Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನಿಮ್ಮ ಇಂಟರ್ನೆಟ್ ನಿಧಾನವಾಗಿದೆಯೇ?...

ನಿಮ್ಮ ಇಂಟರ್ನೆಟ್ ನಿಧಾನವಾಗಿದೆಯೇ? ನಿಮಗಿದೆ ಶುಭ ಸುದ್ದಿ

ವಾರ್ತಾಭಾರತಿವಾರ್ತಾಭಾರತಿ21 Aug 2016 11:51 PM IST
share
ನಿಮ್ಮ ಇಂಟರ್ನೆಟ್ ನಿಧಾನವಾಗಿದೆಯೇ? ನಿಮಗಿದೆ ಶುಭ ಸುದ್ದಿ

ದುರ್ಬಲ ಬ್ರಾಡ್‌ಬ್ಯಾಂಡ್ ವೇಗ ಮತ್ತು ನಿಧಾನಗತಿಯ ಡೌನ್‌ಲೋಡ್‌ಗಳಿಂದ ಕಷ್ಟಪಡುತ್ತಿದ್ದೀರಾ? ಶೀಘ್ರವೇ ಅದು ಬದಲಾಗಲಿದೆ. ಕನಿಷ್ಠ ಬ್ರಾಡ್‌ಬ್ಯಾಂಡ್ ವೇಗವನ್ನು 512 kbps ನಿಂದ (ಸೆಕೆಂಡಿಗೆ ಕಿಲೋಬೈಟ್) 2 mbps ಗೆ (ಸೆಕೆಂಡಿಗೆ ಮೆಗಾಬೈಟ್) ನಾಲ್ಕು ಪಟ್ಟು ಏರಿಸಲು ಕೇಂದ್ರ ಸರ್ಕಾರ ಯೋಜಿಸಿದೆ. ನಾನು ಈ ವಿಷಯವನ್ನು ಸಂಪರ್ಕ ಸಚಿವಾಲಯದ ಗಮನಕ್ಕೆ ತರುತ್ತಿದ್ದೇನೆ. ಕನಿಷ್ಠ ಬ್ರಾಡ್‌ಬ್ಯಾಂಡ್ ವೇಗವನ್ನು ಈಗಿನ ಮಟ್ಟದಿಂದ ಏರಿಸಲು ಹೊಸ ನೀತಿಯನ್ನು ತರಲು ಯೋಜಿಸುತ್ತಿದ್ದೇವೆ ಎಂದು ಐಟಿ ಸಚಿವ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ.

