Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. 10 ರೂಪಾಯಿಗೆ ಹೊಟ್ಟೆ ತುಂಬಾ ಊಟ ಕೊಡುವ...

10 ರೂಪಾಯಿಗೆ ಹೊಟ್ಟೆ ತುಂಬಾ ಊಟ ಕೊಡುವ ಸುಳ್ಯದ ಸರಳಾಯ ಹೋಟೆಲ್

ನಂಬಲಸಾಧ್ಯ!

ವಾರ್ತಾಭಾರತಿವಾರ್ತಾಭಾರತಿ21 Aug 2016 10:33 PM IST
share
10 ರೂಪಾಯಿಗೆ ಹೊಟ್ಟೆ ತುಂಬಾ ಊಟ ಕೊಡುವ ಸುಳ್ಯದ ಸರಳಾಯ ಹೋಟೆಲ್

ಸುಳ್ಯ ಪಟ್ಟಣದ ಹೃದಯ ಭಾಗದಲ್ಲಿರುವ ಶ್ರೀರಾಂಪೇಟೆ ಪ್ರಾಂತ ಊಟದ ಸಮಯದಲ್ಲಿ ವಿದ್ಯಾರ್ಥಿಗಳ ಕಲರವದಿಂದ ಗುಂಯ್ ಗುಡುತ್ತದೆ. ವಿದ್ಯಾರ್ಥಿಗಳಿಗೆ ಇಲ್ಲಿ ಹೊರಾಂಗಣ ಚಟುವಟಿಕೆ ಇದೆ ಎಂದಲ್ಲ, ಬದಲಾಗಿ ಅವರೆಲ್ಲರೂ ಹೊಟೇಲ್ ರಾಂ ಪ್ರಸಾದ್‌ನಿಂದ ಹೊರ ಹೋಗುವುದು ಅಥವಾ ಒಳ ಹೋಗುವುದು ಮಾಡುತ್ತಿರುತ್ತಾರೆ.

ಸರಳಾಯ ಹೊಟೇಲ್ ಎಂದೇ ಜನಪ್ರಿಯವಾಗಿರುವ ಇದರ ಮಾಲೀಕರು ಸುಂದರ ಸರಳಾಯ. ಹೆಚ್ಚು ಆಡಂಬರವಿಲ್ಲದ ಏಳು ದಶಕಗಳ ಹಿಂದಿನ ಹೊಟೇಲನ್ನು ಸಾವಿರಾರು ಮಂದಿ ಒಂದೇ ಕಾರಣಕ್ಕೆ ನೆನಪಿಸಿಕೊಳ್ಳುತ್ತಾರೆ. ಅಗ್ಗದ ಬೆಲೆಯಲ್ಲಿ ಸಿಗುವ ಮಧ್ಯಾಹ್ನದ ಭೋಜನ. ಮಲೆನಾಡು ಪ್ರಾಂತ್ಯದ ಈ ಪಟ್ಟಣದಲ್ಲಿ ಓದುತ್ತಿರುವವರು ಮನೆಗೆ ಹೋಗಿ ಊಟ ಮಾಡಲು ಸಾಧ್ಯವಾಗದಿದ್ದಾಗ ಹೊಟೇಲ್ ರಾಂ ಪ್ರಸಾದ್ ಅವರ ನೆರವಿಗೆ ಬರುತ್ತದೆ.

