Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಇರಾನ್ ವಾಯುನೆಲೆಯಿಂದ ಸಿರಿಯದ ಮೇಲೆ...

ಇರಾನ್ ವಾಯುನೆಲೆಯಿಂದ ಸಿರಿಯದ ಮೇಲೆ ದಾಳಿ: ಅಮೆರಿಕ, ರಷ್ಯಗಳ ನಡುವೆ ಭಿನ್ನಮತ ತಾರಕಕ್ಕೆ!

ವಾರ್ತಾಭಾರತಿವಾರ್ತಾಭಾರತಿ19 Aug 2016 12:49 PM IST
share
ಇರಾನ್ ವಾಯುನೆಲೆಯಿಂದ ಸಿರಿಯದ ಮೇಲೆ ದಾಳಿ: ಅಮೆರಿಕ, ರಷ್ಯಗಳ ನಡುವೆ ಭಿನ್ನಮತ ತಾರಕಕ್ಕೆ!

ವಾಷಿಂಗ್ಟನ್, ಆಗಸ್ಟ್ 19: ಸಿರಿಯಕ್ಕೆ ದಾಳಿ ನಡೆಸಲಿಕ್ಕಾಗಿ ಇರಾನ್‌ನ ವಾಯುನೆಲೆಯನ್ನು ಬಳಸುವ ರಷ್ಯದ ಕ್ರಮ ವಿಶ್ವಸಂಸ್ಥೆಯ ಆಧ್ಯಾದೇಶದ ಉಲ್ಲಂಘನೆಯಾಗಿದೆ ಎಂದು ಅಮೆರಿಕ ಹೇಳಿದೆ. ಇರಾನ್‌ಗೆ ಯುದ್ಧವಿಮಾನಗಳನ್ನು ನೀಡುವ ಮೊದಲು ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಅನುಮತಿ ಪಡೆದಿರಬೇಕು. ಇರಾನ್‌ನೊಂದಿಗೆ ಬೃಹತ್‌ರಾಷ್ಟ್ರಗಳು ಅಣುಒಪ್ಪಂದ ತಯಾರು ಮಾಡುವುದರ ಅಂಗವಾಗಿ ಭದ್ರತಾ ಸಮಿತಿ ಪಾಸು ಮಾಡಿರುವ ಆಧ್ಯಾದೇಶದಲ್ಲಿ ಇದಕ್ಕೆ ಸಂಬಂಧಿಸಿದ ಸ್ಪಷ್ಟ ನಿರ್ದೇಶನಗಳಿವೆ. ಈ ನಿರ್ದೇಶನಗಳನ್ನು ರಷ್ಯ ಉಲ್ಲಂಘಿಸಿದೆ ಎಂದು ಅಮೆರಿಕ ಹೇಳುತ್ತಿದೆಯೆಂದು ವರದಿಯಾಗಿದೆ.

ಇರಾನ್ ಯುದ್ಧವಿಮಾನಗಳನ್ನುಮತ್ತು ಸೈನಿಕ ಸಿದ್ಧತೆಗಳನ್ನು ಹಸ್ತಾಂತರಿಸಿದೆ ಎಂಬುದು ಒಂದು ಸಾಮಾನ್ಯ ವಿಚಾರವಲ್ಲ. ಗಂಭೀರ ವಿಚಾರವಾಗಿದೆ ಎಂದು ಅಮೆರಿಕ ರಾಜ್ಯಾಂಗ ಕಾರ್ಯದರ್ಶಿ ಮಾಕ್‌ಟೋನರ್ ಹೇಳಿದ್ದಾರೆ. ರಷ್ಯ ನಡೆಸುವ ದಾಳಿಯಲ್ಲಿ ಸಾಯುತ್ತಿರುವುದು ಸಾಮಾನ್ಯ ಜನರು ಮತ್ತು ಮಿತವಾದಿಗಳಾದ ಸಿರಿಯದ ಪ್ರತಿಪಕ್ಷಗಳ ಸಂಘಟನೆಗಳ ಜನರು ಎಂದು ಟೋನರ್ ಬಹಿರಂಗಪಡಿಸಿದ್ದಾರೆ. ಸಿರಿಯದ ಸಂಘರ್ಷ ಕೊನೆಗೊಳ್ಳಬೇಕೆಂದು ಅಮೆರಿಕ ಬಯಸುತ್ತಿದೆ.ಆದರೆ ರಷ್ಯ ನಡೆಸುತ್ತಿರುವ ವ್ಯೋಮ ದಾಳಿ ಅದಕ್ಕೆ ಅನುಯೋಜ್ಯವಾಗಿಲ್ಲ. ಇದು ದುರದೃಷ್ಟಕರವಾಗಿದೆ ಎಂದು ಅವರು ಹೇಳಿದ್ದಾರೆಂದು ವರದಿ ತಿಳಿಸಿದೆ.

