Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕೇರಳದ ಚಿನ್ನ ಪ್ರಿಯರಿಗೆ ಮಹತ್ವದ ಸಂದೇಶ...

ಕೇರಳದ ಚಿನ್ನ ಪ್ರಿಯರಿಗೆ ಮಹತ್ವದ ಸಂದೇಶ ನೀಡಿದ ಸಹ್ಲಾ

ಈಕೆ ತನ್ನ ವರನಿಂದ ಕೇಳಿದ ಮಹರ್ ಏನು ಗೊತ್ತೇ ?

ವಾರ್ತಾಭಾರತಿವಾರ್ತಾಭಾರತಿ12 Aug 2016 10:39 PM IST
share
ಕೇರಳದ ಚಿನ್ನ ಪ್ರಿಯರಿಗೆ ಮಹತ್ವದ ಸಂದೇಶ ನೀಡಿದ ಸಹ್ಲಾ

ಮಲಪ್ಪುರಂ, ಆ. 12  : ಕೇರಳದ ಮುಸ್ಲಿಂ ಮದುಮಗಳೆಂದರೆ ಹೆಚ್ಚಿನವರಿಗೆ ಕಣ್ಣ ಮುಂದೆ ಬರುವುದು ರಾಶಿ ಚಿನ್ನಾಭರಣಗಳನ್ನು ಹೇರಿಕೊಂಡು ನಿಂತವಳು. ಏಕೆಂದರೆ ಇಲ್ಲಿನ  ಹೆಚ್ಚಿನ ಸ್ಥಿತಿವಂತರು ಮದುವೆ ಸಂದರ್ಭದಲ್ಲಿ ಮದುಮಗಳನ್ನು ಚಿನ್ನದಲ್ಲಿ ಮುಳುಗಿಸಿಬಿಡುವುದನ್ನು ' ಕಡ್ಡಾಯ ರಿವಾಜು ' ಎಂಬಂತೆ ಪಾಲಿಸಿಕೊಂಡು ಬಂದಿದ್ದಾರೆ. ಇದು ಹೊರೆಯಾಗಿ ಪರಿವರ್ತನೆಯಾಗಿ ಮದುವೆಯಾಗಲು ಸಾಲ ಸೋಲ ಮಾಡಿ ಹೈರಾಣಾಗುವುದು ಸಾಮಾನ್ಯ.

ಆದರೆ ಆಗಸ್ಟ್ 11 ರಂದು ಇಲ್ಲಿ ನಡೆದ ಮದುವೆ ಸಂಪೂರ್ಣ ಭಿನ್ನವಾಗಿತ್ತು. ಏಕೆಂದರೆ, ಈ ಮದುವೆಯ ವಧುವಿಗೆ ವಧುದಕ್ಷಿಣೆ ( ಮಹರ್ )ಯಾಗಿ ವರ ಚಿನ್ನವನ್ನೇ ಹಾಕಲಿಲ್ಲ ! ಹೌದು, ಚಿನ್ನವನ್ನೇ ನೀಡದೆ ಮದುವೆಯಾದ ಕೆರಳದ  ಪ್ರಪ್ರಥಮ  ವರ ಅನೀಸ್ ನಾಡೋಡಿ ! ಆದರೆ ಆತನಿಗೆ ಯಾವುದೇ ಖರ್ಚು ಮತ್ತು ಶ್ರಮ ಆಗಿಲ್ಲ ಎನ್ನುವಂತಿಲ್ಲ. ಆತ ಇಸ್ಲಾಮಿ ನೀತಿ ನಿಯಮದ ಪ್ರಕಾರ ಮಹರ್ ನೀಡಿಯೇ ಮದುವೆಯಾಗಿದ್ದಾನೆ. ಆದರೆ ಆತ ನೀಡಿದ್ದು ವಧುವಿನ ಬೇಡಿಕೆಯಂತೆ ಆಕೆ ಕೇಳಿದ ಆಯ್ದ 50 ಪುಸ್ತಕಗಳನ್ನು ! 

