Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಮಲ್ಲಿವುಡ್‌ನ ಮಾನವೀಯ ಲೇಖಕ ಟಿ.ಎ.ರಝಾಕ್

ಮಲ್ಲಿವುಡ್‌ನ ಮಾನವೀಯ ಲೇಖಕ ಟಿ.ಎ.ರಝಾಕ್

ವಾರ್ತಾಭಾರತಿವಾರ್ತಾಭಾರತಿ21 Aug 2016 1:09 PM IST
share
ಮಲ್ಲಿವುಡ್‌ನ ಮಾನವೀಯ ಲೇಖಕ ಟಿ.ಎ.ರಝಾಕ್

ಕೆಲ ವರ್ಷಗಳ ಹಿಂದೆ ದ ಹಿಂದೂ ಪತ್ರಕರ್ತರು ಎಂ.ಟಿ.ವಾಸುದೇವನ್ ನಾಯರ್ ಅವರನ್ನು ಮಲೆಯಾಳಂ ಚಿತ್ರರಂಗದ ಸಂಭಾಷಣೆಕಾರರ ಬಗ್ಗೆ ಕೇಳಿದಾಗ, ಅವರು ಉಲ್ಲೇಖಿಸಿದ್ದು ಒಂದೇ ಹೆಸರು. ಅದು ಟಿ.ಎ.ರಝಾಕ್.

ಎಂ.ಟಿ. ಸಂದರ್ಶನವನ್ನು ರಝಾಕ್ ಓದಲಿಲ್ಲ. ಆದರೆ ಚಿತ್ರ ನಿರ್ದೇಶಕ ಹರಿಹರನ್ ಸೇರಿದಂತೆ ಅವರ ಚಿತ್ರ ಸಹೋದ್ಯೋಗಿಗಳು ಅಭಿನಂದನೆಯ ಮಹಾಪೂರ ಹರಿಸಿದಾಗ ಇದು ಅವರಿಗೆ ತಿಳಿಯಿತು. ದ ಹಿಂದೂ ಪತ್ರಿಕೆಯ ಆ ಪ್ರತಿಯನ್ನು ಜತನದಿಂದ ವರ್ಷಗಳ ಕಾಲ ಸಂಗ್ರಹಿಸಿ ಇಟ್ಟಿದ್ದರು. ಅದನ್ನು ಪಡೆದ ಒಬ್ಬ ಸ್ನೇಹಿತ ವಾಪಸು ಮಾಡದ ಕಾರಣ ಅದು ಕಳೆದುಹೋಯಿತು.

ಕೆಲ ವಾರಗಳ ಹಿಂದೆ ಕೋಝಿಕ್ಕೋಡ್ ಖಾಸಗಿ ಆಸ್ಪತ್ರೆಯಿಂದ ಕರೆ ಮಾಡಿ, ‘‘ನನಗೆ ಆ ಪ್ರತೀ ಸಿಗಬಹುದೇ’’ ಎಂದು ಕೇಳಿದ್ದರು. ನನ್ನ ಬರಹಗಳ ನೆನಪಾಗಿ ಅದು ನನಗೆ ಬೇಕು ಎಂದು ಕೋರಿದ್ದರು. ಅವರು ಎರಡು ಹೊಸ ಚಿತ್ರಕಥೆ ನಿರ್ಮಿಸುತ್ತಿದ್ದರು. ‘‘ನಾನು ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡ ಬಳಿಕ, ನನ್ನ ಎರಡನೆ ಚಿತ್ರವನ್ನು ನಿರ್ದೇಶಿಸುತ್ತೇನೆ. ಕೆಲ ತಿಂಗಳಲ್ಲಿ ಇದು ಸಾಧ್ಯವಾಗಬಹುದು’’ ಎಂದು ರಝಾಕ್ ಹೇಳಿದ್ದರು.

ಅವರ ಸಾವಿನ ಕಾರಣ ಅದು ಅಸಂಭವ. ಮಲಯಾಳಂ ಚಿತ್ರರಂಗ ಅದ್ಭುತ, ಮಾನವೀಯ ಚಿತ್ರ ಸಂಭಾಷಣೆಕಾರರೊಬ್ಬರನ್ನು ಕಳೆದುಕೊಂಡಿದೆ. ಚೊಚ್ಚಲ ‘ಘೋಷಯಾತ್ರಾ’ ಚಿತ್ರದ ಮೂಲಕ ಅಪಾರ ನಿರೀಕ್ಷೆ ಮೂಡಿಸಿದ್ದ ಪ್ರತಿಭಾವಂತ.

