Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆಯರಿಗೆ...

ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆಯರಿಗೆ ಬೂಟಿನಿಂದ ನೀರು ಕುಡಿಸುವ ಪದ್ಧತಿ !

ಅಮಾನವೀಯತೆಯ ಪರಮಾವಧಿ

ವಾರ್ತಾಭಾರತಿವಾರ್ತಾಭಾರತಿ18 Aug 2016 5:34 PM IST
share
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆಯರಿಗೆ ಬೂಟಿನಿಂದ ನೀರು ಕುಡಿಸುವ ಪದ್ಧತಿ !

ಭಿಲ್ವಾರ, ರಾಜಸ್ಥಾನ,ಆ.18 : ಸ್ವಾತಂತ್ರ್ಯೋತ್ತರ ಭಾರತ ಸಾಧಿಸಿದ ಪ್ರಗತಿ ಅದ್ಭುತ ಎಂದು ನಾವು ನಮ್ಮ ಬೆನ್ನನ್ನೇ ತಟ್ಟಿಕೊಳ್ಳುತ್ತಿರಬಹುದು. ಆದರೆ ಕೆಲವೊಂದು ಕಡೆ ಧಾರ್ಮಿಕತೆಯ ಸೋಗಿನಲ್ಲಿ ತೀರಾ ಅಮಾನವೀಯ ಅಂಧಶ್ರದ್ಧೆಗಳು ತಾಂಡವವಾಡುತ್ತಿದೆಯೆಂಬುದಕ್ಕೆ ಇಲ್ಲಿದೆ ಒಂದು ಜ್ವಲಂತ ಉದಾಹರಣೆ.

ರಾಜಸ್ಥಾನದ ಭಿಲ್ವಾರಾದಲ್ಲಿರುವ ದೇವಸ್ಥಾನವೊಂದರಲ್ಲಿಭೂತೋಚ್ಛಾಟನೆಯ ನೆಪದಲ್ಲಿ ಅಮಾಯಕ ಮಹಿಳೆಯರನ್ನು ಅತ್ಯಂತ ನಿಕೃಷ್ಟವಾಗಿ ನಡೆಸಿಕೊಳ್ಳಲಾಗುತ್ತಿದೆಯಲ್ಲದೆ ಅವರ ಜೀವವನ್ನೂ ಅಪಾಯಕ್ಕೆ ಬಲಿ ಡಲಾಗುತ್ತಿದೆಯೆಂದು ನ್ಯೂಸ್ 18.ಕಾಂ ವರದಿಯೊಂದು ಹೇಳಿದೆ. ಈ ಅತ್ಯಂತ ಅಮಾನವೀಯ ಪದ್ಧತಿಯಲ್ಲಿ ಮಹಿಳೆಯರಿಗೆ ಬೂಟುಗಳಲ್ಲಿ ನೀರನ್ನು ಹಾಕಿ ಅದನ್ನು ಕುಡಿಯುವಂತೆ ಮಾಡಲಾಗುತ್ತದೆಯೆಂದು ವರದಿಯಲ್ಲಿ ತಿಳಿಸಲಾಗಿದೆ.

