ಪ್ರಧಾನಿ ಮೋದಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ
ದೇಶಾದ್ಯಂತ 70ನೇ ಸ್ವಾತಂತ್ರ್ಯೋತ್ಸವ
ಹೊಸದಿಲ್ಲಿ, ಆ.15:ಎಪ್ಪತ್ತನೇಯ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೆಂಪುಕೋಟೆ ಮೇಲೆ ಇಂದು ಬೆಳಗ್ಗೆ ಧ್ವಜಾರೋಹಣ ನೆರವೇರಿಸಿದರು.
ಸತತ 3ನೆ ಬಾರಿ ಕೆಂಪುಕೋಟೆ ಮೇಲೆ ಧ್ವಜಾರೋಹಣ ಮಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ದೇಶದ ಜನತೆಗೆ ಸ್ವತಂತ್ರ ದಿನೋತ್ಸವದ ಶುಭ ಹಾರೈಸಿದರು.
ಧ್ವಜಾರೋಹಣಕ್ಕೂ ಮೊದಲು ರಾಜ್ಘಾಟ್ಗೆ ತೆರಳಿದ ಮೋದಿ ಅವರು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಸಮಾಧಿಗೆ ನಮನ ಸಲ್ಲಿಸಿದರು.
ಪ್ರಧಾನಿ ಭಾಷಣದ ಹೈಲೈಟ್ಸ್
* ಉಗ್ರವಾದ, ಅಮಾಯಕರನ್ನು ಬಲಿ ತೆಗೆದುಕೊಳ್ಳುವ ಉಗ್ರರ ಕೃತ್ಯವನ್ನು ಭಾರತ ಎಂದಿಗೂ ಸಹಿಸಲಾರದು.
*ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿವೆ ಆದರೆ, ಆದನ್ನು ಪರಿಹರಿಸಿಕೊಳ್ಳುವುದಕ್ಕೆ 125 ಕೋಟಿ ಮಿದುಳುಗಳಿವೆ.
*ದೇಶದಲ್ಲಿರುವ ಬಡತನ ನಿವಾರಣಿಗೆ ಸಂಘಟಿತ ಹೋರಾಟ ನಡೆಸಬೇಕಾಗಿದೆ.
* ನಮ್ಮ ವಿಜ್ಞಾನಿಗಳು 121 ಬಿತ್ತನೆ ಬೀಜ ತಳಿಗಳನ್ನು ಅಭಿವೃದ್ಧಿಪಡಿಸಿದ್ದಾರೆ. ನಾವು ಉತ್ಪಾದನೆಯನ್ನು ಹೆಚ್ಚಿಸಲು ಪ್ರಯತ್ನಿಸಬೇಕಾಗಿದೆ.
*ಸರಕಾರ ಐವತ್ತು ರೂ.ಗಳಿಗೆ ಎಲ್ಇಡಿ ಬಲ್ಬ್ ಗಳನ್ನು ಜನಸಮಾನ್ಯರಿಗೆ ದೊರೆಯವಂತೆ ಮಾಡಿದೆ.
*ಸ್ವಾತಂತ್ರ್ಯ ಹೋರಾಟಗಾರರ ಪಿಂಚನಿ ಶೇ20ರಷ್ಟು ಏರಿಕೆ ನಿರ್ಧಾರ.
*ದೇಶದ ಹದಿನೆಂಟು ಸಾವಿರ ಹಳ್ಳಿಗಳ ಪೈಕಿ ಹತ್ತು ಸಾವಿರ ಹಳ್ಳಿಗಳಿಗೆ ಸಂಪೂರ್ಣವಾಗಿ ವಿದ್ಯುತ್ ಸಂಪರ್ಕ ಸೌಲಭ್ಯ ಕಲ್ಪಿಸಲಾಗಿದೆ.
*ಅರುವತ್ತು ವರ್ಷಗಳಲ್ಲಿ ಈ ಹಿಂದೆ 14 ಕೋಟಿ ಜನರಿಗೆ ಅಡುಗೆ ಅನಿಲ ಸೌಲಭ್ಯ ಸಿಕ್ಕಿತ್ತು. ಕಳೆದ ಏಳು ತಿಂಗಳಲ್ಲಿ ನಾಲ್ಕು ಕೋಟಿ ಜನರಿಗೆ ಅಡುಗೆ ಅನಿಲ ಸಂಪರ್ಕ ಸೌಲಭ್ಯ ಒದಗಿಸಲಾಗಿದೆ.
*ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ದೇಶದ ಆರ್ಥಿಕತೆಗೆ ಬಲವನ್ನು ನೀಡಿದೆ. ಜಿಎಸ್ ಟಿ ಮಸೂದೆಗೆ ಬೆಂಬಲ ನೀಡಿದ ಎಲ್ಲಾ ಪಕ್ಷಗಳಿಗೆ ಧನ್ಯವಾದ .
* ಕೆಲವೇ ವಾರಗಳಲ್ಲಿ ಪಾಸ್ ಪೋರ್ಟ್ ಪಡೆಯುವ ಸೌಲಭ್ಯ ,.ಆನ್ ಲೈನ್ ಮೂಲಕ ಹಣವನ್ನು ಹಿಂಪಡೆಯುವ ಸೌಲಭ್ಯವನ್ನು ಕಲ್ಪಿಸಲಾಗಿದೆ.
*2022ರೊಳಗಾಗಿ ರೈತರ ಆದಾಯವನ್ನು ದುಪ್ಪಟ್ಟು ಮಾಡುವುದು ಸರಕಾರದ ಕನಸಾಗಿದೆ.ರೈತರ ಬೆಳೆ ನಷ್ಟ ತಪ್ಪಿಸಲು ‘ರೈತರ ವಿಮಾ ಯೋಜನೆ’ ಜಾರಿಗೆ ತರಲಾಗಿದೆ.
*ಶೇ.10ರಷ್ಟು ಇದ್ದ ಹಣದುಬ್ಬರವನ್ನು ಶೇ.6ಕ್ಕೆ ಇಳಿಸಲಾಗಿದೆ
*ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ದೊಡ್ಡದು.ಹೆಣ್ಮಕ್ಕಳ ಸಬಲೀಕರಣ ಸರಕಾರದ ಮೊದಲ ಆದ್ಯತೆಯಾಗಿದೆ.