ಸರ್ಕಾರವು ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡುವ ಯೋಜನೆಯನ್ನು ರೂಪಿಸುವ ಮೊದಲೇ ಸುಂದರ ಸರಳಾಯರ ತಂದೆ ವೆಂಕಟರಮಣ ಸರಳಾಯ ಅವರು 1938ರಲ್ಲಿ ಒಂದು ರೂಪಾಯಿಗೆ ಈ ಹೊಟೇಲಿನಲ್ಲಿ ಮಧ್ಯಾಹ್ನದ ಭೋಜನ ಒದಗಿಸುತ್ತಿದ್ದರು. ಕೇರಳದ ಕಾಸರಗೋಡು ಜಿಲ್ಲೆಯ ಕಾಂಞಂಗಾಡ್ ತಾಲೂಕಿನ ಪಣತಾಡಿ ಗ್ರಾಮದ ನಿವಾಸಿಯಾಗಿರುವ ಸರಳಾಯರ ಕುಟುಂಬ 1938ರಲ್ಲಿ ಸುಳ್ಯದಲ್ಲಿ ನೆಲೆ ನಿಂತು ಸಣ್ಣ ಗುಡಿಸಲಿನಲ್ಲಿ ಹೊಟೇಲ್ ಆರಂಭಿಸಿತ್ತು. 46 ವರ್ಷಗಳ ಹಿಂದೆ ಸುಂದರ ಸರಳಾಯ ಹೊಟೇಲ್ ಮಾಲೀಕತ್ವ ವಹಿಸಿದ ಮೇಲೂ ಸೇವೆ ಮುಂದುವರಿದಿದೆ. ಆದರೆ ಬೆಲೆ ಸ್ವಲ್ಪ ಏರಿದೆ. ಒಂದು ರೂಪಾಯಿಗೆ ನಾಲ್ಕು ಊಟದಿಂದ, ಮೂರು, ಎರಡು ಮತ್ತು ಒಂದಕ್ಕೆ ಇಳಿಯಿತು. ಅಂತಿಮವಾಗಿ 5 ರೂಪಾಯಿಗೆ ಒಂದು ಊಟವಾಯಿತು. ಎರಡು ವರ್ಷಗಳ ಹಿಂದಿನವರೆಗೂ ಇದೇ ಬೆಲೆಯಿತ್ತು. 10 ರೂಪಾಯಿಗೆ ಈಗ ಸಿಗುವ ಊಟದಲ್ಲಿ ಕೇವಲ ಅನ್ನ ಮತ್ತು ಸಾಂಬಾರ್ ಮಾತ್ರವಲ್ಲ, ಅನ್ನ, ರಸಂ, ಸಾಂಬಾರ್ ಮತ್ತು ಮಜ್ಜಿಗೆಯೂ ಸಿಗುತ್ತದೆ.

ಕಡಿಮೆ ವೆಚ್ಚದಲ್ಲಿ ಭೋಜನ ಒದಗಿಸಲು ಕಾರಣ ಕೇಳಿದರೆ ಸರಳಾಯ ಅವರು ತಮ್ಮ ತಂದೆಯ ದಾರಿಯಲ್ಲಿ ಹೆಜ್ಜೆ ಇಡುವುದಾಗಿ ಹೇಳುತ್ತಾರೆ. “ಒಂದು ಭೋಜನ ಪಡೆಯುವುದು ಇಂದಿಗೂ ಅನೇಕರಿಗೆ, ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತಿದೆ. ಅದಕ್ಕಾಗಿ ಪರಂಪರೆ ಮುಂದುವರಿಸಿದ್ದೇನೆ” ಎನ್ನುತ್ತಾರೆ. ಹೊಟೇಲ್ ರಾಂಪ್ರಸಾದ್ ನಿತ್ಯವೂ 200ಕ್ಕೂ ಅಧಿಕ ಮಧ್ಯಾಹ್ನದ ಊಟವನ್ನು ನೀಡುತ್ತದೆ. 100ಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ.

ಈ ಸೇವೆ ಸಾಧ್ಯವಾಗಿರುವುದು ಹೇಗೆ ಎಂದು ಪ್ರಶ್ನಿಸಿದರೆ, ಪಾರ್ಸಲ್ ಆಗಿ ತೆಗೆದುಕೊಂಡು ಹೋಗುವ ಸಾಮಾನ್ಯ ಊಟಕ್ಕೆ ರು. 40 ಬೆಲೆ ಇರುತ್ತದೆ ಎನ್ನುತ್ತಾರೆ. ಅಲ್ಲದೆ ಹೊಟೇಲಿನಲ್ಲಿ ಇತರ ಆಹಾರ ವಸ್ತುಗಳು ಮಾರುಕಟ್ಟೆ ಬೆಲೆಯಲ್ಲೇ ಸಿಗುತ್ತವೆ. ಕ್ಯಾಟರಿಂಗ್ ಚಟುವಟಿಕೆಯಿಂದಲೂ ಆದಾಯ ಬರುತ್ತದೆ. ಈಗ ಅವರ ಮಗ ರಾಘವೇಂದ್ರ ಸರಳಾಯ ಹೊಟೇಲ್ ನೇತೃತ್ವ ವಹಿಸಿದ್ದಾರೆ. ಮತ್ತೊಬ್ಬ ಮಗ ಇತರ ಉದ್ಯಮ ನಿಭಾಯಿಸುತ್ತಾರೆ. ಮಗಳು ಮದುವೆಯಾಗಿ ಕಾರ್ಕಳದಲ್ಲಿದ್ದಾಳೆ. “ಪರಂಪರೆ ಮುಂದುವರಿಯಲಿದೆ. ದೇವರು ನಮ್ಮ ಕೈಬಿಡುವುದಿಲ್ಲ” ಎನ್ನುತ್ತಾರೆ ಸುಂದರ್ ಸರಳಾಯ.

Courtesy : The Hindu.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X