Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ರಿಯೋ ಮ್ಯಾರಥಾನ್ : ಭಾರತೀಯ ಅಥ್ಲೀಟ್ ಗೆ...

ರಿಯೋ ಮ್ಯಾರಥಾನ್ : ಭಾರತೀಯ ಅಥ್ಲೀಟ್ ಗೆ ನೀರು ಕೊಡುವ ಗತಿ ಇಲ್ಲ !

ನಾನು ಸಾಯುವ ಹಂತ ತಲುಪಿದ್ದೆ: ಜೈಶಾ

ವಾರ್ತಾಭಾರತಿವಾರ್ತಾಭಾರತಿ22 Aug 2016 5:27 PM IST
share
ರಿಯೋ ಮ್ಯಾರಥಾನ್ : ಭಾರತೀಯ ಅಥ್ಲೀಟ್ ಗೆ ನೀರು ಕೊಡುವ ಗತಿ ಇಲ್ಲ !

  ರಿಯೋಡಿ ಜನೈರೊ, ಆ.22: ರಿಯೋ ಒಲಿಂಪಿಕ್ಸ್‌ನ ಮಹಿಳೆಯರ ಮ್ಯಾರಥಾನ್‌ನಲ್ಲಿ 42.195 ಕಿ.ಮೀ.ದೂರವನ್ನು ಪೂರೈಸಿದ ಬಳಿಕ ಕುಸಿದು ಬಿದ್ದಿದ್ದ ಭಾರತೀಯ ಅಥ್ಲೀಟ್‌ಗೆ ನೀರು ಕೊಡಲು ಭಾರತದ ಯಾವುದೇ ಅಧಿಕಾರಿಗಳು ಇರಲಿಲ್ಲ ಎಂಬ ಆಘಾತಕಾರಿ ವಿಷಯ ಬಹಿರಂಗವಾಗಿದೆ.

ಭಾರತದ ದೂರದ ಓಟಗಾರ್ತಿ ಒ.ಪಿ. ಜೈಶಾ ಮ್ಯಾರಥಾನ್ ಓಟವನ್ನು ಪೂರೈಸಿದ ತಕ್ಷಣ ಗಂಟಲು ಒಣಗಿಹೋಗಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಆ ಸಂದರ್ಭದಲ್ಲಿ ಕನಿಷ್ಠ ನೀರನ್ನು ಕೊಡಲು ಯಾವೊಬ್ಬ ಭಾರತದ ಅಧಿಕಾರಿಯೂ ಅಲ್ಲಿರಲಿಲ್ಲ ಎಂಬುದನ್ನು ಸ್ವತಃ ಜೈಶಾ ಬಹಿರಂಗಪಡಿಸಿದ್ದಾರೆ.

 ‘‘ ಸ್ಪರ್ಧೆ ಬೆಳಗ್ಗೆ 9 ಗಂಟೆಗೆ ಆರಂಭವಾಗಿತ್ತು. ವಿಪರೀತ ಸೆಖೆಯಿತ್ತು. ಆದರೆ, ನಮ್ಮ ಬಳಿ ನೀರಾಗಲಿ, ಆಹಾರವಾಗಲಿ ಇರಲಿಲ್ಲ. ಸಂಘಟಕರು 8 ಕಿ.ಮೀ.ತಲುಪಿದ ಬಳಿಕ ನೀರು ಕೊಡುತ್ತಾರೆ. ಇದು ಹೆಚ್ಚು ಪ್ರಯೋಜನವಿಲ್ಲ. ಎಲ್ಲ ದೇಶಗಳು ಪ್ರತಿ 2 ಕಿ.ಮೀ. ದೂರದಲ್ಲಿ ಒಂದು ಸ್ಟಾಲ್ ಹೊಂದಿವೆ. ಆದರೆ, ನಮ್ಮ ದೇಶದ ಸ್ಟಾಲ್ ಖಾಲಿಯಾಗಿತ್ತು. ನಮಗೆ ತಾಂತ್ರಿಕ ಅಧಿಕಾರಿಗಳು ನೀರನ್ನು ನೀಡಬೇಕು. ನಾವು ಬೇರ್ಯಾವ ತಂಡದಿಂದಲೂ ನೀರನ್ನು ಸ್ವೀಕರಿಸಬಾರದೆಂಬ ನಿಯಮವಿದೆ. ರೇಸ್ ಮುಗಿದ ಬಳಿಕ ನಾನು ಪ್ರಜ್ಞಾಹೀನಳಾಗಿದ್ದೆ. ನನಗೆ ಏಳು ಬಾಟಲಿ ಗ್ಲುಕೋಸ್ ನೀಡಿ ಶಕ್ತಿ ತುಂಬಲಾಗಿತ್ತು. ನಾನು ಸತ್ತೇ ಹೋಗಿದ್ದೆನೆಂದು ಭಾವಿಸಿದ್ದೆ’’ ಎಂದು ಕೇರಳದ ಅಥ್ಲೀಟ್ ಆಂಗ್ಲ ವಾಹಿನಿಯೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಓಟಗಾರರು ಪ್ರತಿ 2.5 ಕಿ.ಮೀ. ಕ್ರಮಿಸಿದ ಬಳಿಕ ದಣಿವಾರಿಸಿಕೊಳ್ಳಲು ಎಲ್ಲ ದೇಶಗಳ ಅಧಿಕಾರಿಗಳು ನೀರಿನ ಬಾಟಲಿಗಳನ್ನು ನೀಡುತ್ತಾರೆ. ಆದರೆ, ನಮ್ಮ ದೇಶದ ಯಾವೊಬ್ಬ ಅಧಿಕಾರಿಗಳು ನಿರ್ದಿಷ್ಟ ಸ್ಥಳದಲ್ಲ್ಲಿರಲಿಲ್ಲ. ಸಂಘಟಕರು ಪ್ರತಿ 8 ಕಿ.ಮೀ. ಸಾಗಿದಬಳಿಕ ನೀರನ್ನು ಪೂರೈಸುತ್ತಾರೆ. ಕೆಲವೇ ದೂರ ಕ್ರಮಿಸಿದ ಬಳಿಕ ಬಾಯಾರಿಕೆಯಾಯಿತು. ನನಗೆ 30 ಕಿ.ಮೀ. ಸಾಗಿದ ಬಳಿಕ ಓಡಲು ಕಷ್ಟವಾಯಿತು. ವಿಪರೀತ ಉಷ್ಣಾಂಶವೂ ಇದಕ್ಕೆ ಕಾರಣವಾಗಿತ್ತು. ಬಾಯಾರಿಕೆಯಿಂದ ಕುಸಿದು ಬಿದ್ದ ನನಗೆ ಮ್ಯಾರಥಾನ್‌ನ ಸಹಓಟಗಾರರಾದ ಗೋಪಿ ಟಿ. ಹಾಗೂ ಕೋಚ್ ರಾಧಾಕೃಷ್ಣನ್ ನಾಯರ್ ನೆರವಿಗೆ ಬಂದರು. ನನಗೆ ಸಂಪೂರ್ಣ ಚೇತರಿಸಿಕೊಳ್ಳಲು 2-3 ತಿಂಗಳ ಆಯುರ್ವೇದಿಕ್ ಚಿಕಿತ್ಸೆ ಅಗತ್ಯವಿದೆ’’ ಎಂದು ಜೈಶಾ ಹೇಳಿದ್ದಾರೆ.

