Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಸೋಮಾರಿಗಳೇ, ನಿಮಗೊಂದು ಶುಭ ಸುದ್ದಿಯಿದೆ!

ಸೋಮಾರಿಗಳೇ, ನಿಮಗೊಂದು ಶುಭ ಸುದ್ದಿಯಿದೆ!

ವಾರ್ತಾಭಾರತಿವಾರ್ತಾಭಾರತಿ17 Aug 2016 9:03 PM IST
share
ಸೋಮಾರಿಗಳೇ, ನಿಮಗೊಂದು ಶುಭ ಸುದ್ದಿಯಿದೆ!

ಸೋಮಾರಿತನಕ್ಕೆ ನೀವೆಂದಾದರೂ ಶಿಕ್ಷೆ ಅನುಭವಿಸಿದ್ದೀರೇನು? ಸೋಮಾರಿಗಳಿಗೆ ಇಲ್ಲೊಂದು ಶುಭ ಸುದ್ದಿಯಿದೆ. ಆರೋಗ್ಯ ಮನಶ್ಶಾಸ್ತ್ರದ ಜರ್ನಲ್ ನಡೆಸಿರುವ ಸಂಶೋಧನೆಯೊಂದು ಬುದ್ಧಿವಂತ ವ್ಯಕ್ತಿಗಳು ಸಾಮಾನ್ಯವಾಗಿ ಸಕ್ರಿಯವಾಗಿ ಕಾಲ ಕಳೆಯುವುದಕ್ಕಿಂತ ಸೋಮಾರಿಯಾಗಿರುವುದೇ ಹೆಚ್ಚು ಎಂದು ಹೇಳಿದೆ.

ಅಧಿಕ ಐಕ್ಯು ಇರುವ ವ್ಯಕ್ತಿಗಳಿಗೆ ಬೇಗನೇ ಬೋರ್ ಹೊಡೆಯುವುದಿಲ್ಲ. ಇದೇ ಕಾರಣದಿಂದ ಅವರು ಹೆಚ್ಚು ಸಮಯವನ್ನು ಕೆಲಸ ಮಾಡುವ ಬದಲಾಗಿ ಚಿಂತನೆಯಲ್ಲೇ ಕಾಲ ಕಳೆಯುತ್ತಾರೆ. ಸಕ್ರಿಯ ವ್ಯಕ್ತಿಗಳು ಹೆಚ್ಚು ಸೋಮಾರಿಯಾಗಿ ಕಳೆಯುವುದಿಲ್ಲ, ಏಕೆಂದರೆ ಅವರು ದೈಹಿಕ ಚಟುವಟಿಕೆಗಳಿಂದ ತಮ್ಮ ಮನಸ್ಸನ್ನು ಪ್ರಚೋದಿಸಿಕೊಳ್ಳುತ್ತಾರೆ. ಅವರು ಕಡಿಮೆ ಚಿಂತನೆ ಮಾಡುತ್ತಾರೆ ಅಥವಾ ಬೇಗನೇ ಬೋರ್ ಹೊಡೆಸಿಕೊಳ್ಳುತ್ತಾರೆ ಎಂದು ಅಧ್ಯಯನ ಹೇಳಿದೆ.

ಫ್ಲೋರಿಡಾ ಗಲ್ಫ್ ಕರಾವಳಿ ವಿಶ್ವವಿದ್ಯಾಲಯದ ಸಂಶೋಧಕರು 30 ನಿಮಿಷಗಳ ಹಳೇ ಪರೀಕ್ಷೆಯೊಂದನ್ನು ವಿದ್ಯಾರ್ಥಿಗಳ ಸಮೂಹಕ್ಕೆ ಕೊಟ್ಟು ಈ ಅಧ್ಯಯನ ಮಾಡಿದ್ದಾರೆ. ಚಿಂತಿಸುವ ಅಗತ್ಯದ ಬಗ್ಗೆ ಹೆಚ್ಚು ಆಸಕ್ತಿ ವ್ಯಕ್ತಪಡಿಸಿರುವ 30 ವಿದ್ಯಾರ್ಥಿಗಳು ಮತ್ತು ಮಾನಸಿಕವಾಗಿ ಒತ್ತಡ ಹೇರುವ ಯಾವುದೇ ಕೆಲಸವನ್ನು ಹೆಚ್ಚು ಇಷ್ಟಪಡದೆ ಇರುವ 30 ವಿದ್ಯಾರ್ಥಿಗಳಿಗೆ ನಡೆಸಿದ ಸಂಶೋಧನೆಯಲ್ಲಿ ಈ ವಿವರ ತಿಳಿದುಬಂದಿದೆ.

