Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಎಲ್‌ಟಿಟಿಇಯ ಮಾಜಿ ಉಪ ನಾಯಕ ‘ರಾ’ದ...

ಎಲ್‌ಟಿಟಿಇಯ ಮಾಜಿ ಉಪ ನಾಯಕ ‘ರಾ’ದ ಏಜೆಂಟ್

ನೀನಾ ಗೋಪಾಲ್

ವಾರ್ತಾಭಾರತಿವಾರ್ತಾಭಾರತಿ15 Aug 2016 11:51 PM IST
share

ಹೊಸದಿಲ್ಲಿ, ಆ.15: ಎಲ್‌ಟಿಟಿಇಯ ಅತ್ಯುನ್ನತ ನಾಯಕ ವೇಲುಪಿಳ್ಳೆ ಪ್ರಭಾಕರನ್‌ಗೆ ಸಹಾಯಕನಾಗಿದ್ದ ಹಾಗೂ ಒಂದು ಕಾಲದಲ್ಲಿ ಸಂಘಟನೆಯ ಉಪನಾಯಕನಾಗಿದ್ದವನೊಬ್ಬ ‘ರಾ’ದ ಏಜೆಂಟ್ ಆಗಿದ್ದನು. ಆತನನ್ನು 1989ರಷ್ಟು ಮೊದಲೇ ನೇಮಿಸಿಕೊಳ್ಳಲಾಗಿತ್ತೆಂದು ಹೊಸ ಪುಸ್ತಕವೊಂದು ಹೇಳಿದೆ.

ಗೋಪಾಲ ಸ್ವಾಮಿ ಮಹೇಂದ್ರ ರಾಜನ್ ಅಲಿಯಾಸ್ ಮಹತ್ತಾಯ ಎಂಬ ಆ ವ್ಯಕ್ತಿ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗದ ಗೂಢಚಾರನಾಗಿದ್ದನೆಂದು 1991ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯಾಗುವ ಸ್ವಲ್ಪವೇ ಮೊದಲು ಅವರ ಸಂದರ್ಶನ ನಡೆಸಿದ್ದ ಪತ್ರಕರ್ತೆ ನೀನಾ ಗೋಪಾಲ್ ತಿಳಿಸಿದ್ದಾರೆ.
1989ರಷ್ಟು ಮೊದಲೇ ಆ ವ್ಯಕ್ತಿಯನ್ನು ಪ್ರಭಾಕರನ್‌ನ ನುಸುಳಲು ಅಸಾಧ್ಯವಾಗಿದ್ದ ಸಂಘಟನೆಯಲ್ಲಿ ತನ್ನ ಗೂಢಚರನನ್ನಾಗಿ ‘ರಾ’ ಬೆಳೆಸಿತ್ತು ಹಾಗೂ ನೇಮಿಸಿತ್ತೆಂದು ಅವರು ತನ್ನ ‘ದಿ ಅಸಾಸಿನೇಶನ್ ಆಫ್ ರಾಜೀವ್ ಗಾಂಧಿ (ಪೆಂಗ್ವಿನ್)’ ಪ್ರಸ್ತಕದಲ್ಲಿ ಹೇಳಿದ್ದಾರೆ.
ಬಂಡುಕೋರ ಚಳವಳಿಯನ್ನು ಒಳಗಿನಿಂದಲೇ ಬುಡ ಮೇಲುಗೊಳಿಸಿ, ಪ್ರಭಾಕರನ್‌ನನ್ನು ಕೊಂದು, ಎಲ್‌ಟಿಟಿಇಯ ನಿಯಂತ್ರಣವನ್ನು ಕೈಗೆ ಪಡೆದುಕೊಳ್ಳುವ ಕೆಲಸವನ್ನು ಆತನಿಗೆ ವಹಿಸಲಾಗಿತ್ತೆಂದು ನೀನಾ ಬರೆದಿದ್ದಾರೆ.
‘ರಾ’ದೊಂದಿಗೆ ಮಹತ್ತಾಯನ ಸಂಪರ್ಕದ ಬಗ್ಗೆ ಭಾರತದ ಸೇನಾ ಗೂಢಚರ್ಯೆ ಅಥವಾ ಐಬಿಗೆ ತಿಳಿದಿರಲಿಲ್ಲ. ಆತನನ್ನು ಭಾರತೀಯ ಗೂಢಚರ್ಯೆ ಏಜೆಂಟ್ ಆಗಿದ್ದನೆಂಬ ಆರೋಪದಲ್ಲಿ ಬಳಿಕ ಎಲ್‌ಟಿಟಿಇ ಹತ್ಯೆ ಮಾಡಿತ್ತೆಂದು ಅವರು ತಿಳಿಸಿದ್ದಾರೆ.
1993ರ ಜನವರಿಯಲ್ಲಿ ತಮಿಳು ವ್ಯಾಘ್ರಗಳ ಹಡಗೊಂದರ ಬಗ್ಗೆ ಭಾರತೀಯರಿಗೆ ಮಾಹಿತಿ ನೀಡಿ, ಪ್ರಭಾಕರನ್‌ನ ಬಾಲ್ಯ ಮಿತ್ರ ಹಾಗೂ ಜಾಫ್ನಾದ ಮಾಜಿ ಎಲ್‌ಟಿಟಿಇ ಕಮಾಂಡರ್ ಕಿಟ್ಟು ಎಂಬಾತನ ಸಾವಿಗೆ ಕಾರಣನಾದವನು ಮಹತ್ತಾಯನೆಂಬ ಶಂಕೆ ಎಲ್‌ಟಿಟಿಇಗೆ ಇತ್ತೆನ್ನಲಾಗಿದೆ.

ಮಹತ್ತಾಯನನ್ನು ಎಲ್‌ಟಿಟಿಇ ಶಿಬಿರಕ್ಕೆ ಒಯ್ದು ಆತ ಮಾತಾಡಲು ಅಥವಾ ಎದ್ದು ನಿಲ್ಲಲು ಅಶಕ್ತನಾಗುವ ವರೆಗೆ ಚಿತ್ರಹಿಂಸೆ ನೀಡಿ, 19 ತಿಂಗಳ ಬಳಿಕ ಕೊಲ್ಲಲಾಯಿತು. ಅವನ ಸುಮಾರು 257 ಮಂದಿ ಅನುಚರರನ್ನೂ ಕೊಂದು ಅವರ ಶವಗಳನ್ನು ಎಲ್‌ಟಿಟಿಇ ಮಾದರಿಯಲ್ಲಿ ಗುಂಡಿಯೊಂದರೊಳಗೆ ಎಸೆದು ಬೆಂಕಿ ಹಚ್ಚಲಾಗಿತ್ತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X