ತೇಜಸ್ವಿರಾಜ್ ಮೇಲಿನ ಹಲ್ಲೆ ಪ್ರಕರಣ: ಇಬ್ಬರ ಬಂಧನ
![ತೇಜಸ್ವಿರಾಜ್ ಮೇಲಿನ ಹಲ್ಲೆ ಪ್ರಕರಣ: ಇಬ್ಬರ ಬಂಧನ ತೇಜಸ್ವಿರಾಜ್ ಮೇಲಿನ ಹಲ್ಲೆ ಪ್ರಕರಣ: ಇಬ್ಬರ ಬಂಧನ](https://www.varthabharati.in/sites/default/files/images/articles/2016/08/16/bhat_290712_ahinda1.jpg)
ಮಂಗಳೂರು, ಆ. 16: ನಗರದ ಸಿಟಿ ಸೆಂಟರ್ ಮಾಲ್ನಲ್ಲಿ ಕಾಂಗ್ರೆಸ್ ಮುಖಂಡ ತೆಜಸ್ವಿರಾಜ್ ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿ ಸಿಟಿ ಸೆಂಟರ್ನ ಸೆಕ್ಯುರಿಟಿ ಗಾರ್ಡ್ಗಳಿಬ್ಬರನ್ನು ಬಂದರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಅರುಣಾಚಲ ಪ್ರದೇಶದ ರಘುನಾಥ (25) ಹಾಗೂ ಒಡಿಸ್ಸಾದ ದಿಲೀಪ್ (21) ಎಂದು ಗುರುತಿಸಲಾಗಿದೆ.
ತೇಜಸ್ವಿರಾಜ್ ಅವರು ಸೋಮವಾರ ಸಿಟಿ ಸೆಂಟರ್ ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಬ್ಯಾರಿಕೇಟ್ಗಳಿಗೆ ಸಂಬಂಧಿಸಿ ಸುಕ್ಯುರಿಟ್ ಗಾರ್ಡ್ರ ಮಧ್ಯೆ ಮಾತಿನ ಚಕಮಕಿ ನಡೆದಿತ್ನೆನ್ನಲಾಗಿದೆ. ಈ ಸಂದರ್ಭದಲ್ಲಿ ಆಕ್ರೋಶಗೊಂಡ ಇಬ್ಬರು ಸೆಕ್ಯುರಿಟಿ ಗಾರ್ಡ್ಗಳು ತೇಜಸ್ವಿರಾಜ್ ಮೇಲೆ ಹಲ್ಲೆ ನಡೆಸಿದ್ದರು. ಗಂಭೀರ ಗಾಯಗೊಂಡಿದ್ದ ಅವರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
Next Story