Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕಲೆ - ಸಾಹಿತ್ಯ
  3. ಗೋ ಮಾತೆಗೆ

ಗೋ ಮಾತೆಗೆ

ಗೋಪಾಲ ಬಿ.ಶೆಟ್ಟಿಗೋಪಾಲ ಬಿ.ಶೆಟ್ಟಿ14 Aug 2016 12:35 PM IST
share
ಗೋ ಮಾತೆಗೆ

ದುರ್ಬೀನಿಟ್ಟು ಹುಡುಕಿದರೂ

ಆ ಗೋಮಾತೆಯ ಒಸಡಿಗೆ

ಚುಚ್ಚುವುದು ಬೆಣಚುಕಲ್ಲು ಮುಳ್ಳು ಪೊದರು

ಗೋಮಾಳ ಮಾತ್ರ ಮಕ್ಕಳ ಪಠ್ಯಪುಸ್ತಕದಲ್ಲಿ;

ಪರಿಸ್ಥಿತಿ ಹೀಗಿರುವಾಗ ಎಲ್ಲಿಂದ ಬರಬೇಕು

ಗೋಮಯ, ಗೋ ಮೂತ್ರ ಆ ತಾಯಿಗೆ?

ಮನ ಶುದ್ಧಿ ಮನೆ ಶುದ್ಧಿಗೆ

ಬೇಕು ಗೋಮೂತ್ರ ಸೆಗಣಿ

ಲಂಗ ತೊಟ್ಟ ಪೋರಿ ಬುಟ್ಟಿ

ಗಿಂಡಿಗೆ ಹಿಡಿದು ಪುಣ್ಯಕೋಟಿಯ

ಹಿಂದೆ ಸುತ್ತಿದ್ದೇ ಬಂತು

ತದೇಕ ಚಿತ್ತದಿಂದ ಅದರ ಹಿಂಭಾಗ

ಪಿಳಿಪಿಳಿ ನೋಡಿದ್ದೇ ಬಂತು

ಅಪ್ಪ ಅಂಗಳದಲ್ಲಿ ನಿಂತು ನೋಡುತ್ತಿದ್ದಾನೆ

ಅಂಡು ತುರಿಸಿ ಕ್ಯಾಕರಿಸಿ ಉಗುಳುತ್ತಿದ್ದಾನೆ

ಥೂ... ನಿಮ್ ಕೈಗೆ ನಾಚಿಕೆ ಮರ್ಯಾದೆ ಇಲ್ವೇ?