ಭಾರತದಲ್ಲಿ ಸ್ಟಾರ್ಟಪ್ ಪರಿಸರ ಬೆಳೆಯುತ್ತಿರುವಾಗ ಮತ್ತು ಆನ್‌ಲೈನ್ ರಿಟೇಲ್, ಟ್ಯಾಕ್ಸಿಗಳು ಮತ್ತು ಸಾಮಾಜಿಕ ಮಾಧ್ಯಮಗಳು ಸೇರಿದಂತೆ ವಿವಿಧ ಗ್ರಾಹಕ ಸೇವೆಗಳು ಮೊಬೈಲ್ ಫೋನ್, ಆ್ಯಪ್ಸ್ ಮೂಲಕ ಪ್ರಚಾರ ಪಡೆಯುತ್ತಿರುವುದು ಕನಿಷ್ಠ ಇಂಟರ್ನೆಟ್ ವೇಗವನ್ನು ವೈರ್ ಮತ್ತು ವೈರ್ಲೆಸ್ ನೆಟ್ವರ್ಕ್‌ಗಳಲ್ಲಿ ಅಪ್‌ಗ್ರೇಡ್ ಮಾಡಲು ನಿರ್ಧರಿಸಲಾಗಿದೆ. ಹಿಂದಿನ ಬಾರಿ ಕನಿಷ್ಠ ಇಂಟರ್ನೆಟ್ ವೇಗವನ್ನು ಸುಧಾರಿಸಿದ್ದು 2014 ಆಗಸ್ಟಲ್ಲಿ. ಆಗ 256 kbps  ರಿಂದ 512 kbps ಗೆ ಏರಿಸಲಾಗಿತ್ತು. ಔದ್ಯಮಿಕ ತಜ್ಞರ ಪ್ರಕಾರ ಈಗಿನ ವೇಗ ಅತೀ ನಿಧಾನಗತಿಯದು. ಹೀಗಾಗಿ ವೇಗವಾಗಿ ಬೆಳೆಯುತ್ತಿರುವ ಉದ್ಯಮಕ್ಕೆ ಇಂಟರ್ನೆಟ್ ವೇಗ ಏರಿಸುವ ಅಗತ್ಯವಿದೆ. ಈ ನಡೆಯನ್ನು ದೇಶಾದ್ಯಂತ ಟೆಲಿಕಾಂ ನಿರ್ವಾಹಕರು ಸಕಾರಾತ್ಮಕವಾಗಿ ಸ್ವೀಕರಿಸುತ್ತಾರೆ ಎನ್ನುವ ಭರವಸೆಯನ್ನು ರವಿಶಂಕರ್ ಪ್ರಸಾದ್ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಟೆಲಿಕಾಂ ನಿರ್ವಾಹಕರು 4ಜಿ ಸೇವೆ ಕೊಡಲು ಮುಂದಾಗುತ್ತಿದ್ದಾರೆ. ಅದರಲ್ಲಿ 10 mpbs ಡಾಟಾ ವೇಗವನ್ನು ನೀಡುವುದಾಗಿ ಆಶ್ವಾಸನೆ ಕೊಡಲಾಗುತ್ತಿದೆ. 4ಜಿಗೆ ಮುಂದಾಗುವುದು ಮತ್ತು ಸ್ಮಾರ್ಟ್ ಫೋನ್ ಬೆಲೆಗಳು 3,000 ರೂಪಾಯಿಗಳಷ್ಟು ಅಗ್ಗವಾಗುತ್ತಿರುವಾಗ ಸರ್ಕಾರವೂ ವೇಗವನ್ನು ಸುಧಾರಿಸುವ ಅಗತ್ಯ ಕಂಡಿದೆ. ಮುಖ್ಯವಾಗಿ 2.4 ಲಕ್ಷ ಗ್ರಾಮ ಪಂಚಾಯತ್ ಗಳನ್ನು ಫೈಬರ್ ಕೇಬಲ್ ನೆಟ್ವರ್ಕ್‌ನಡಿ ಭಾರತ್‌ನೆಟ್ ಎಂದು ಜೋಡಿಸುವ ಕೆಲಸವಾಗುತ್ತಿರುವಾಗ ವೇಗದ ಅಗತ್ಯವಿದೆ. ವರದಿಯ ಪ್ರಕಾರ ಜಾಗತಿಕವಾಗಿ ದಕ್ಷಿಣ ಕೊರಿಯಾದ ಅಕಾಮೈ ಅತೀ ಹೆಚ್ಚು ವೇಗದ 29 mbps ಇಂಟರ್ನೆಟ್ ಕೊಡುತ್ತದೆ. ನಂತರ ನಾರ್ವೆಯಲ್ಲಿ 21.3 mbps ಮತ್ತು ಸ್ವೀಡನಿನಲ್ಲಿ 20.6 mbps ವೇಗದ ಜಾಲವಿದೆ. ಜಾಗತಿಕ ಸರಾಸರಿ 6.3 mbps ಆಗಿದೆ. ನಾಸ್‌ಕಾಮ್ ಪ್ರಕಾರ ಅಕಾಮೈ ಇಂಡಿಯಾ ಭಾರತದಲ್ಲಿ 2015 ಡಿಸೆಂಬರಿನಲ್ಲಿ 330 ಮಿಲಿಯ ಸ್ಥಿರ ಮತ್ತು ಮೊಬೈಲ್ ಇಂಟರ್ನೆಟ್ ಹೊಂದಿದೆ. ಮುಂದಿನ ಐದು ವರ್ಷಗಳಲ್ಲಿ ಶೇ. 20ರಷ್ಟು ಬೆಳೆಯುವ ನಿರೀಕ್ಷೆಯಿದೆ. 2020ರಲ್ಲಿ 730 ಚಂದಾದಾರರನ್ನು ಅದು ಪಡೆಯುವ ಸಾಧ್ಯತೆಯಿದೆ.

ವೇಗದ ಬ್ರಾಡ್‌ಬ್ಯಾಂಡ್ ಸ್ಪೀಡ್ ಆಗಿರುವ 2 mbps ಗೆ ಈಗಾಗಲೇ ಟ್ರಾಯ್ ಅಂಗೀಕಾರ ನೀಡಿದೆ. ವೇಗದ ಇಂಟರ್ನೆಟ್‌ನಿಂದ ದೇಶದ ಪ್ರಗತಿ ಮತ್ತು ಸ್ಪರ್ಧಾತ್ಮಕ ಪರಿಸರಕ್ಕೆ ನೆರವಾಗಲಿದೆ ಮತ್ತು ಗ್ರಾಮೀಣ ಮತ್ತು ನಗರಗಳೆರಡೂ ಏಕೀಕೃತ ವೇಗದಲ್ಲಿ ಪ್ರಗತಿಯಾಗಲಿದೆ ಎಂದು ಸರ್ಕಾರ ಅಂದಾಜಿಸಿದೆ. ವೇಗವು ಕೆಲವು ಥ್ರೆಶ್‌ಹೋಲ್ಡಿಗಿಂತ ಮೇಲಿರಬೇಕು. ವಿಡಿಯೋ ನೋಡುವುದು ಮತ್ತು ಗೇಮಿಂಗಿಗೆ ಬಳಸಲು ನೆರವಾಗಬೇಕು. ಅಧಿಕ ಇಲೆಕ್ಟ್ರಾನಿಕ್ ಕಮ್ಯುನಿಕೇಶನ್ ವೇಗಗಳು ಜ್ಞಾನ ಆಧರಿತ ಸಮುದಾಯಗಳಲ್ಲಿ ಅಗತ್ಯ. ಇದರಿಂದ ಉತ್ಪಾದನೆ ಹೆಚ್ಚುತ್ತದೆ ಮತ್ತು ಸ್ಪರ್ಧಾತ್ಮಕ ಪರಿಸರವನ್ನು ಸೃಷ್ಟಿಸುತ್ತದೆ ಎಂದು ಟ್ರಾಯ್ ತನ್ನ ವರದಿಯಲ್ಲಿ ಹೇಳಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X