ಸುಳ್ಯ: ವನಜ ರಂಗಮನೆ ಪ್ರಶಸ್ತಿ ಪ್ರದಾನ - ಯಕ್ಷ ಸಂಭ್ರಮ
ವರ್ತಮಾನದ ಸಮಸ್ಯಗಳಿಗೆ ಮಾತೃ ಸಂಸ್ಕೃತಿಯಲ್ಲಿ ಉತ್ತರ : ಡಾ. ಹನೂರು

ಸುಳ್ಯ,ಆ.14: ಸುಳ್ಯದ ಹಳೆಗೇಟಿನಲ್ಲಿರುವ ಸಾಂಸ್ಕೃತಿಕ ಕಲಾಕೇಂದ್ರ ರಂಗಮನೆ0ುಲ್ಲಿ ವನಜ ರಂಗಮನೆ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಯಕ್ಷ ಸಂಭ್ರಮ ಕಾರ್ಯಕ್ರಮ ನಡೆಯಿತು.
ಸಮಾರಂಭವನ್ನು ಮುಖ್ಯಮಂತ್ರಿಗಳ ಸಂಸದೀ0ು ಕಾರ್ಯದರ್ಶಿಯಾಗಿರುವ ಪುತ್ತೂರು ಶಾಸಕಿ ಶಕುಂತಲಾ ಶೆಟ್ಟಿಯವರು ಉದ್ಘಾಟಿಸಿ ಮಾತನಾಡಿ, ತಂದೆ ತಾಯಿಯರನ್ನು ವೃದ್ಧಾಶ್ರಮದಲ್ಲಿಡುವ ಇಂದಿನ ಕಾಲಘಟ್ಟದಲ್ಲಿ ತಾಯಿಯನ್ನು ಮತ್ತೆ ಮತ್ತೆ ನೆನಪಿಸಿದ ಕಾರ್ಯಮಾಡಿದ ಜೀವನ್ ರಾಮ್ ಜಗತ್ತಿಗೆ ಮಾದರಿ ಎಂದರು. ಜೀವನ್ರಾಂ ಸುಳ್ಯರವರ ಮಾತೃಶ್ರೀ ದಿವಂಗತ ಶ್ರೀಮತಿ ವನಜಾಕ್ಷಿ ಜಯರಾಮ ಇವರ ನೆನಪಿನಲ್ಲಿ ಕೊಡಮಾಡುವ 2016ನೇ ಸಾಲಿನ ವನಜ ರಂಗಮನೆ ಪ್ರಶಸ್ತಿ0ುನ್ನು ಹಿರಿಯ ಯಕ್ಷಗಾನ ಕಲಾವಿದ ಮತ್ತು ವಸ್ತ್ರ ವರ್ಣಾಂಲಕಾರ ತಜ್ಞರಾಗಿರುವ ದೇವಕಾನ ಕೃಷ್ಣ ಭಟ್ರವರಿಗೆ ನೀಡಿ ಗೌರವಿಸಲಾಯಿತು. ಸುಳ್ಯ ಶಾಸಕ ಎಸ್. ಅಂಗಾರ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಜಾನಪದ ವಿದ್ವಾಂಸ, ಲೇಖಕರಾದ ಡಾ ಹನೂರು ಕೃಷ್ಣಮೂರ್ತಿ ವೈಚಾರಿಕ ನುಡಿಗಳನ್ನಾಡಿ, ನಮ್ಮ ಸುತ್ತಮುತ್ತೆಲ್ಲ ಜನಗಳು ಓಡಾಡುತ್ತಾರೆ, ಆದರೆ ಆತ್ಮಗಳು ಕಳೆದು ಹೋಗುತ್ತಿವೆ, ಹೀಗಾಗದಂತೆ ತಡೆಯಲು ಮಾತೃ ಸಂಸ್ಕೃತಿ ಉಳಿಯ ಬೇಕು ಎಂದರು. ಇಂದು ನಾವು ಮಕ್ಕಳನ್ನು ಹೊಸ ಹೊಸ ಯುದ್ಧದ ಚಕ್ರವ್ಯೆಹದೊಳಕ್ಕೆ ತಳ್ಳುತ್ತಿದ್ದೇವೆ. ಆ ವಿಷವರ್ತುಲದಿಂದ ಹೊರ ಬರಲಾಗದೆ ಅವರು ಚಡಪಡಿಸುತ್ತಿದ್ದಾರೆ. ಹೊಸ ಹೊಸ ವಿದ್ಯಮಾನಗಳ ಪಂಜರದ ಬಾಗಿಲನ್ನು ತೆರೆದು ಅಪಾಯ ಸೃಷ್ಠಿಸಿಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಎಲ್ಲ ಸಮಸ್ಯೆಗಳಿಗೂ ಮಾತೃ ಸಂಸ್ಕೃತಿಯಲ್ಲಿ ಉತ್ತರವಿದೆ ಎಂದು ಅವರು ಹೇಳಿದರು.
ಪುತ್ತೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ನ್ಯಾ0ುವಾದಿ ಬೆಟ್ಟ ಪಿ. ಈಶ್ವರ ಭಟ್ ಅತಿಥಿಗಳಾಗಿ ಭಾಗವಹಿಸಿದ್ದರು. ಇದೇ ಸಂದರ್ಭ ವರ್ಲಿ ಬುಡಕಟ್ಟು ಕಲೆಯ ಸೃಜನಶೀಲ ಕಲಾವಿದ, ಶಿಕ್ಷಕ ತಾರಾನಾಥ ಕೈರಂಗಳರವರನ್ನು ಸನ್ಮಾನಿಸಲಾಯಿತು. ಜೀವರಾಮ್ ಸುಳ್ಯ ಸ್ವಾಗತಿಸಿ ಪ್ರಸ್ತಾವನೆ ಗೈದರು. ಕೆ.ಕೃಷ್ಣಮೂರ್ತಿ ವಂದಿಂಸಿದರು. ಡಾ ಮೌಲ್ಯ ಜೀವನ್ ಸನ್ಮಾನ ಪತ್ರ ವಾಚಿಸಿದರು. ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರದ ಸಂಚಾಲಕ ಡಾ ಸುಂದರ ಕೇನಾಜೆ ಕಾರ್ಯಕ್ರಮ ನಿರೂಪಿಸಿದರು.







