ನಾಪತ್ತೆಯಾಗಿದ್ದ ಮೀನುಗಾರರಲ್ಲಿ ಐವರ ಸಾವು, 15 ಜನರ ರಕ್ಷಣೆ
ಕೋಲ್ಕತಾ, ಆ.14: ಆ.8ರಂದು ಬಂಗಾಲ ಉಪಸಾಗರದಲ್ಲ್ಲಿ ಚಂಡಮಾರುತ ಮತ್ತು ಭಾರೀ ಮಳೆಯ ಬಳಿಕ ನಾಪತ್ತೆಯಾಗಿದ್ದ ಪಶ್ಚಿಮ ಬಂಗಾಲದ ಸುಂದರಬನ ಪ್ರದೇಶದ ಮೀನುಗಾರರ ಪೈಕಿ ಐವರ ಶವಗಳು ಪತ್ತೆಯಾಗಿವೆ. ಭಾರತೀಯ ತಟರಕ್ಷಣಾ ಪಡೆ ಮತ್ತು ಬಾಂಗ್ಲಾದೇಶ ನೌಕಾಪಡೆ ಕೈಗೊಂಡಿರುವ ಜಂಟಿ ಕಾರ್ಯಾಚರಣೆಯಲ್ಲಿ 15 ಮೀನುಗಾರರನ್ನು ರಕ್ಷಿಸಲಾಗಿದ್ದು, ನಾಪತ್ತೆಯಾಗಿರುವ ಇನ್ನೂ 10 ಮೀನುಗಾರರಿಗಾಗಿ ಶೋಧ ಮುಂದುವರಿದಿದೆ.
ಆಳಸಮುದ್ರದಲ್ಲಿ ಮುಳುಗಿದೆ ಎಂದು ಶಂಕಿಸಲಾಗಿದ್ದ ‘ಮಹಾಗೌರಿ’ ಹೆಸರಿನ ದೋಣಿಯಲ್ಲಿದ್ದ ಐವರು ಮೀನುಗಾರರು ಮೃತಪಟ್ಟಿದ್ದು,ಇಬ್ಬರನ್ನು ರಕ್ಷಿಸಲಾಗಿದೆ. ಇನ್ನೊಂದು ದೋಣಿ ‘ಪ್ರಸನ್ಜಿತ್’ ಅನ್ನು ಅಂತಾರಾಷ್ಟ್ರೀಯ ಜಲಗಡಿಯ ಬಳಿ ಪತ್ತೆ ಹಚ್ಚಿ ಅದರಲ್ಲಿದ್ದ ಎಲ್ಲ 13 ಮೀನುಗಾರರನ್ನು ರಕ್ಷಿಸ ಲಾಗಿದೆ ಎಂದು ದಕ್ಷಿಣ 24 ಪರಗಣಗಳ ಜಿಲ್ಲಾಧಿಕಾರಿ ಪಿ.ಬಿ.ಸಲೀಂ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
Next Story