ಮಳೆಯಾಲಂ ಚಿತ್ರ ಸಾಹಿತಿ ಟಿ.ಎ.ರಝಾಕ್ ನಿಧನ
ಕೊಚ್ಚಿ, ಆ.16: ಸಣ್ಣ ಕಥೆಗಾರ ಹಾಗೂ ಚಿತ್ರಕಥೆ ರಚನಾಕಾರರಾದ ಟಿ.ಎ.ರಝಾಕ್ ನಿಧನರಾಗಿದ್ದಾರೆ. ಅವರಿಗೆ 58ವರ್ಷ ವಯಸ್ಸಾಗಿತ್ತು. ಕೊಚ್ಚಿಯಖಾಸಗಿ ಆಸ್ಪತ್ರೆಯಲ್ಲಿ ಅವರು ನಿಧನರಾಗಿದ್ದು ಕರುಳಿಗೆ ಸಂಬಂಧಿಸಿದ ರೋಗಕ್ಕಾಗಿ ಅವರು ಶಸ್ತ್ರ ಚಿಕಿತ್ಸೆಗೊಳಗಾಗಿದ್ದರು. ಅವರ ಪಾರ್ಥಿವ ಶರೀರವನ್ನು ಇಂದುಬೆಳಗ್ಗೆ 8:30ಕ್ಕೆ ಸಾರ್ವಜನಿಕರ ದರ್ಶನಕ್ಕೆ ಇರಿಸಿ,11ಗಂಟೆಗೆ ತುರಕ್ಕಲ್ ಜುಮಾ ಮಸೀದಿಯಲ್ಲಿ ಜನಾಝ ನಮಾಝ್ ನಿರ್ವಹಿಸಲಾಗುವುದು ಎಂದು ವರದಿಯಾಗಿದೆ. ವಿಷ್ಣುಲೋಕಂ, ಘೋಷಾಯಾತ್ರ, ಕಾಣಾಕಿನಾವ್,ಪೆರುಮಯಕ್ಕಾಲಂ, ಬಸ್ ಕಂಡಕ್ಟರ್, ಎಂಡೆ ಶ್ರೀಕುಟ್ಟಿಕ್ಕ್, ನಾಡೋಡಿ, ಅನಶ್ವರಂ, ಗಝಲ್, ಭೂಮಿಗೀತಾ. ಸ್ನೇಹಂ, ತಾಲೋಲಂ, ಸಾಫಲ್ಯಂ, ವಾಲ್ಕಣ್ಣಾಡಿ, ಮಾರಾತ್ತ ನಾಡ್, ವೇಷಂ, ರಾಪ್ಪಗಲ್, ಪರುಂದ್, ಮಾಯಾಬಝಾರ್, ಪೆಣ್ಪಟ್ಟಣಂ, ಸೈಗಾಲ್ ಪಾಡುಗೆಯಾನ್, ಮೂನ್ನಾಂನಾಳ್ ಸಹಿತ ಇಪ್ಪತ್ತೈದಕ್ಕೂ ಹೆಚ್ಚುಸಿನೆಮಾಗಳಿಗೆ ಅವರು ಚಿತ್ರಕಥೆಯನ್ನು ರಚಿಸಿದ್ದರು ಎಂದು ವರದಿ ತಿಳಿಸಿದೆ.
Next Story