Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಮೂರು ತಿಂಗಳಿನಿಂದ ಸಿಂಧುಗೆ ಫೋನ್‌ ಕೊಡದ...

ಮೂರು ತಿಂಗಳಿನಿಂದ ಸಿಂಧುಗೆ ಫೋನ್‌ ಕೊಡದ ಗೋಪಿಚಂದ್‌

ವಾರ್ತಾಭಾರತಿವಾರ್ತಾಭಾರತಿ20 Aug 2016 2:23 PM IST
share
ಮೂರು ತಿಂಗಳಿನಿಂದ  ಸಿಂಧುಗೆ ಫೋನ್‌ ಕೊಡದ ಗೋಪಿಚಂದ್‌

ರಿಯೋ ಡಿ ಜನೈರೊ, ಆ.20: "ಕಳೆದ ಮೂರು ತಿಂಗಳಿನಿಂದ ಸಿಂಧು  ಆಕೆಯ ಮೊಬೈಲ್‌ ಫೋನ್‌ ಮುಟ್ಟಿಲ್ಲ. ಆಕೆಗೆ ಫೋನ್‌ನ್ನು ವಾಪಸ್ ನೀಡುವುದು ನನ್ನ  ಮೊದಲ ಕೆಲಸ. ಎರಡನೆ ವಿಚಾರವೆಂದರೆ ಇಲ್ಲಿ ಬಂದು ಹನ್ನೆರಡು -ಹದಿಮೂರು ದಿನ  ಆಗಿದೆ. ಆಕೆಗೆ ಐಸ್‌ಕ್ರೀಮ್‌ ,  ಸಿಹಿ ಮೊಸರು ತಿನ್ನದಂತೆ ನಿಯಂತ್ರಣ ಹೇರಿದ್ದೆ. ಇನ್ನು ಸಿಂಧುವಿಗೆ ಏನೆಲ್ಲ ಇಷ್ಟವೊ ಅವೆಲ್ಲವನ್ನು ತಿನ್ನಬಹುದು ” ಎಂದು ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ ಪಿ.ವಿ. ಸಿಂಧು ಅವರ ಕೋಚ್‌ ಪಿ.ಗೋಪಿಚಂದ್ ತಿಳಿಸಿದ್ದಾರೆ.