ಗದರಿಸುತ್ತಿದ್ದಾಳೆ ಮನೆಯೊಡತಿ ಕುಂಡೆ ತುರಿಸಿ

ಅಣ್ಣ ಚಾಪೆಯಿಂದೆದ್ದು ಕಣ್ಣುಜ್ಜಿ ಆಕಳಿಸಿ

ತೆಂಗಿನ ಕಟ್ಟೆಗೆ ಬಂದು ಉಚ್ಚೆ ಹೊಯ್ದು

ಅದರ ಚೆಂದ ನೋಡುತ್ತಿದ್ದಾನೆ

ನೈರ್ಮಲ್ಯದ ಘಾಟು ಮಡಿವಂತಿಕೆಯ

ಸೋಗಲಾಡಿತನ ಬ್ರಹ್ಮಕಪಾಲದಂತೆ

ಕಾಡಿದರೂ, ಅಜ್ಜಿಯ ಕೆಂಪು ಸೀರೆ ಜಬ್ಬಾಗಿ

ತಲೆಯ ಮೇಲೆ ಹತ್ತಿ ಬೆಳೆ ಬೆಳೆದರೂ

ಇಂದಿಗೂ ಅವಳು ಶುದ್ಧಾಚಾರದ

ಸಾಕಾರ ಮೂರ್ತಿ; ಅವಳಜ್ಜಿ ಮುತ್ತಜ್ಜಿಯಂತೆ

ಆದರೆ ಮೊಮ್ಮಗಳು ಬರಲೇ ಇಲ್ಲ

ಸೆಗಣಿ ಗೋಮೂತ್ರ ತರಲೇ ಇಲ್ಲ

ಪಿತೃಗಳಿಗೆ ಕಾಕ ಪಿಂಡವಿಡಬೇಕು

ದೇವತೆಗಳಿಗೆ ಹವ್ಯತರ್ಪಣ ಕೊಡಬೇಕು

ಅಗಲಿದ ಪ್ರೇತಗಳು ಕಾಗೆಗಳಾಗಿ ಕಿಂಚಿ ಮೇಲೆ ಕುಳಿತು

ಕಾ..ಕಾ ಎಂದು ಶ್ರಾದ್ಧ ಪಿಂಡಕ್ಕಾಗಿ ಕಾಯುತ್ತಲಿವೆ

ಸತ್ತ ತಂಗಿ ಹೆಣ್ಣು ಪಿಶಾಚಿಯಾಗಿ

ಅಂತರಿಕ್ಷದಲ್ಲಿ ಗತಿಯಿಲ್ಲದೆ ಅಲೆಯುತ್ತಿದ್ದಾಳೆ

ಅವಳಿಗೊಂದು ಗಂಡು ಹುಡಿಕಿ ಮದುವೆ ಮಾಡಬೇಕು

ಆದರೆ ಪೋರಿ ಬರಲೇ ಇಲ್ಲ

ಸಿಹಿ ಸುದ್ದಿ ತರಲೇ ಇಲ್ಲ

ಆದರೂ ಹುಡುಗಿ ಸುಮ್ಮನಿರಲಿಲ್ಲ

ಅವಳು ಇದ್ದಕ್ಕಿದ್ದಂತೆ ಸುತ್ತಮುತ್ತ ನೋಡಿ

ಲಂಗ ಮೇಲೆ ಮಾಡಿ ಕುಕ್ಕರುಗಾಲು ಹಾಕಿ

ಶುಚಿರ್ಭೂತಳಾಗಿ ಹಾಯಾಗಿ ನಿಟ್ಟುಸಿರು ಬಿಟ್ಟಳಲ್ಲ?

ಪಾಪ! ಬಡಕಲು ಆಕಳು

ಇನ್ನೊಂದೋ ಎರಡೋ ದಿನಗಳಲ್ಲಿ

ಕಸಾಯಿಖಾನೆಗೆ ಹೋಗಲೇಬೇಕು

ಆದರೆ ಅದು ಅದಕೆ ಹೇಗೆ ಗೊತ್ತು?

ಕಾಮಧೇನು ಹಿಂದೆ ಮುಂದೆ ನೋಡಲಿಲ್ಲ

ಶುದ್ಧ ಅಶುದ್ಧದ ಪರಿವೆ ಅದಕ್ಕಿಲ್ಲ

ಹಸಿವೆಯ ಮಹಿಮೆಯೋ ಏನೋ..!

ಅಮೇಧ್ಯವನ್ನು ದೇವರ ಪ್ರಸಾದದಂತೆ

ತಿಂದು ತೇಗಿ ಬಾಯಿ ಚಪ್ಪರಿಸಿದಾಗ

ಅದರ ಆತ್ಮಕ್ಕೂ ಶಾಂತಿ ದೊರೆಯಿತಲ್ಲ !

ಆಗ ತಾನೇ ಹೊರಗೆ ಇಣುಕಿತಲ್ಲ

ಸೆಗಣಿ ಮೂತ್ರ; ಇದು ಸಹಜ

ಪೋರಿಗೂ ಮತ್ತೆ ಎಲ್ಲಿಲ್ಲದ ಮಜಾ

share
ಗೋಪಾಲ ಬಿ.ಶೆಟ್ಟಿ
ಗೋಪಾಲ ಬಿ.ಶೆಟ್ಟಿ
Next Story
X