ಭಿಲ್ವಾರದಲ್ಲಿರುವ ಬಂಕ್ಯ ಮಾತಾ ದೇವಳದಲ್ಲಿ ಮಹಿಳೆಯರ ಭೂತೋಚ್ಛಾಟನೆ ಮಾಡುವವರೆಂದು ಹೇಳಲಾದ ಭೋಪಾಗಳುಮಹಿಳೆಯರನ್ನು ಹಲವಾರು ಕಠಿಣ ಹಾಗೂ ಅಷ್ಟೇ ಹೀನಾಯ ಕ್ರಮಗಳನ್ನು ಅನುಸರಿಸುವಂತೆ ಮಾಡುತ್ತಾರೆ. ಮಹಿಳೆಯರ ಈ ರೀತಿಯ ಶೋಷಣೆ ಹೊರ ಜಗತ್ತಿನಲ್ಲಿ ದೌರ್ಜನ್ಯವೆಂದೇ ಪರಿಗಣಿಸಬಹುದಾಗಿದೆ. ಈ ದೇವಳದಲ್ಲಿ ಬೂಟುಗಳನ್ನು ಮಹಿಳೆಯರು ತಲೆಯ ಮೇಲೆ ಹೊರುವಂತೆ ಮಾಡಲಾಗುತ್ತದೆ, ಬಾಯಿಯಲ್ಲಿ ಕಚ್ಚಿ ಹಿಡಿಯುವಂತೆ ಮಾಡಲಾಗುತ್ತದೆ ಹಾಗೂ ಕೊನೆಗೆ ಅದರಲ್ಲಿರುವ ನೀರನ್ನು ಕುಡಿಯುವಂತೆ ಮಾಡಲಾಗುತ್ತದೆ. ಮಹಿಳೆಯರು ಹೀಗೆ ಮಾಡುತ್ತಿರುವ ದೃಶ್ಯ ಈ ಗ್ರಾಮದಲ್ಲಿ ಸಾಮಾನ್ಯವಾಗಿದೆ.

ಮೇಲಾಗಿ ಅಲ್ಲಿರುವ ಭೋಪಾ ಅಥವಾ ತಾಂತ್ರಿಕರ ಅಣತಿಯಂತೆ ಕೆಲವೊಂದು ಮಹಿಳೆಯರ ಮೇಲಿನ ದೆವ್ವ ಬಿಡಿಸುವ ಸಲುವಾಗಿ ಅವರನ್ನು ಸುಮಾರು 200 ಮೆಟ್ಟಲುಗಳಿಂದ ಕೆಳಗೆ ದರದರನೆ ಎಳೆಯಲಾಗುತ್ತದೆ.

ಮಾಂತ್ರಿಕರು ಕೆಲವು ಮಹಿಳೆಯರ ಮೈಮೇಲೆ ಆವರಿಸಿರುವ ದೆವ್ವವನ್ನು ಬಿಡಿಸಲು ಸಶಕ್ತರಾಗಿದ್ದಾರೆ ಎಂದು ದೃಢವಾಗಿ ನಂಬಿದ್ದಾರೆ ಭಿಲ್ವಾರಾದ ಜನತೆ.. ಕೆಲವು ಮಹಿಳೆಯರನ್ನಂತೂ ಇಲ್ಲಿ ಚಪ್ಪಲಿಗಳಿಂದ ಹೊಡೆದು ಅವರ ಮೈಮೇಲಿರುವ ‘ದೆವ್ವವನ್ನು’ ಬಿಡಿಸಲಾಗುತ್ತದೆ.

ಈ ಅಮಾನವೀಯಪದ್ಧತಿಯನ್ನು ಗಂಭೀರವಾಗಿ ಪರಿಗಣಿಸಿರುವಪೊಲೀಸರು ಇಲ್ಲಿಯ ತನಕ ಮೂರು ಮಂದಿಯನ್ನು ಬಂಧಿಸಿದ್ದು ಯಾರೂ ಇಂತಹ ಪದ್ಧತಿಯನ್ನು ಅನುಸರಿಸದಂತೆ ಎಚ್ಚರಿಸಿದ್ದಾರಲ್ಲದೆ ಸ್ಥಳದಲ್ಲಿ ಪೊಲೀಸರನ್ನೂ ನಿಯೋಜಿಸಿದ್ದಾರೆ. ಇಂತಹ ಅಮಾನವೀಯ ಪದ್ಧತಿಯನ್ನು ಅನುಸರಿಸುವವರ ವಿರುದ್ಧ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಭಿಲ್ವಾರ ಎಸ್ಪಿತಿಳಿಸಿದ್ದಾರಲ್ಲದೆ ಸಾರ್ವಜನಿಕರು ಇಂತಹ ಮೂಢನಂಬಿಕೆಗಳಿಗೆ ಬಲಿಯಾಗದಂತೆ ಎಚ್ಚರಿಕೆ ವಹಿಸುವಂತೆ ಹೇಳಿದ್ದಾರೆ.

ವರದಿ:

ಚಿತ್ರಗಳು:

ಕೃಪೆ: news18.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X