ಇವರಿಗೆ ನಡೆಸಿರುವ ಪ್ರಾಥಮಿಕ ಪರೀಕ್ಷೆಯಲ್ಲಿ, "ಸಮಸ್ಯೆಗಳಿಗೆ ಹೊಸ ಪರಿಹಾರಗಳು ಬರುವಂತಹ ಕೆಲಸವನ್ನು ಇಷ್ಟಪಡುತ್ತೇನೆ" ಮತ್ತು "ನನಗೆ ಎಷ್ಟು ಅಗತ್ಯವೋ ಅಷ್ಟೇ ಕಠಿಣವಾಗಿ ನಾನು ಆಲೋಚಿಸುತ್ತೇನೆ" ಎನ್ನುವ ಎರಡು ಆಯ್ಕೆಗಳನ್ನು ನೀಡಲಾಗಿತ್ತು. ಹೀಗೆ 30 ಮಂದಿ ಚಿಂತಕರು ಮತ್ತು 30 ಮಂದಿ ಚಿಂತಕರಲ್ಲದವರನ್ನು ಆರಿಸಲಾಗಿದೆ. ಅವರೆಷ್ಟು ದೈಹಿಕವಾಗಿ ಸಕ್ರಿಯರಾಗಿದ್ದಾರೆ ಎಂದು ತಿಳಿದುಕೊಳ್ಳಲು ಏಳು ದಿನಗಳ ಕಾಲ ಅವರ ನಾಡಿಗೆ ಧರಿಸಲು ಅಕ್ಸಲರೋಮೀಟರ್ ಕೊಡಲಾಗಿತ್ತು.

ಫಲಿತಾಂಶದಲ್ಲಿ ಯೋಚಿಸುವ ಸಮೂಹವು ವಾರದ ದಿನಗಳಲ್ಲಿ ಅತೀ ಕಡಿಮೆ ಸಕ್ರಿಯವಾಗಿರುವುದು ಕಂಡುಬಂದಿದೆಯಾದರೂ ವಾರಾಂತ್ಯದಲ್ಲಿ ಎರಡೂ ಸಮೂಹಗಳ ನಡುವೆ ವ್ಯತ್ಯಾಸವಿರಲಿಲ್ಲ. ಈ ಫಲಿತಾಂಶವನ್ನು ಅರ್ಥ ಮಾಡಿಕೊಳ್ಳುವುದು ಸಂಶೋಧಕರಿಗೂ ಕಷ್ಟವಾಗಿತ್ತು.

ಸಂಶೋಧನೆಯ ನೇತೃತ್ವ ವಹಿಸಿರುವ ಡಾಡ್ ಮೆಕ್ಲರಿ ಪ್ರಕಾರ ಬುದ್ಧಿವಂತರಾಗಿದ್ದೂ ಸೋಮಾರಿಗಳಾಗುವುದು ಜಡವಾದ ಜೀವನಶೈಲಿಗೆ ಕಾರಣವಾಗಬಹುದು ಮತ್ತುಅದರಿಂದ ನಕಾರಾತ್ಮಕ ಆರೋಗ್ಯ ಸಮಸ್ಯೆಗಳು ಕಾಡಬಹುದು ಎಂದೂ ಸಹ ಎಚ್ಚರಿಸಿದ್ದಾರೆ. "ಆರೋಗ್ಯಕರ ಜೀವನಕ್ಕೆ ಸಕ್ರಿಯ ಜೀವನಶೈಲಿ ಅಗತ್ಯವಿದೆ. ಕಡಿಮೆ ಸಕ್ರಿಯರಾಗಿರುವುದು ಅರಿವಾದಲ್ಲಿ ಮತ್ತು ನಿಷ್ಕ್ರಿಯತೆಯ ನಷ್ಟದ ಬಗ್ಗೆ ತಿಳಿದುಕೊಂಡಲ್ಲಿ ಹೆಚ್ಚು ಚಿಂತಿಸುವ ವ್ಯಕ್ತಿಗಳು ಇಡೀ ದಿನ ಸಕ್ರಿಯರಾಗಲು ಪ್ರಯತ್ನಿಸಬಹುದು. ಸೋಮಾರಿತನ ಎಂದ ಕೂಡಲೇ ಅತೀ ಬುದ್ಧಿವಂತರೇನೂ ಆಗಿರುವುದಿಲ್ಲ. ಬುದ್ಧಿವಂತ ವ್ಯಕ್ತಿಗಳು ರಾತ್ರಿ ತಡವಾಗಿ ಮಲಗಿ ತಮ್ಮ ಜೀವನವನ್ನು ಹೆಚ್ಚು ಗೊಂದಲಮಯವಾಗಿಸಿಕೊಂಡಿರುವುದು ಸತ್ಯ" ಎನ್ನುವುದು ಅಧ್ಯಯನಕಾರರ ಅಭಿಪ್ರಾಯ.

ಕೃಪೆ: www.huffingtonpost.ca

share
ವಾರ್ತಾಭಾರತಿ
ವಾರ್ತಾಭಾರತಿ
Next Story
X