ಗುರುವಾರದಿಂದ ಇರಾನ್‌ನ ವ್ಯೋಮ ನೆಲೆಯಿಂದ ರಷ್ಯ ಸಿರಿಯದ ಮೇಲೆ ದಾಳಿ ಆರಂಭಿಸಿದೆ. ಆದರೆ ಈತನ್ಮಧ್ಯೆ ರಷ್ಯ ಅಮೆರಿಕದ ಆರೋಪವನ್ನು ತಳ್ಳಿಹಾಕಿದೆ. ವಿಶ್ವಸಂಸ್ಥೆಯ ಆದ್ಯಾದೇಶಗಳನ್ನು ಉಲ್ಲಂಘಿಸಲಾಗಿದೆ ಎಂಬ ಅಮೆರಿಕದ ಆರೋಪ ಆಧಾರರಹಿತವಾದುದೆಂದು ರಷ್ಯದ ವಿದೇಶ ಸಚಿವ ಸರ್ಜಿ ಲಾವ್ರೋವ್ ಹೇಳಿದ್ದಾರೆ.

ಇರಾನ್‌ಗೆ ರಷ್ಯ ಆಯುಧಗಳನ್ನು ನೀಡಿಲ್ಲ. ಸಿರಿಯದ ಆಕ್ರಮಣಕ್ಕೆ ಇರಾನ್‌ನ ವ್ಯೋಮ ನೆಲೆಗಳನ್ನು ಅವರ ಅನುಮತಿ ಪಡೆದು ಬಳಸಲಾಗುತ್ತಿದೆ. ಇದು ಚರ್ಚೆಗೆ ಅಗತ್ಯವಿಲ್ಲದ ಸಂಗತಿಯಾಗಿದೆ ಎಂದು ಲಾವ್ರೋವ್ ಅಮೆರಿಕದ ಆರೋಪಕ್ಕೆ ಪ್ರತ್ಯುತ್ತರ ನೀಡಿದ್ದಾರೆಂದು ವರದಿ ತಿಳಿಸಿದೆ. ವಿಶ್ವಸಂಸ್ಥೆಯ ಆದ್ಯಾದೇಶಗಳನ್ನು ಅಮೆರಿಕ ಮತ್ತೊಮ್ಮೆ ಓದಿ ನೋಡಲಿ ಎಂದು ರಷ್ಯದ ರಕ್ಷಣಾ ಸಚಿವಾಲಯದ ಹೇಳಿಕೆ ಸೂಚಿಸಿದೆ. ಜೊತೆಗೆ ಟರ್ಕಿಯ ಇನ್‌ಸಿಲರಿಕ್ ವ್ಯೋಮನೆಲೆಯಿಂದ ಅಮೆರಿಕ ನಡೆಸುತ್ತಿರುವ ಮಿಸೈಲ್ ದಾಳಿ ವಿಶ್ವಸಂಸ್ಥೆಯ ಆದ್ಯಾದೇಶಗಳಿಗೆ ವಿರುದ್ಧವಾಗಿದೆ ಎಂದು ರಷ್ಯದ ರಕ್ಷಣಾ ಸಚಿವಾಲಯ ಆರೋಪಿಸಿದೆ ಎಂದು ತಿಳಿದು ಬಂದಿದೆ.

ಈ ನಡುವೆ, ರಷ್ಯದ ಕ್ರಮವನ್ನು ಬೆಂಬಲಿಸಿ ಇರಾನ್ ರಂಗಪ್ರವೇಶಿಸಿದೆ. ಸಿರಿಯ ಸರಕಾರದ ಮನವಿಯಂತೆ ಇರಾನ್ ರಷ್ಯ ಸೇರಿ ನಡೆಸುತ್ತಿರುವ ಪ್ರಕ್ರಿಯೆಯಲ್ಲಿ ಕಾನೂನುಬಾಹಿರವಾಗಿದ್ದು ಯಾವುದೂ ಇಲ್ಲ ಎಂದು ಇರಾನ್‌ನ ಪರಮೋಚ್ಚ ನಾಯಕ ಅಲಿ ಖಾಮ್‌ನಾ ಅವರ ಸಲಹೆಗಾರ ಅಲಿ ಅಕ್ಬರ್ ವಿಲಾಯತಿ ಹೇಳಿದ್ದಾರೆಂದು ವರದಿಯಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X