ಉಡುಪಿ: ವಾರ್ತಾ ಇಲಾಖೆ ಪ್ರಚಾರ ವಾಹನಕ್ಕೆ ಚಾಲನೆ
ಉಡುಪಿ, ಆ.15:ರಾಜ್ಯ ಸರಕಾರದ ಹಲವು ಮಹತ್ವಾಕಾಂಕ್ಷಿ ಯೋಜನೆಗಳು ಮತ್ತು ‘ಸ್ವಾಂತಂತ್ರದಿಂದ ಸಮಾನತೆ ಕಡೆಗೆ’ ಎನ್ನುವ ಧ್ಯೇಯದೊಂದಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವಿಶೇಷವಾಗಿ ವಿನ್ಯಾಸ ಗೊಳಿಸಿರುವ ಪ್ರಚಾರ ವಾಹನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಇಂದು ಬೀಡಿನಗುಡ್ಡೆಯ ಮಹಾತ್ಮ ಗಾಂಧಿ ಬಯಲು ರಂಗ ಮಂದಿರದಲ್ಲಿ ಚಾಲನೆ ನೀಡಿದರು.
ಈ ವಾಹನವು ಇಂದಿನಿಂದ 20 ದಿನಗಳ ಕಾಲ ಉಡುಪಿ ಜಿಲ್ಲಾದ್ಯಂತ ಸಂಚರಿ ಸಲಿದೆ. ಈ ವೇಳೆ ಸರಕಾರದ ಅಭಿವೃದ್ಧಿ ಯೋಜನೆಗಳ ಕುರಿತು ಜನ ಜಾಗೃತಿ ಮೂಡಿಸಲು ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ
Next Story