ಹೈದರಾಬಾದ್ ವಿವಿಯಲ್ಲಿ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಸಹ್ಲಾ ನೇಚಿಯಿಲ್ ವಿಭಿನ್ನವಾಗಿ ಮದುವೆಯಾಗುವ ಮೂಲಕ ತಮ್ಮ ಸಮುದಾಯಕ್ಕೆ ಮಹತ್ವದ ಸಂದೇಶವೊಂದನ್ನು ನೀಡಿದ್ದಾಳೆ. " ಇಸ್ಲಾಮಿನಲ್ಲಿ ವಧು ತನಗೆ ಬೇಕಾದ್ದನ್ನು ಕೇಳಬಹುದು ಮತ್ತು ಅದನ್ನು ವರ ಈಡೇರಿಸಲೇಬೇಕು. ಮತ್ತು ಎರಡು ಕುಟುಂಬಗಳ ನಡುವೆ ಚಿನ್ನ ವಿನಿಮಯವಾಗದೆಯೂ ಮದುವೆ ಆಗಲು ಸಾಧ್ಯ. ಈ ಎರಡೂ ವಿಷಯಗಳನ್ನು ಜನರಿಗೆ ತಲುಪಿಸಲು ನಾನು ಹೀಗೆ ಮಾಡಿದೆ " ಎನ್ನುತ್ತಾಳೆ ಸಹ್ಲಾ . 
ಮೊದಮೊದಲು ಎರಡೂ ಕುಟುಂಬದವರು ಈ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದರು. ಆದರೆ ಸಹ್ಲಾ ಳ ಬೇಡಿಕೆ ಇಸ್ಲಾಮಿಗೆ ವಿರುದ್ಧವಾಗಿರಲಿಲ್ಲ. ಆದ್ದರಿಂದ ನಿಧಾನವಾಗಿ ಎಲ್ಲರೂ ಒಪ್ಪಿದರು. 

ಸಹ್ಲಾ ಳ ಬೇಡಿಕೆಗೆ ವರ ಅನೀಸ್ ಸಂಪೂರ್ಣ ಬೆಂಬಲ ನೀಡಿದ್ದಾನೆ. " ಮಹರ್ ವಧುವಿನ ಹಕ್ಕು. ಅದು ವರನ ಧಾರಾಳತನ ತೋರಿಸುವ ಪ್ರದರ್ಶನವಲ್ಲ " ಎಂದು ಅನೀಸ್ ಹೇಳಿದ್ದಾರೆ. ಆದರೆ ಈ ವಿಶಿಷ್ಟ ಮಹರ್ ಅನ್ನು ನೀಡುವುದು ಅನೀಸ್ ಗೆ ಅಷ್ಟು ಸುಲಭವಾಗಿರಲಿಲ್ಲ. ಸಹ್ಲಾ ಅತ್ಯಂತ ಆಯ್ಡ 50 ಪುಸ್ತಕಗಳ ಪಟ್ಟಿಯನ್ನು ನೀಡಿದ್ದಳು. ಅದಕ್ಕಾಗಿ ಬೆಂಗಳೂರಿಗೆ ಹೋದ ಅನೀಸ್ ಅಲ್ಲಿನ ಎಲ್ಲ ದೊಡ್ಡ ಪುಸ್ತಕದಂಗಡಿಗಳಲ್ಲಿ ಸಾಕಷ್ಟು ಹುಡುಕಿ ಈ ಎಲ್ಲ ಪುಸ್ತಕಗಳನ್ನು ' ಸಂಪಾದಿಸಿ' ತಂದು ಮಹರ್ ನೀಡಿದ್ದಾನೆ. ರಾಜಕೀಯ, ಇಸ್ಲಾಮಿ ಸ್ತ್ರೀವಾದ ಇತ್ಯಾದಿ ವಿಷಯಗಳ ಕುರಿತ ಪುಸ್ತಕಗಳ ಪಟ್ಟಿ ನೀಡಿದ್ದಳು ಸಹ್ಲಾ. 
 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X