ಹಲವು ಅತ್ಯಾಚಾರ ಪ್ರಕರಣಗಳಲ್ಲಿ ಸೇಡಿನ ಅಸ್ತ್ರವಾಗಿ ಕಾನೂನಿನ ದುರ್ಬಳಕೆ
ದಿಲ್ಲಿ ಹೈಕೋರ್ಟ್ ಅಸಮಾಧಾನ
ಹೊಸದಿಲ್ಲಿ, ಆ.19: ಪರಸ್ಪರ ಸಮ್ಮತಿಯ ದೈಹಿಕ ಸಂಬಂಧಗಳು ಮುರಿದುಬಿದ್ದಾಗ ಮಹಿಳೆಯರು ಅನೇಕ ಸಂದರ್ಭಗಳಲ್ಲಿ ಕಾನೂನನ್ನು ಸೇಡು ತೀರಿಸುವ ಅಸ್ತ್ರವಾಗಿ ಬಳಸಿಕೊಂಡಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿರುವ ದಿಲ್ಲಿಯ ನ್ಯಾಯಾಲಯವೊಂದು ವಿವಾಹ ವಿಚ್ಛೇದಿತ ಯುವತಿಯ ಮೇಲೆ ಅತ್ಯಾಚಾರವೆಸಗಿದ ಆರೋಪ ಎದುರಿಸುತ್ತಿದ್ದ ನ್ಯಾಯವಾದಿಯೊಬ್ಬರನ್ನು ಶನಿವಾರ ದೋಷಮುಕ್ತಗೊಳಿಸಿದೆ. ದೂರುದಾರ ಮಹಿಳೆಯು ಪ್ರಬುದ್ಧಳು ಹಾಗೂ ದೈಹಿಕ ಸಂಬಂಧಕ್ಕೆ ಸಮ್ಮತಿ ನೀಡಬೇಕೆ ಅಥವಾ ನಿರಾಕರಿಸಬೇಕೆ ಎಂಬುದನ್ನು ನಿರ್ಧರಿಸುವಷ್ಟು ಸಮರ್ಥಳಾಗಿದ್ದಾಳೆ ಎಂದು ತೀರ್ಮಾನಿಸಿದ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಸಂಜೀವ್ ಜೈನ್ ಅವರು ಭಾರತೀಯ ದಂಡಸಂಹಿತೆಯ ಸೆಕ್ಷನ್ 376ರಡಿ ಅತ್ಯಾಚಾರದ ಆರೋಪ ಎದುರಿಸುತ್ತಿದ್ದ ನ್ಯಾಯವಾದಿಯನ್ನು ದೋಷಮುಕ್ತಗೊಳಿಸಿತು.
‘ದೂರುದಾರೆ ಹಾಗೂ ಆರೋಪಿಯ ನಡುವಿನ ದೈಹಿಕ ಸಂಬಂಧವು ದೂರು ದಾರೆಯ ಸಮ್ಮತಿಯೊಂದಿಗೆ ಏರ್ಪಟ್ಟಿದೆ. ಹೀಗಾಗಿ ಆರೋಪಿಯನ್ನು ತಾನು ದೋಷಮುಕ್ತ ಗೊಳಿಸಿರುವುದಾಗಿ ನ್ಯಾಯಾಧೀಶರು ತಿಳಿಸಿದರು.ವಿವಾಹವಿಚ್ಛೇದಿತ ಮಹಿಳೆಯೊಬ್ಬರು ರಸ್ತೆ ಅಪಘಾತ ಪ್ರಕರಣವೊಂದರಲ್ಲಿ ತನ್ನ ವಕೀಲನಾಗಿದ್ದ ವ್ಯಕ್ತಿಯ ವಿರುದ್ಧ ಅತ್ಯಾಚಾರದ ಆರೋಪ ಹೊರಿಸಿ ನ್ಯಾಯಾಲಯಕ್ಕೆ ದೂರು ನೀಡಿದ್ದಳು. ಘಟನೆ ನಡೆದ ಸಮಯದಲ್ಲಿ ದೂರುದಾರ ಮಹಿಳೆಗೆ 38 ವರ್ಷ ವಯಸ್ಸಾಗಿತ್ತು. ಆರೋಪಿಗೂ ಹಾಗೂ ದೂರುದಾರೆಗೆ ಬಹಳ ಸಮಯದಿಂದ ಪರಿಚಯವಿದ್ದಿತ್ತು. ಆರೋಪಿಯು ಆಕೆಯ ಮನೆಗೆ ಆಗಾಗ್ಗೆ ಭೇಟಿ ನೀಡುತ್ತಿದ್ದ. ಅವರು ಪರಸ್ಪರ ಪ್ರೀತಿಸುತ್ತಿದ್ದರು. ಮಹಿಳೆ ಹಾಗೂ ಆರೋಪಿಯ ಮಧ್ಯೆ ಪರಸ್ಪರ ಸಮ್ಮತಿಯ ದೈಹಿಕ ಸಂಬಂಧವಿದ್ದರೂ, ಆಕೆ ಅತ್ಯಾಚಾರದ ಆರೋಪವನ್ನು ಹೂಡಿದ್ದಾಳೆಂದು ಎಂದು ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ.ಜುಲೈನಲ್ಲಿ ಚೀನಾದಿಂದ ಎರಡು ಸಲ ಗಡಿ ಉಲ್ಲಂಘನೆ: ರಿಜಿಜುಹೊಸದಿಲ್ಲಿ,ಆ.19: ಕಳೆದ ತಿಂಗಳು ಎರಡು ಸಂದರ್ಭಗಳಲ್ಲಿ ಚೀನಿ ಸೇನೆಯು ಅರುಣಾಚಲ ಪ್ರದೇಶದ ಗಡಿಯನ್ನು ಉಲ್ಲಂಘಿಸಿದೆ. ಆದರೆ ಇದನ್ನು ಅತಿಕ್ರಮಣವೆಂದು ಕರೆಯಲು ಸಾಧ್ಯವಿಲ್ಲವೆಂದು ಕೇಂದ್ರ ಸಹಾಯಕ ಗೃಹ ಸಚಿವ ಕಿರಣ್ ರಿಜಿಜು ಶುಕ್ರವಾರ ತಿಳಿಸಿದ್ದಾರೆ.