ಕೋಚ್‌ ಗೋಪಿಚಂದ್‌ ಶಿಸ್ತಿನ ಮನುಷ್ಯ. ತನ್ನ ಅಕಾಡಮಿ ಸೇರಿದವರು ಅವರ ಮಾರ್ಗದರ್ಶನವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕಾಗಿದೆ. ಸೈನಾ ನೆಹ್ವಾಲ್‌ ಈ ಹಿಂದೆ ಗೋಪಿಚಂದ್‌ ಬಳಿ ತರಬೇತಿ ಪಡೆದವರು. ಇದೀಗ  ಸಿಂಧು ಸರದಿ. ಅವರ ಬಳಿ ನಿಯಮ ಎಲ್ಲರಿಗೂ ಒಂದೆ. ಆಟದಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳುವ ಉದ್ದೇಶಕ್ಕಾಗಿ ಸಿಂಧು ಅವರ ಮೊಬೈಲ್‌ ಫೋನ್‌ನ್ನು ಗೋಪಿಚಂದ್ ಮೂರು ತಿಂಗಳ ಹಿಂದೆ ತನ್ನ ವಶಕ್ಕೆ ತೆಗೆದುಕೊಂಡಿದ್ದರು. ಆಕೆಯ ಇಷ್ಟದ ಐಸ್ಕ್ರೀಮ್‌, ಹೈದರಾಬಾದ್‌ ಬಿರಿಯಾನಿ, ಸಿಹಿ ಮೊಸರು ತಿನ್ನದಂತೆ ಗೋಪಿ ನಿರ್ಬಂಧ ವಿಧಿಸಿದ್ದರು.
ಸಿಂಧು ಪದಕ ಜಯಿಸಿದ ಬೆನ್ನಲ್ಲೆ ಶಿಸ್ತಿನ ಗುರು ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿದ್ದಾರೆ. ಸಿಂಧುಗೆ ಅಣ್ಣನಂತೆ ಎಲ್ಲವನ್ನು ಕೊಡಿಸಲು ಮುಂದಾಗಿದ್ದಾರೆ ಗೋಪಿಚಂದ್. 
"ಕಳೆದ ವಾರ ನೀನು ಪಟ್ಟ ಶ್ರಮದಿಂದಲೇ ನೀನು ಎರಡನೇ ಸ್ಥಾನಗಳಿಸುವಂತಾಯಿತು .  ಚಿನ್ನ ಸಿಕ್ಕಿಲ್ಲ ಎಂದು ಕೊರಗುವುದು ಬೇಡ. ಗೆದ್ದಿರುವುದು ಬೆಳ್ಳಿಯಾದರೂ, ತನಗೆ ಸಿಕ್ಕಿರುವುದು ಚಿನ್ನವೆಂದು ತಿಳಿದುಕೊಂಡು ಮುಂದುವರಿಯುವಂತೆ ಸಿಂಧುಗೆ  ಸಲಹೆ ನೀಡಿರುವುದಾಗಿ ಗೋಪಿಚಂದ್‌ ಹೇಳಿದ್ದಾರೆ.
ಸಿಂಧು  ಫೈನಲ್‌ನಲ್ಲಿ ಚೆನ್ನಾಗಿ ಆಡಿದ್ದಾರೆ.  ಆಕೆಯ ಆಟದ ಬಗ್ಗೆ ಹೆಮ್ಮೆ ಇದೆ. ಅಭಿಮಾನವಿದೆ. ಅವರ ಆಟ ಖುಶಿ ನೀಡಿದೆ. ಆಕೆ ಪದಕ ಪಡೆಯಲು ಪೋಡಿಯಮ್‌ ಏರುವುದನ್ನು ನಾನು ಬಯಸಿದ್ದೆ.  ಸಿಂಧು ಸಾಧನೆಯ ಮೂಲಕ  ರಿಯೋದಲ್ಲಿ ಭಾರತದ ತ್ರಿವರ್ಣ ಧ್ವಜ ಹಾರುವುದನ್ನು ಮತ್ತು ರಾಷ್ಟ್ರ ಗೀತೆ ಮೊಳಗುವುದನ್ನು ನಾನು ಬಯಸಿದ್ದೆ ಇದೀಗ ಎಲ್ಲವೂ ನಿರೀಕ್ಷಿಸಿದಂತೆ ಆಗಿದೆ ಎಂದು ಗೋಪಿಚಂದ್‌ ಅಭಿಪ್ರಾಯಪಟ್ಟಿದ್ದಾರೆ.

"ಪೋಡಿಯಂನಲ್ಲಿ ನಿಲ್ಲುವ ಅವಕಾಶ ಮತ್ತು ಆ ಕ್ಷಣ ಅತ್ಯಮೂಲ್ಯವಾದದ್ದು. ಅಲ್ಲಿಯವರೆಗಿನ ಪಯಣ ತುಂಬಾ ವಿಶೇಷ. ಇಲ್ಲಿಯವರೆಗೆ ನಮ್ಮನ್ನು ತಂದು ನಿಲ್ಲಿಸಿದ ದೇವರಿಗೆ, ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ನಾನು ಚಿರ ಋಣಿಯಾಗಿರುವೆ . ಪ್ರಧಾನಿಯವರ ಟ್ವೀಟ್  ಗೆ ಉತ್ತರಿಸಲು ನನ್ನ ಕೈಯಲ್ಲೀಗ ಫೋನ್ ಇಲ್ಲ " ಎಂದು ಸಿಂಧು ಹೇಳಿದ್ದಾರೆ. 
" ಶುಕ್ರವಾರ  ಕರೋಲಿನಾ ಮರೀನ್‌ ದಿನವಾಗಿತ್ತು. ಆಕೆ ಚೆನ್ನಾಗಿ ಆಡಿ ಚಿನ್ನ ಪಡೆದರು” ಸಿಂಧು ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X