Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಆಫ್‌ಸ್ಪಾ ಹಿಂದೆಗೆಯುವ ವರೆಗೆ ತಾಯಿಯ...

ಆಫ್‌ಸ್ಪಾ ಹಿಂದೆಗೆಯುವ ವರೆಗೆ ತಾಯಿಯ ಭೇಟಿಯಾಗದಿರಲು ಶರ್ಮಿಳಾ ನಿರ್ಧಾರ

ವಾರ್ತಾಭಾರತಿವಾರ್ತಾಭಾರತಿ10 Aug 2016 8:41 PM IST
share
ಆಫ್‌ಸ್ಪಾ ಹಿಂದೆಗೆಯುವ ವರೆಗೆ ತಾಯಿಯ ಭೇಟಿಯಾಗದಿರಲು ಶರ್ಮಿಳಾ ನಿರ್ಧಾರ

ಇಂಫಾಲ, ಆ.10: ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು (ಆಫ್‌ಸ್ಪಾ) ಹಿಂದೆಗೆಯುವ ವರೆಗೆ ಉಗುರು ಕತ್ತರಿಸದಿರಲು, ತಲೆ ಬಾಚದಿರಲು ಹಾಗೂ ತನ್ನ ಮನೆಗೆ ಹೋಗಿ ತಾಯಿಯನ್ನು ಭೇಟಿಯಾಗದಿರಲು ಮಣಿಪುರದ ‘ಉಕ್ಕಿನ ಮಹಿಳೆ’ ಹೋರಾಟಗಾರ್ತಿ ಇರೋಮ್ ಚಾನು ಶರ್ಮಿಳಾ ನಿರ್ಧರಿಸಿದ್ದಾರೆ. ಅವರು ವಿಶ್ವದಲ್ಲೇ ಅತಿ ದೀರ್ಘವಾದ 16 ವರ್ಷಗಳ ಉಪವಾಸ ಮುಷ್ಕರವನ್ನು ಒಂದು ಹನಿ ಜೇನು ಸೇವಿಸುವ ಮೂಲಕ ನಿನ್ನೆ ಕೊನೆಗೊಳಿಸಿದ್ದರು.

ಶರ್ಮಿಳಾರ ಈ ಶಪಥಗಳಲ್ಲಿ ಆಫ್‌ಸ್ಪಾ ಹಿಂದೆಗೆತದ ಗುರಿ ಸಾಧಿಸದೆ ತನ್ನ 84ರ ಹರೆಯದ ತಾಯಿಯನ್ನು ಭೇಟಿಯಾಗದಿರುವುದು ಅತಿ ಕಠಿಣದ್ದಾಗಿದೆ. ಅವರು 2000ನೆ ಇಸವಿಯ ನ.5ರಂದು ನಿರಶನ ಮುಷ್ಕರ ಆರಂಭಿಸಿದ ಬಳಿಕ ಇಂಫಾಲ ನಗರದ ಅಂಚಿನಲ್ಲಿರುವ ಕೊಂಗ್ಪಾಲ್ ಕೊಂಗ್‌ಖಾಮ್ ಲೀಕೈಯಲ್ಲಿರುವ ತನ್ನ ಮನೆಗೆ ಒಮ್ಮೆಯೂ ಹೋಗಿರಲಿಲ್ಲ. ಗುರಿ ಸಾಧಿಸುವ ವರೆಗೆ ಇನ್ನು ಮುಂದೆಯೂ ಆಶ್ರಮವೊಂದರಲ್ಲಿ ವಾಸಿಸಲು ಶರ್ಮಿಳಾ ನಿರ್ಧರಿಸಿದ್ದಾರೆ.

ತಮ್ಮ ತಾಯಿ ವಿಜಯದ ಕ್ಷಣವನ್ನು ಕಾಯುತ್ತಿದ್ದಾರೆ. ಆಫ್‌ಸ್ಪಾ ಹಿಂದೆಗೆದಾಗಲೇ ಅದು ಸಾಧ್ಯವಾಗಲಿದೆಯೆಂದು ನಿರ್ಮಲಾರ ಅಣ್ಣ ಸಿಂಘಜಿತ್ ತಿಳಿಸಿದ್ದಾರೆ.

ಆತ್ಮಹತ್ಯೆ ಯತ್ನ ಆರೋಪದಲ್ಲಿ ಶರ್ಮಿಳಾರನ್ನು ಬಂಧಿಸಿ, ಜವಾಹರ್‌ಲಾಲ್ ನೆಹರೂ ಆಸ್ಪತ್ರೆಯಲ್ಲಿ ಅವರಿಗೆ ಬಲವಂತವಾಗಿ ಮೂಗಿನ ಮೂಲಕ ಕೊಳವೆಯಲ್ಲಿ ಆಹಾರ ನೀಡುತ್ತಿದ್ದ ಕಾಲದಲ್ಲಿ, ಶರ್ಮಿಳಾರ ತಾಯಿ ಶಾಖಿ ದೇವಿಯವರನ್ನೂ ಅನಾರೋಗ್ಯದ ನಿಮಿತ್ತ ಅದೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದು 2009ನೆ ಇಸವಿಯಾಗಿತ್ತು.

ಆ ಸಂದರ್ಭ ತಾಯಿ ತೀವ್ರ ಅಸ್ತಮಾದಿಂದ ಕೋಮಾಕ್ಕೆ ಜಾರಿದ್ದರು. ಅವರು ಮೃತಪಟ್ಟಿರಬಹುದೆಂಬ ಭೀತಿಯಿಂದ ಶರ್ಮಿಳಾ ಮಧ್ಯರಾತ್ರಿ ಅವರಿದ್ದ ವಾರ್ಡ್‌ಗೆ ನುಸುಳಿ, ಅವರ ಮುಖದ ಬಳಿ ಬಗ್ಗಿದಾಗ, ಒಮ್ಮೆಲೇ ತಾಯಿಗೆ ಪ್ರಜ್ಞೆ ಬಂದಿತ್ತು.

ಆದರೆ, ತಾಯಿ, ಶರ್ಮಿಳಾಗೆ ಅಲ್ಲಿಂದ ತಕ್ಷಣ ಹೋಗುವಂತೆ ಆಜ್ಞಾಪಿಸಿದರು. ‘‘ಗೆದ್ದ ಮೇಲೆ ಬಾ. ನಾನು ಅಲ್ಲಿಯ ವರೆಗೆ ಕಾಯುತ್ತೇನೆ. ಗೆದ್ದ ಮೇಲೆ ಮನೆಗೆ ಬಂದು ನನಗಾಗಿ ಊಟ ತಯಾರಿಸಿಕೊಡು’’ ಎಂದಿದ್ದರು. ಅದಕ್ಕವರು ಈಗಲೂ ಬದ್ಧರಾಗಿದ್ದಾರೆಂದು ಸಿಂಘಜಿತ್ ಹಿಂದಿನ ಘಟನೆಯನ್ನು ವಿವರಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X