ಪುತ್ತೂರು: ಮರಬಿದ್ದು ಮನೆಗೆ ಹಾನಿ
![ಪುತ್ತೂರು: ಮರಬಿದ್ದು ಮನೆಗೆ ಹಾನಿ ಪುತ್ತೂರು: ಮರಬಿದ್ದು ಮನೆಗೆ ಹಾನಿ](https://www.varthabharati.in/sites/default/files/images/articles/2016/08/15/15ptr6-haani.jpg)
ಪುತ್ತೂರು, ಆ.15: ಮರವೊಂದು ಬಿದ್ದು ಮನೆಗೆ ಹಾನಿಯಾದ ಘಟನೆ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಕರ್ನೂರು ಮೈರೋಳು ಎಂಬಲ್ಲಿ ರವಿವಾರ ರಾತ್ರಿ ನಡೆದಿದೆ.
ಮೈರೋಳು ನಿವಾಸಿ ಖತೀಜಮ್ಮ ಎಂಬವರದ್ದು ಹಾನಿಗೊಳಗಾದ ಮನೆ. ರಾತ್ರಿ ಬೀಸಿದ ಗಾಳಿ ಮಳೆಗೆ ಮನೆಯ ಸಮೀಪದಲ್ಲೇ ಇದ್ದ ಉಪ್ಪಳಿಗೆ ಮರವು ಮನೆಯ ಮೇಲೆ ಬಿದ್ದಿತ್ತು. ಇದರಿಂದಾಗಿ ಸುಮಾರು 1 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಮನೆಯೊಳಗಿದ್ದವರಿಗೆ ಯಾವುದೇ ಅಪಾಯ ಉಂಟಾಗಲಿಲ್ಲ.
ಘಟನಾ ಸ್ಥಳಕ್ಕೆ ಸೋಮವಾರ ಗ್ರಾಮಕರಣಿಕ ರಾಧಾಕೃಷ್ಣ, ಗ್ರಾಪಂ ಉಪಾಧ್ಯಕ್ಷ ಶ್ರೀರಾಂ ಪಕ್ಕಳ ಹಾಗೂ ಸದಸ್ಯ ಎಂ.ಬಿ. ಇಬ್ರಾಹೀಂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Next Story