ್ದಾನೆನ್ನಲಾಗಿದೆ.
ಆರೋಪಿಯನ್ನು ಬಂಧಿಸಲಾಗಿದ್ದು ಆತನ ವಿರುದ್ಧ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ವಿರೋಧಿ ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಗುಜರಾತ್ ರಾಜ್ಯದ ಉನಾದಲ್ಲಿ ದಲಿತ ಯುವಕರ ಮೇಲೆ ನಡೆದ ದೌರ್ಜನ್ಯ ಸಹಿತ ದೇಶದ ಹಲವೆಡೆ ದಲಿತರ ಮೇಲೆ ಹಲ್ಲೆ ನಡೆಯುತ್ತಿರುವ ಘಟನೆಗಳು ನಡೆದಿರುವಂತೆಯೇ ಉತ್ತರ ಪ್ರದೇಶದ ಈ ಘಟನೆ ದಲಿತ ಸಮುದಾಯದಲ್ಲಿ ಸಾಕಷ್ಟು ಆಕ್ರೋಶ ಮೂಡಿಸಿದೆ.
ಈ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ದೊರಕಬೇಕಿದೆ.
Next Story