ಪ್ರತಿಭಾವಂತ ಗಾಯಕರ ಶೋಧಕ್ಕಾಗಿ ‘ನೈಟಿಂಗೇಲ್ ಆಫ್ ಪುತ್ತೂರು’ ಕಾರ್ಯಕ್ರಮ
ಪುತ್ತೂರು, ಆ.14: ಗ್ರಾಮೀಣ ಭಾಗದ ಹಾಡುಗಾರರ ಪ್ರತಿಭೆಗಳನ್ನು ಗುರುತಿಸುವ ಹಾಗೂ ಪ್ರತಿಭಾವಂತ ಗಾಯಕರ ಶೋಧ ನಡೆಸುವ ಹಿನ್ನೆಲೆಯಲ್ಲಿ ‘ನೈಟಿಂಗೇಲ್ ಆಫ್ ಪುತ್ತೂರು’ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಸಮಾಜಸೇವಕಿ ಹಾಗೂ ಬೆಂಗಳೂರು ಜನತಾ ಸೇವಾ ಕೊ-ಆಪರೇಟಿವ್ ಬ್ಯಾಂಕ್ನ ನಿರ್ದೇಶಕಿ ಬಿ.ಎಸ್.ಕನ್ಯಾಕುಮಾರಿ ಶ್ರೀನಿವಾಸಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಪುತ್ತೂರು ವಿಧಾನಸಭಾ ವ್ಯಾಪ್ತಿಯ ಗಾಯಕ ಗಾಯಕಿಯರು ಭಾಗವಹಿಸಬಹುದಾಗಿದ್ದು, ಕನಿಷ್ಠ 2 ವರ್ಷವಾದವರು ಇಲ್ಲಿ ವಾಸ್ತವ್ಯ ಹೊಂದಿರಬೇಕು. 15ರಿಂದ 30 ವರ್ಷ ಒಳಗಿನವರಿಗೆ ಮಾತ್ರ ಅವಕಾಶವಿದ್ದು, ಟಿ.ವಿ ಹಾಗೂ ಆಕಾಶವಾಣಿಯ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅವಕಾಶವಿಲ್ಲ. ಹೆಸರು ನೋಂದಾವಣಿಗೆ ಆ.30 ಕೊನೆಯ ದಿನವಾಗಿದೆ. ಹೆಸರು ನೋಂದಾಯಿಸಿದ ಗಾಯಕ-ಗಾಯಕಿಯರಲ್ಲಿ ಅಂತಿಮವಾಗಿ 10 ಮಂದಿಯನ್ನು ಆಯ್ಕೆ ಮಾಡಿ, ಅವರಿಗೆ ಸಂಗೀತ ಕ್ಷೇತ್ರದ ನುರಿತ ವಾದ್ಯ ವೃಂದದವರಿಂದ ಉಚಿತ ತರಬೇತಿ ನೀಡಲಾಗುವುದು. ಆನಂತರ ಪುತ್ತೂರಿನಲ್ಲಿ ತೆರೆದ ಕ್ರೀಡಾಂಗಣದಲ್ಲಿ ಗ್ರಾಂಡ್ ಫಿನಾಲೆ ನಡೆಸಲಾಗುವುದು. ಇದರಲ್ಲಿ ಗೆದ್ದವರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಗುವುದು. ಪುತ್ತೂರು ವಿಧಾನಸಭಾ ವ್ಯಾಪ್ತಿಯ ಆಸಕ್ತ ಗಾಯಕ-ಗಾಯಕಿಯರು ಮೊ.ಸಂ. 9481505127, 9663753600 ಸಂಪರ್ಕಿಸಬಹುದು ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಮಲಾಕ್ಷಿ ಮೋಹನ್ ಉಪಸ್ಥಿತರಿದ್ದರು.