Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ‘‘ನಿಮ್ಮವರೇ ಗೆಲ್ಲಬೇಕು ಎಂದಾದರೆ...

‘‘ನಿಮ್ಮವರೇ ಗೆಲ್ಲಬೇಕು ಎಂದಾದರೆ ಒಲಿಂಪಿಕ್ಸ್ ಆಯೋಜಿಸಬೇಡಿ !’’

ಬ್ರೆಝಿಲ್ ದುರಭಿಮಾನಿಗಳಿಗೆ ಫ್ರೆಂಚ್‌ ಪೋಲ್ ವಾಲ್ಟರ್ ತಿರುಗೇಟು

ವಾರ್ತಾಭಾರತಿವಾರ್ತಾಭಾರತಿ19 Aug 2016 12:10 PM IST
share
‘‘ನಿಮ್ಮವರೇ ಗೆಲ್ಲಬೇಕು ಎಂದಾದರೆ ಒಲಿಂಪಿಕ್ಸ್ ಆಯೋಜಿಸಬೇಡಿ !’’

ರಿಯೋ ಡಿ ಜನೈರೋ, ಆ.19: ‘‘ನಿಮ್ಮವರೇ ಗೆಲ್ಲಬೇಕು ಎಂದಾದರೆ ಒಲಿಂಪಿಕ್ಸ್ ಆಯೋಜಿಸಬೇಡಿ’’. ಹೀಗೆಂದು ನೋವಿನಿಂದ ಹೇಳಿದವರು ಫ್ರಾನ್ಸಿನ ಪೋಲ್ ವಾಲ್ಟರ್ ರೆನೋಡ್ ಲವಿಲ್ಲೆನಿ.

ಸೋಮವಾರ ಬ್ರೆಝಿಲ್‌ನ ತಿಯಾಗೊ ಬ್ರಾಝ್ ಡಾ ಸಿಲ್ವಾ ಅವರನ್ನು ಒಲಿಂಪಿಕ್ ಸ್ಟೇಡಿಯಂನಲ್ಲಿ ನೆರೆದ ಜನಸಮೂಹ ರಾಷ್ಟ್ರೀಯ ಹೀರೊ ಎಂಬಂತೆ ಹುರಿದುಂಬಿಸಿದ್ದರೆ, ರೆನೋಡ್ ಅವರನ್ನು ಅಪಹಾಸ್ಯ ಮಾಡಿತ್ತು. ಮಂಗಳವಾರ ನಡೆದ ಪದಕ ಪ್ರದಾನ ಸಮಾರಂಭದಲ್ಲೂ ಇದೇ ಅಪಹಾಸ್ಯ ಮುಂದುವರಿದಿತ್ತು. ಇದನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ ಥಾಮಸ್ ಬಚ್ ಕಟುವಾಗಿ ಟೀಕಿಸಿದ್ದರಲ್ಲದೆ, ಬ್ರೆಝಿಲ್ ಅಭಿಮಾನಿಗಳ ಕೃತ್ಯಆಘಾತಕಾರಿ ಎಂದು ವರ್ಣಿಸಿದ್ದರು. ಅವರ ಈ ಮಾತುಗಳು ರೆನೋಡ್ ಕಣ್ಣುಗಳಲ್ಲಿ ನೀರು ಹರಿಸಿತ್ತು.

‘‘ಹೀಗೆ ಯಾರಿಗೂ ಆಗದೇ ಇರಲಿ’’ ಎಂದು ಅವರು ಹೇಳಿದಾಗ ಮತ್ತೆ ಸ್ಟೇಡಿಯಂನಲ್ಲಿದ್ದವರು ಅವರನ್ನು ಅಪಹಾಸ್ಯ ಮಾಡಿದ್ದರು. ಸೋಮವಾರ ಬ್ರೆಝಿಲ್‌ನ ಡಾ ಸಿಲ್ವ ಆಶ್ಚರ್ಯಕರ ಫಲಿತಾಂಶದಲ್ಲಿ ಈ ಹಿಂದಿನ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ರೆನೋಡ್‌ರನ್ನು ಸೋಲಿಸಿದ್ದರು. ಈ ಪೋಲ್ ವಾಲ್ಟ್ ಸ್ಪರ್ಧೆ ನಡೆಯುತ್ತಿದ್ದಾಗ ರೆನೋಡ್ ಅವರ ಏಕಾಗ್ರತೆಯನ್ನು ಸ್ಟೇಡಿಯಂನಲ್ಲಿದ್ದ ಜನರ ಅಪಹಾಸ್ಯಕಾರಿ ಬೊಬ್ಬೆ ಕೆಡಿಸಿತ್ತು ಹಾಗೂ ಅಂತಿಮ ಜಂಪ್ ನಲ್ಲಿ ಅವರು ಎಡವಿಯೇ ಬಿಟ್ಟಿದ್ದರು.

ಕ್ರೀಡಾ ದುರಭಿಮಾನಿಗಳ ಇಂತಹ ವರ್ತನೆ 1936ರ ಬರ್ಲಿನ್ ಒಲಿಂಪಿಕ್ಸ್ ನಲ್ಲಿ ಜೆಸ್ಸಿ ಓವನ್ಸ್ ನೋವನ್ನನುಭವಿಸಿದ ನಂತರ ಮತ್ತೆ ನಡೆದಿರಲಿಲ್ಲ ಎಂದು ಹೇಳಿದ ರೆನೋಡ್‌‘‘ಬ್ರೆಝಿಲ್ ಮಾತ್ರ ಗೆಲ್ಲಬೇಕೆಂಬುದು ಈ ದೇಶದ ಬಯಕೆಯಾದರೆ ಹಾಗೂ ಇತರರ ಮೇಲೆ ಉಗುಳುತ್ತಾರೆಂದಾದಲ್ಲಿ, ನೀವು ಒಲಿಂಪಿಕ್ಸ್ ಆಯೋಜಿಸಬಾರದು’’ ಎಂದು ನೋವಿನಿಂದ ಹೇಳಿದ್ದರು.

ಪದಕ ಪ್ರದಾನ ಸಮಾರಂಭದಲ್ಲಿ ಡಾ ಸಿಲ್ವಾ ಕೈಗಳನ್ನು ಮೇಲೆತ್ತಿ ಕ್ರೀಡಾಭಿಮಾನಿಗಳನ್ನು ಶಾಂತವಾಗಿಸಲು ಪ್ರಯತ್ನಿಸಿ, ವಿಶ್ವ ದಾಖಲೆ ವೀರನಾಗಿರುವ ಫ್ರಾನ್ಸ್ ದೇಶದ ಪೋಲ್ ವಾಲ್ಟರ್ ಹಾಗೂ ಲಂಡನ್ ಒಲಿಂಪಿಕ್ಸ್ ಚಿನ್ನ ವಿಜೇತರಾಗಿರುವ ಅವರನ್ನು ಪ್ರಶಂಸಿಸಿದರು. ಆಗ ರೆನೋಡ್ ಮತ್ತೆ ಕಣ್ಣೀರು ಹರಿಸಿದಾಗ ಅವರನ್ನು ಡಾ ಸಿಲ್ವ ಹಾಗೂ ಐಒಸಿ ಸದಸ್ಯ ಸರ್ಜೈ ಬುಬ್ಕಾ ಸಮಾಧಾನಪಡಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X