‘ಕಣಕ್ಕಿಣವು’ಚಿತ್ರ ಇವರಿಗೆ ಉತ್ತಮ ಚಿತ್ರ ಸಂಭಾಷಣೆಗಾಗಿ ರಾಜ್ಯ ಪ್ರಶಸ್ತಿ ಗೆದ್ದುಕೊಟ್ಟಿತ್ತು. ‘ಪೆರುಮಳಕ್ಕಲಮ್’ ಹಾಗೂ ‘ಗಝಲ್’ ಎಲ್ಲ ವರ್ಗಗಳ ಪ್ರೇಕ್ಷಕರನ್ನೂ ತಟ್ಟುವ ಅವರ ಕಲಾತ್ಮಕ ಪ್ರತಿಭೆಗೆ ಕನ್ನಡಿ ಹಿಡಿದಿದ್ದವು. ಪರಸ್ಪರ ವೈರುದ್ಯದ ಧಾರ್ಮಿಕ ನಂಬಿಕೆಯಿಂದ ಉಂಟಾಗಬಹುದಾದ ಪರಿಣಾಮ ಅವರ ಆತಂಕವಾಗಿತ್ತು. ‘ಕಣಕ್ಕಿಣವು’ ಮತ್ತು ‘ಮೂನಾಮ್ ನಾಲ್ ನಾರಾಯಿಛ’ ಇಂಥ ಸಮಸ್ಯೆ ಬಗ್ಗೆ ಚರ್ಚಿಸಿದ್ದವು. ‘ಪೆರುಮಳಕ್ಕಲಮ್’ ರಝಾಕ್ ಅವರ ಸರ್ವಶ್ರೇಷ್ಠ ಚಿತ್ರವಾಗಿದ್ದು, ಇದು ಮಹಿಳೆಯೊಬ್ಬಳು ತನ್ನ ಗಂಡನ ಹತ್ಯೆಕೋರರಿಗೆ ಕ್ಷಮಾದಾನ ನೀಡಿದ ಕಾರಣದಿಂದ ಹಂತಕ ಗಲ್ಫ್ ದೇಶದಲ್ಲಿ ಗಲ್ಲು ಶಿಕ್ಷೆಯಿಂದ ಪಾರಾಗುವುದು ಇಲ್ಲಿನ ಕಥಾವಸ್ತು. ಇದು ನೈಜ ಘಟನೆ ಆಧಾರಿತ ಚಿತ್ರ.

‘ಕಣಕ್ಕಿಣವು’ ಚಿತ್ರದ ಪಾತ್ರಗಳು, ಧಾರ್ಮಿಕ ಸಾಮರಸ್ಯವನ್ನು ಯಾವ ಬೋಧನೆಯೂ ಇಲ್ಲದೇ ಕಲಾತ್ಮಕವಾಗಿ ಪ್ರತಿಪಾದಿಸುತ್ತವೆ. ಕಲೆ ಕೇವಲ ಕಲೆಗಾಗಿ ಅಲ್ಲ. ಸಿನೆಮಾದಲ್ಲಿ ಸಮಾಜಕ್ಕೆ ಸಂದೇಶ ಇರಬೇಕು ಎನ್ನುವುದು ಅವರ ದೃಢನಂಬಿಕೆಯಾಗಿತ್ತು.

ಈ ವರ್ಷ ಈಗಾಗಲೇ ಕಲಾಭವನ್ ಮಣಿ, ಕಲ್ಪನಾ, ಜ್ಯೋತಿಲಕ್ಷ್ಮೀ, ಸಂಗೀತಜ್ಞ ಓ.ಎನ್.ವಿ.ಇ.ಕುರುಪ್ ಹಾಗೂ ಕಾವಳಂ ನಾರಾಯಣ ಪಣಿಕ್ಕರ್, ನಿರ್ದೇಶಕರಾದ ರಾಜೇಶ್ ಪಿಳ್ಳೈ, ಶಶಿ ಶಂಕರ್, ರಾಜನ್ ಸಂಕರಡಿ ಹಾಗೂ ಮೋಹನ್ ರೂಪ್, ಚಿತ್ರ ಛಾಯಾಗ್ರಾಹಕ ಆನಂದಕುಟ್ಟನ್, ಸಂಯೋಜಕ ರಾಜಮಣಿ ಹಾಗೂ ಸಂಗೀತಗಾರ ಶಾನ್ ಜಾನ್ಸನ್ ಅವರನ್ನು ಕಳೆದುಕೊಂಡಿರುವ ಮಲಯಾಳಂ ಚಿತ್ರರಂಗಕ್ಕೆ ರಝಾಕ್ ಸಾವು ಬರಸಿಡಿಲಿನಂತೆ ಬಂದೆರಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X