ಅರುಣಾಚಲಪ್ರದೇಶದ ಪಾಸಿಘಾಟ್ನಲ್ಲಿ ಅಡ್ವಾನ್ಸ್ ಲ್ಯಾಂಡಿಂಗ್ ಗ್ರೌಂಡ್ (ಎಎಲ್ಜಿ) ಅನ್ನು ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಚೀನಿ ಸೇನೆಯು ಕೇವಲ ಗಡಿನಿಯಂತ್ರಣ ರೇಖೆಯುದ್ದಕ್ಕೂ ಇರುವ ಗ್ರಹಿತ ಪ್ರದೇಶವನ್ನು ಪ್ರವೇಶಿಸಿರುವ ಕಾರಣ ಅದನ್ನು ಅತಿಕ್ರಮಣವೆನ್ನಲಾಗದು. ಆದರೆ ಅದು ಗಡಿ ಉಲ್ಲಂಘನೆಯಾಗಿದೆ ’’ ಎಂದರು.
ಜುಲೈ 22ರಂದು ದುರ್ಗಮ ಅಂಜಾವ್ ಜಿಲ್ಲೆಯ ಕಿಬಿತು ಪ್ರದೇಶದಲ್ಲಿ ಹಾಗೂ ಜುಲೈ 22ರಂದು ತವಾಂಗ್ ಜಿಲ್ಲೆಯ ತಾಂಗ್ಸಾದಲ್ಲಿ ಚೀನಿ ಸೇನೆ ಗಡಿ ಉಲ್ಲಂಘಿಸಿವೆಯೆಂದು ರಿಜಿಜು ತಿಳಿಸಿದರು. ಕಿಬಿತುವಿನಲ್ಲಿ ಚೀನಿ ಪಡೆಯ ಗಡಿಉಲ್ಲಂಘನೆಯ ಬಗ್ಗೆ ಏಟಿಬಿಪಿ ಮಾಹಿತಿ ನೀಡಿದ್ದು, ಕೇಂದ್ರ ಸರಕಾರವು ಈ ಬಗ್ಗೆ ಪರಿಶೀಲಿಸಿದಾಗ, ಅದೊಂದು ಗಡಿ ಉಲ್ಲಂಘನೆಯ ಕೃತ್ಯವೆಂದು ದೃಢಪಡಿಸಿಕೊಂಡಿತು ಎಂದು ರಿಜಿಜು ತಿಳಿಸಿದರು.ಂದು ಉದ್ಘಾಟನೆಗೊಂಡ ಎಎಲ್ಜಿಯು ಎಸ್ಯು 30 ಎಂಕೆಐನಂತಹ ಸಮರ ವಿಮಾನಗಳು ಇಳಿಯಲು ಹಾಗೂ ಮೇಲಕ್ಕೇರಲು ಅವಕಾಶ ಮಾಡಿಕೊಡಲಿದ್ದು, ಚೀನಾ ಗಡಿಯುದ್ದಕ್ಕೂ ಭಾರತದ ಮಿಲಿಟರಿ ಸಾಮರ್ಥ್ಯಕ್ಕೆ ಹೆಚ್ಚಿನ ಬಲ ದೊರೆಯಲಿದೆ. ನಮ್ಮ ಗಡಿಯ ಮೂಲ ಸೌಕರ್ಯಗಳನ್ನು ಬಲಪಡಿಸುವ ಮೂಲಕ ನಾವು ಇತರ ರಾಷ್ಟ್ರಗಳಿಗೆ ಸವಾಲೊಡ್ಡುತ್ತಿಲ್ಲ. ನಮ್ಮ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಬೃಹತ್ ಮಟ್ಟದ ಮೂಲ ಸೌಕರ್ಯವನ್ನು ನಿರ್ಮಿಸುತ್ತಿದ್ದೇವೆ ಎಂದು ಕಿರಣ್ ರಿಜಿಜು ಸ್ಪಷ್ಟಪಡಿಸಿದರು.