ಐಎಎಎಫ್ ನಿಯಮದ ಪ್ರಕಾರ ದಣಿವಾರಿಸಿಕೊಳ್ಳುವ ಕೇಂದ್ರದಲ್ಲಿ ತನ್ನದೇ ಅಧಿಕಾರಿಗಳನ್ನು ನಿಯೋಜಿಸುವುದು ಆಯಾ ಫೆಡರೇಶನ್ ಹಾಗೂ ಕೋಚ್‌ಗಳ ಕರ್ತವ್ಯ. ಯಾವೊಬ್ಬ ಅಥ್ಲೀಟ್ ಬೇರೊಂದು ದೇಶದ ಟೇಬಲ್‌ನಲ್ಲಿಟ್ಟ ಪಾನೀಯವನ್ನು ಬಳಸಿದರೆ ಸ್ಪರ್ಧೆಗೆ ಅನರ್ಹಗೊಳಿಸಲಾಗುತ್ತದೆ.

‘‘ನನ್ನ ಪರಿಸ್ಥಿತಿ ನೋಡಿದ ಕೋಚ್ ವೈದ್ಯರುಗಳ ಬಳಿ ರೇಗಾಡಿದ್ದರು. ಕೋಚ್ ನಾನು ಸತ್ತೇ ಹೋಗಿದ್ದೇನೆಂದು ಭಾವಿಸಿದ್ದರಂತೆ. ನನಗೆ ಏನೇ ಆದರೂ ವೈದ್ಯರು ಜವಾಬ್ದಾರಿ ಎಂದು ಹೇಳಿದ್ದ ಕೋಚ್ ವೈದ್ಯರು ನನ್ನ ಕೊಠಡಿಗೆ ಬರದಂತೆ ತಡೆದಿದ್ದರು. ಸ್ಟಾಲ್‌ಗಳಲ್ಲಿ ನೀರನ್ನು ಇಡಲಿಲ್ಲ ಏಕೆ ಎಂದು ಅಧಿಕಾರಿಗಳಲ್ಲಿ ಕೇಳಿದರೆ ಅವರಿಂದ ಸಮರ್ಪಕ ಉತ್ತರ ಬಂದಿಲ್ಲ. ಭಾರತೀಯ ಅಥ್ಲೆಟಿಕ್ ತಂಡದಲ್ಲಿ ತುಂಬಾ ಅಧಿಕಾರಿಗಳಿದ್ದರು. ಯಾರಾದರೊಬ್ಬರು ಈ ಕೆಲಸ ಮಾಡಬಹುದಿತ್ತು ಎಂದು ರಿಯೋ ಮ್ಯಾರಥಾನ್‌ನಲ್ಲಿ 2:47.9 ಸೆಕೆಂಡ್‌ನಲ್ಲಿ ಗುರಿ ತಲುಪಿದ್ದ ಜೈಶಾ ಹೇಳಿದ್ದಾರೆ.

‘‘ಕುಡಿಯುವ ನೀರು ಹಾಗೂ ಶಕ್ತಿಯ ಪಾನೀಯಗಳನ್ನು ನೀಡುವುದು ಆಯೋಜಕರ ಕರ್ತವ್ಯ. ನಮ್ಮ ಅಥ್ಲೀಟ್‌ಗಳಿಗೆ ನಾವು ನೀರು ಇಲ್ಲವೇ ಶಕ್ತಿಯ ಪಾನೀಯ ನೀಡಬಹುದು. ಆದರೆ, ನಮ್ಮಕೋಚ್‌ಗಳು ನಮಗೆ ಈ ಬಗ್ಗೆ ಮಾಹಿತಿ ನೀಡಿರಲಿಲ್ಲ’’ ಎಂದು ಎಎಫ್‌ಐ ಕಾರ್ಯದರ್ಶಿ ಸಿಕೆ ವಾಲ್ಸನ್ ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X