ಕೇಂದ್ರಕ್ಕೆ ಸೆಡ್ಡು ಹೊಡೆದ ವಿಹಿಂಪ
ರಾಜಧಾನಿಯಲ್ಲೇ ಗೋರಕ್ಷಕರ ಬೃಹತ್ ಸಮಾವೇಶ
ಹೊಸದಿಲ್ಲಿ, ಆ.12: ಗೋರಕ್ಷಕರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಹೇಳಿಕೆಯಿಂದ ಕೆಂಡಾಮಂಡಲವಾಗಿರುವ ವಿಶ್ವ ಹಿಂದೂ ಪರಿಷತ್ ಇದೀಗ ಕೇಂದ್ರ ಸರ್ಕಾರಕ್ಕೇ ಸೆಡ್ಡು ಹೊಡೆಯಲು ನಿರ್ಧರಿಸಿದೆ. ಗೋಹತ್ಯೆ ನಿಷೇಧಕ್ಕೆ ಆಗ್ರಹಿಸಿ, ಸಂಸತ್ತಿಗೆ ಮುತ್ತಿಗೆ ಹಾಕಿದ 50 ವರ್ಷದ ನೆನಪಿಗಾಗಿ ಬೃಹತ್ ಸಮಾವೇಶವನ್ನು ರಾಜಧಾನಿಯಲ್ಲೇ ನಡೆಸಲು ಮುಂದಾಗಿದೆ.
ಇದರ ಅಂಗವಾಗಿ ಹೊಸದಿಲ್ಲಿಯಲ್ಲಿ ನವೆಂಬರ್ 7ರಂದು ಬೃಹತ್ ರ್ಯಾಲಿ ನಡೆಸಿ, ಎಲ್ಲ ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ಗೋಸಂರಕ್ಷಣೆಯ ಪ್ರತಿಜ್ಞೆ ಸ್ವೀಕರಿಸಲಿದ್ದಾರೆ. ಈ ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದು, ಗೋಹತ್ಯೆ ನಿಷೇಧದ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಸಂಬಂಧ ಒತ್ತಡ ತರಲು ಅಗತ್ಯ ಕಾರ್ಯತಂತ್ರವನ್ನು ಇದರಲ್ಲಿ ರೂಪಿಸಲಾಗುವುದು ಎಂದು ಸಂಘಟನೆಯ ಗುಜರಾತ್ ಪದಾಧಿಕಾರಿಗಳು ಹೇಳಿದ್ದಾರೆ.
ಮೋದಿ ಹೇಳಿಕೆ ಹೊರತಾಗಿಯೂ ಕಾರ್ಯಕ್ರಮದ ಮೂಲಸ್ವರೂಪದಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಲಾಗಿದೆ ಎಂದು ಮೂಲಗಳು ಹೇಳಿವೆ.
Next Story