ಗುತ್ತಿಗಾರು: ಕಾಡಿನಲ್ಲಿ ಬೀಜ ಬಿತ್ತನೆ ಕಾರ್ಯಕ್ರಮ
![ಗುತ್ತಿಗಾರು: ಕಾಡಿನಲ್ಲಿ ಬೀಜ ಬಿತ್ತನೆ ಕಾರ್ಯಕ್ರಮ ಗುತ್ತಿಗಾರು: ಕಾಡಿನಲ್ಲಿ ಬೀಜ ಬಿತ್ತನೆ ಕಾರ್ಯಕ್ರಮ](https://www.varthabharati.in/sites/default/files/images/articles/2016/08/17/16sub02.jpg)
ಸುಬ್ರಹ್ಮಣ್ಯ, ಆ.16: ಅರಣ್ಯ ಇಲಾಖೆ ಸುಬ್ರಹ್ಮಣ್ಯ ವಲಯ, ಗ್ರಾಮ ಅರಣ್ಯ ಸಮಿತಿ ನಾಲ್ಕೂರು, ಇಕೋ ಕ್ಲಬ್ ಗುತ್ತಿಗಾರು, ಕುರಿಯಕೋಸ್ ಆಂಗ್ಲ ವಿದ್ಯಾ ಸಂಸ್ಥೆ ಗುತ್ತಿಗಾರು, ಆದರ್ಶ ಯೂತ್ ಕ್ಲಬ್ ಹಾಲೆಮಜಲು, ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಗುತ್ತಿಗಾರು, ಗ್ರಾಮ ಗೌಡ ಸಮಿತಿ ನಾಲ್ಕೂರು, ಜವಾಹರ್ ಯುವಕ ಮಂಡಲ ನಡುಗಲ್ಲು, ತರುಣ ಯುವಕ ಮಂಡಲ ಮೆಟ್ಟಿನಡ್ಕ ಇವುಗಳ ಆಶ್ರಯದಲ್ಲಿ ನಾಲ್ಕೂರು ಗ್ರಾಮಗಳ ಅರಣ್ಯಗಳಲ್ಲಿ ಬೀಜಬಿತ್ತನೆ ಕಾರ್ಯಕ್ರಮ ನಡೆಯಿತು.
ಹಾಲೆಮಜಲಿನ ವೆಂಕಟೇಶ್ವರ ಸಭಾಂಗಣ ದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ನಾಲ್ಕೂರು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಪಿ ಆರ್ ಪದ್ಮನಾಭಗೌಡ ಅಧ್ಯಕ್ಷತೆ ವಹಿಸಿದ್ದರು. ವನ್ಯಜೀವಿ ಪರಿಪಾಲಕ ಕಿರಣ್ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳಾಗಿ ಗುತ್ತಿಗಾರು
ಗ್ರಾಪಂ ಅಧ್ಯಕ್ಷ ಅಚ್ಚುತ ಗುತ್ತಿಗಾರು, ಸಾಹಿತಿ ಎ.ಕೆ. ಹಿಮಕರ, ಗುತ್ತಿಗಾರು ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಶ್ರೀನಿವಾಸ್, ಆದರ್ಶ ಯೂತ್ ಕ್ಲಬ್ ಕಾರ್ಯದರ್ಶಿ ಪುನಿತ್ ಹಾಲೆಮಜಲು, ಉಪ ವಲಯಾರಣ್ಯಾಧಿಕಾರಿ ಅಜಿತ್ ಕುಮಾರ್ ಉಪಸ್ಥಿತರಿದ್ದರು. ಹರೀಶ್ ಕುಳ್ಳಂಪಾಡಿ ವಂದಿಸಿದರು.