ತಾಯಿಯ ಕಣ್ಣೀರು ಇವರನ್ನು ಬಿಡದು: ಮೃತ ಪ್ರವೀಣ್ ಪೂಜಾರಿಯ ಬಾವ ಆಕ್ರೋಶ

ಮೃತ ಪ್ರವೀಣ್ ಪೂಜಾರಿ
ಉಡುಪಿ, ಆ.18: ಗೋರಕ್ಷಣೆಯ ಹೆಸರಿನಲ್ಲಿ ಪ್ರವೀಣ್ ಪೂಜಾರಿಯವರನ್ನು ಹತ್ಯೆ ಮಾಡಲಾಗಿದೆ. ಒಂದು ತಾಯಿಗೆ ಮಗ ಇಲ್ಲದಂತೆ ಮಾಡಿದ್ದಾರೆ. ತಾಯಿಯ ಕಣ್ಣೀರು ಇವರನ್ನು ಬಿಡುವುದಿಲ್ಲ ಎಂದು ಮೃತ ಪ್ರವೀಣ್ ಪೂಜಾರಿ ಅವರ ಬಾವ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಕುರಿತಂತೆ ‘ವಾರ್ತಾಭಾರತಿ’ಗೆ ಪ್ರತಿಕ್ರಿಯಿಸಿದ ಅವರು, ಹಿಂದೂ ಸಂಘಟನೆಯ ಕಾರ್ಯಕರ್ತರು ಎಂದು ಹೇಳಿಕೊಂಡು ಇಂತಹ ನೀಚ ಕೃತ್ಯ ಮಾಡಬಾರದು. ಇವರಿಗೆ ತಕ್ಕ ಶಿಕ್ಷೆಯಾಗಬೇಕು. ಇಂತಹ ಪರಿಸ್ಥಿತಿ ಮುಂದೆ ಆಗಬಾರದು. ಆ ರೀತಿಯಲ್ಲಿ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
Next Story





